ಉದ್ಯೋಗ ಕಾಯಂಗೊಳಿಸಿಕೊಟ್ಟ ಎಚ್‌ಡಿಕೆಗೆ ವಿಶೇಷ ಚೇತನರಿಂದ ವಿಶೇಷ ಧನ್ಯವಾದ

ಬೆಂಗಳೂರು: ಜೆಡಿಎಸ್‌ ನಾಯಕ ಅವರ ನೆರವಿನಿಂದ ಕಂದಾಯ ಸಹಾಯಕರಾಗಿ ಕಾಯಂ ಉದ್ಯೋಗ ಪಡೆದುಕೊಂಡ ಮಂಗಳವಾರ ಎಚ್‌ಡಿಕೆ ನಿವಾಸಕ್ಕೆ ಆಗಮಿಸಿ ಧನ್ಯವಾದ ಸಲ್ಲಿಸಿದರು. ಉದ್ಯೋಗ ಕಾಯಂಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಆಗಮಿಸಿದ್ದ ವಿಶೇಷ ಚೇತನರು ಕುಮಾರಸ್ವಾಮಿ ಅವರಿಗೆ ಫ್ರೇಮ್‌ ಹಾಕಿಸಿದ್ದ ನೇಮಕಾತಿ ಕಾಯಂ ಪತ್ರ ಹಸ್ತಾಂತರದ ಸಂದರ್ಭದ ಚಿತ್ರವನ್ನು ನೀಡಿದರು. "ನಾನು 2007ರಲ್ಲಿ‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನತಾ ದರ್ಶನದಲ್ಲಿ ಸಹಾಯ ಕೋರಿ ಬಂದಿದ್ದ ವಿಕಲಚೇತನರ ಸಂಕಷ್ಟವನ್ನು ನೋಡಿ 600ಕ್ಕೂ ಹೆಚ್ಚು ವಿಶೇಷ ಚೇತನರನ್ನು ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂದಾಯ ಸಹಾಯಕರನ್ನಾಗಿ ನೇಮಕಾತಿ ಮಾಡಿದ್ದೆ. ಆದರೆ ನಂತರ ಬಂದ ಯಾವ ಸರಕಾರಗಳೂ ಈ ವಿಶೇಷಚೇತನರ ನೇಮಕಾತಿಯನ್ನು ಕಾಯಂಗೊಳಿಸಲು ಸಾಧ್ಯವಾಗಿರಲಿಲ್ಲ. ಮತ್ತೆ ಜನವರಿ 14, 2019 ರಂದು ಇವರೆಲ್ಲರ ನೇಮಕಾತಿಯನ್ನು ಕಾಯಂಗೊಳಿಸಿ‌ ನೇಮಕಾತಿ ಪತ್ರ ನೀಡುವ ಅವಕಾಶ ನನಗೆ ಮುಖ್ಯಮಂತ್ರಿಯಾಗಿ ಒದಗಿ ಬಂತು. ಮುಖ್ಯಮಂತ್ರಿಯಾಗಿ ಮಾನವೀಯ ‌ನೆಲೆಗಟ್ಟಿನಲ್ಲಿ ನಾನು ಮಾಡಿದ ಸಹಾಯಕ್ಕೆ ಒಂದು ವರ್ಷವಾಗಿದೆ ಎಂದು ವಿಶೇಷಚೇತನ ನೌಕರರೆಲ್ಲರೂ ಇಂದು ನನ್ನನು ಭೇಟಿ ಮಾಡಿ ತಮ್ಮ ಧನ್ಯವಾದಗಳನ್ನು ಸಲ್ಲಿಸಲು ನನ್ನ ನಿವಾಸಕ್ಕೆ ಬಂದಿದ್ದರು. ಅವರ ಮುಖದಲ್ಲಿದ್ದ ಸಂತೃಪ್ತಿಯ ನಗುವನ್ನು ನೋಡಿ ಹೃದಯ ತುಂಬಿ ಬಂತು'' ಎಂದು ಎಚ್‌ಡಿ ಕುಮಾರಸ್ವಾಮಿ ಸಂತಸ ವ್ಯಕ್ತ ಪಡಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಬಂದಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಕಾಯಂ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿರುವ ವಿಶೇಷ ಚೇತನರು ಎಚ್‌ಡಿಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ವರದಿಯನ್ನು ಟ್ವೀಟ್‌ ಮೂಲಕ ಹಂಚಿಕೊಂಡಿರುವ ಎಚ್‌ಡಿ ಕುಮಾರಸ್ವಾಮಿ "ಪಕೋಡ ತಯಾರಿಸಲು ಕೂಡ ಈರುಳ್ಳಿ ಕೊಳ್ಳಲೂ ಆರ್ಥಿಕವಾಗಿ ನಿಶಕ್ತರಾಗಿರುವ ನಿರುದ್ಯೋಗಿಗಳ ಕಣ್ಣಲ್ಲೇಕೆ ನೀರು ತರಿಸುವಿರಿ?'' ಎಂದು ಪ್ರಶ್ನೆ ಮಾಡಿದ್ದಾರೆ.


from India & World News in Kannada | VK Polls https://ift.tt/2NqGoEG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...