ಮುಂಬೈ: ಪ್ರವಾಸಿ ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಎಡ ಭುಜಕ್ಕೆ ಪೆಟ್ಟು ಮಾಡಿಕೊಂಡಿರುವ ಮುಂಬೈ ತಂಡದ ಆರಂಭಿಕ ಬ್ಯಾಟ್ಸ್ಮನ್ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ () ಶನಿವಾರ ಆಗಮಿಸಿದ್ದಾರೆ. ಕ್ಷೇತ್ರ ರಕ್ಷಣೆ ವೇಳೆ ಉರುಳಿ ಹೋಗುತ್ತಿದ್ದ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಎಡ ಭುಜಕ್ಕೆ ಗಾಯ ಮಾಡಿಕೊಂಡಿರುವ ಮುಂಬೈನ ಯುವ ಬ್ಯಾಟ್ಸ್ಮನ್, ಬಳಿಕ ಪಂದ್ಯದಲ್ಲಿ ಬ್ಯಾಟಿಂಗ್ ಮಾಡದೆ ಕೂಡಲೇ ಬೆಂಗಳೂರಿಗೆ ಧಾವಿಸಿದರು. ವರದಿಗಳ ಪ್ರಕಾರ 20 ವರ್ಷದ ಆಟಗಾರನ ಎಡ ಭುಜದ ಮಾಂಸಖಂಡವು ಕೊಂಚ ಹರಿದಿದೆ ಎಂದು ತಿಳಿದುಬಂದಿದೆ. ಭಾರತ 'ಎ' ತಂಡ ಇನ್ನೊಂದು ವಾರ ಅಂತರದಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸಕ್ಕಾಗಿ ಶಾ ಅವರ ಹೆಸರನ್ನೂ ಸೇರಿಸಲಾಗಿದ್ದು, ಸೀಮಿತ ಓವರ್ಗಳ ಮತ್ತು 4 ದಿನಗಳ ಪಂದ್ಯಗಳಿಗೆ ಭಾರತ 'ಎ' ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತ 'ಎ' ತಂಡವು ಜನವರಿ 10 ರಂದು ನ್ಯೂಜಿಲೆಂಡ್ಗೆ ಪ್ರಯಾಣ ಬೆಳಸಲಿದೆ. ಆದರೆ, ಆಘಾತಕಾರಿ ಬೆಳವಣಿಗೆಯಲ್ಲಿ ಗಾಯಕ್ಕೆ ತುತ್ತಾಗಿರುವ ಶಾ, ಕಿವೀಸ್ ಪ್ರವಾಸ ಕೈಗೊಳ್ಳುವುದು ಈಗ ಅನುಮಾನವಾಗಿದೆ. ಶುಕ್ರವಾರ, ಗಾಯಗೊಂಡ ಸಂದರ್ಭದಲ್ಲಿ ಮುಬೈ ತಂಡದ ಫಿಸಿಯೋ ಉಪಸ್ಥಿತಿಯಲ್ಲಿ ಪೃಥ್ವಿ ಶಾ ಎಂಆರ್ಐ ಸ್ಕ್ಯಾನ್ಗೆ ಒಳಪಟ್ಟಿದ್ದರು. ಕಳೆದ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಅಭ್ಯಾಸ ಪಂದ್ಯದ ವೇಳೆ ಪಾದದ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರ ಬಿದ್ದ ಪೃಥ್ವಿ ಶಾ ಬಳಿಕ ಬೆನ್ನು ನೋವಿನ ಸಮಸ್ಯೆ ಎದುರಿಸಿ ನಂತರ ಡೋಪಿಂಗ್ ನಿಯಮ ಉಲ್ಲಂಘನೆ ಕಾರಣ 8 ತಿಂಗಳ ಅಮಾನತು ಶಿಕ್ಷೆಗೆಗೂ ಗುರಿಯಾಗಿದ್ದರು. ಆದರೆ, ಕಳೆದ ವರ್ಷದ ಅಂತ್ಯಕ್ಕೆ ಮುಂಬೈ ತಂಡಕ್ಕೆ ಮರಳಿದ ಶಾ, ರಣಜಿಯಲ್ಲೂ ದ್ವಿಶತಕ ಬಾರಿಸಿ ಶ್ರೇಷ್ಠ ಲಯ ಕಂಡುಕೊಂಡಿದ್ದರು. ಇದೀಗ ದುರದೃಷ್ಟವಶಾತ್ ಮರಳಿ ಗಾಯಕ್ಕೆ ತುತ್ತಾಗಿದ್ದಾರೆ. "ಈ ಬಾರಿ ಶಾ ಉತ್ತಮ ಲಯದಲ್ಲಿದ್ದರು. ಕ್ಷೇತ್ರ ರಕ್ಷಣೆ ವೇಳೆ ಅವರು ನೆಲಕ್ಕುರುಳಿಸಿದ ಸಂದರ್ಭದಲ್ಲಿ ಬಹಳ ನೋವನುಭವಿಸಿದರು. ಆದರೆ ನಂತರ ಸುಧಾರಿಸಿದ್ದರು. ಇನ್ನು ಅವರ ಸ್ಥಿತಿಗತಿ ಕುರಿತಾಗಿ ಫಿಸಿಯೋ ಬಳಿ ಕೇಳಿ ತಿಳಿದುಕೊಳ್ಳಬೇಕಿದೆ," ಎಂದು ಘಟನೆಯ ನಂತರ, ಮುಂಬೈ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ನಾಲ್ಕು ದಿನಗಳ ಕಾಲ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ ಮುಂಬೈ ತಂಡ ಎರಡೂ ಇನಿಂಗ್ಸ್ಗಳಲ್ಲಿ ಅನುಭವಿಸಿದ ಬ್ಯಾಟಿಂಗ್ ವೈಫಲ್ಯಕ್ಕೆ ಭಾರಿ ಬೆಲೆ ತೆತ್ತು 5 ವಿಕೆಟ್ಗಳ ಹೀನಾಯ ಸೋಲುಂಡಿದೆ. ಮತ್ತೊಂದೆಡೆ ಮಾಜಿ ಚಾಂಪಿಯನ್ಸ್ ಕರ್ನಾಟಕ ತಂಡ ಈ ಗೆಲುವಿನೊಂದಿಗೆ ಲೀಗ್ ಹಂತದಲ್ಲಿ ಮರಳಿ ಜಯದ ದಾರಿ ಕಂಡುಕೊಂಡಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35jbAfm