ಕರಾವಳಿ-ನೇಪಾಳ ಉಗ್ರ ನಂಟು: ಕೊನೇ ಬಾರಿ ಮುಖ ನೋಡಿಕೊಳ್ಳಿ ಎಂದು ಹೊರಟಿದ್ದ ಜಿಹಾದಿಗಳು

ಗಿರೀಶ್‌ ಕೋಟೆ ಬೆಂಗಳೂರು: ತಮಿಳುನಾಡಿನ ಕ್ಯೂ ಬ್ರಾಂಚ್‌ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ ಮೂವರು ಜಿಹಾದಿಗಳು ಡಿ. 20ರಂದು ಮನೆಯಿಂದ ಹೊರಡುವಾಗ 'ಇದೇ ಕೊನೆ ಬಾರಿ ನಮ್ಮ ಮುಖ ನೋಡಿಕೊಳ್ಳಿ. ಮತ್ತೆ ನಮ್ಮ ಮುಖ-ದೇಹ ಎರಡೂ ನಿಮಗೆ ಸಿಗುವುದಿಲ್ಲ' ಎಂದು ಹೇಳಿ ಹೊರಟಿದ್ದರು! ಮೊಹಮದ್‌ ಹನೀಫ್‌ ಖಾನ್‌ (29), ಇಮ್ರಾನ್‌ ಖಾನ್‌ (32) ಹಾಗೂ ಗನಿ ಮೊಹಮ್ಮದ್‌ ಝೈದ್‌ (24) ಬಂಧಿತ ಜಿಹಾದಿಗಳು. ಈ ಮೂವರೂ ನಕಲಿ ದಾಖಲೆಗಳ ಆಧಾರದಲ್ಲಿನೇಪಾಳ ಮೂಲಕ ವಿದೇಶಕ್ಕೆ ಹಾರಲು ಎಲ್ಲಾಸಿದ್ಧತೆ ಮಾಡಿಕೊಂಡಿದ್ದರು. ಇವರು 2014ರ ಜುಲೈ 18ರಂದು ತಮಿಳುನಾಡಿನಲ್ಲಿ ನಡೆದಿದ್ದ ಹಿಂದೂ ಮುನ್ನಾಣಿ ಸಂಘಟನೆಯ ನಾಯಕ ಕೆ.ಪಿ.ಎಸ್‌.ಸುರೇಶ್‌ಕುಮಾರ್‌ ಕೊಲೆಯ ಪ್ರಮುಖ ಆರೋಪಿಗಳಾಗಿದ್ದರು. ಡಿಸೆಂಬರ್‌ ಕೊನೆಯ ವಾರದಲ್ಲಿ ತಮ್ಮ ಮನೆಗೆ ಕೊನೆಯ ಭೇಟಿ ನೀಡಿ ಮತ್ತೆಂದೂ ನಮ್ಮ ಮುಖ ನಿಮಗೆ ಸಿಗುವುದಿಲ್ಲಎಂದು ಹೇಳಿ ಹೊರಟು ಬಿಟ್ಟಿದ್ದರು. ತಕ್ಷಣ ಈ ಮಾಹಿತಿ ಹಿಡಿದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕ್ಯೂ ಬ್ರಾಂಚ್‌ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಬಳಿಕ ಇವರ ಜಾಡನ್ನು ಹುಡುಕಿ ಹೊರಟ ಅಧಿಕಾರಿಗಳು ಮೂವರನ್ನೂ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಹನ್ನೆರಡು ಮಂದಿಯ ಗ್ಯಾಂಗ್‌ ತಮಿಳುನಾಡಿನಲ್ಲಿಆಳವಾಗಿ ಬೇರು ಬಿಟ್ಟಿರುವ ಅಲ್‌-ಉಮ್ಮಾ ಸಂಘಟನೆ ಜತೆಗೆ ಸಂಪರ್ಕ ಹೊಂದಿದ್ದ ಉಗ್ರರ ತಂಡ ಈ ಹಿಂದೆ ಜಯಲಲಿತಾ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಆಗಷ್ಟೇ ತಲೆ ಎತ್ತುತ್ತಿದ್ದ 'ಹಿಂದೂ ಮುನ್ನಾಣಿ' ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರನ್ನು ಸರಣಿಯಾಗಿ ಕೊಲೆ ಮಾಡಿದ್ದರು. ಅವರಲ್ಲಿ ಕೊನೆಯದಾಗಿ ನಡೆದದ್ದು ಕೆ.ಪಿ.ಎಸ್‌.ಸುರೇಶ್‌ಕುಮಾರ್‌ ಕೊಲೆ. ಈ ಕೊಲೆ ಬಳಿಕ ಇಡೀ ಸಂಘಟನೆಯನ್ನು ಕ್ಯೂ ಬ್ರಾಂಚ್‌ ಪೊಲೀಸರು ಜಾಲಾಡಿ 8 ಮಂದಿಯನ್ನು ಬಂಧಿಸಿದ್ದರು. ಅವರಲ್ಲಿಐದು ಮಂದಿಗೆ ಜೀವಾವಧಿ ಶಿಕ್ಷೆ ಆಗಿ. ಉಳಿದ ಮೂವರು ಜಾಮೀನು ಪಡೆದು ಹೊರಗಿದ್ದವರು ಡಿಸೆಂಬರ್‌ ಮೂರನೇ ವಾರದಲ್ಲಿ'ಜಿಹಾದಿ'ಗಳಾಗುವ ಉದ್ದೇಶದಿಂದ ಮನೆಯಿಂದ ಹೊರಟರಾದರೂ ದೇಶ ಬಿಡುವುದರೊಳಗೆ ಮತ್ತೆ ಬಂಧಿತರಾಗಿದ್ದಾರೆ. ದೇಶ ಬಿಟ್ಟು ತೆರಳು ಸಿದ್ಧರಾಗಿದ್ದವರಲ್ಲಿ12 ಮಂದಿ ಜಿಹಾದಿಗಳಿದ್ದಾರೆ. ಅವರಲ್ಲಿಸದ್ಯ ಬೆಂಗಳೂರಿನಲ್ಲಿ ಬಂಧಿತರಾದ ಮೂವರು ಸೇರಿ ದಿಲ್ಲಿಮತ್ತು ನಾನಾ ಕಡೆ 8 ಮಂದಿ ಬಂಧಿಸಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗೋರಖ್‌ಪುರದಿಂದ ಮೂವರೂ ಜಿಹಾದಿಗಳು ಮಹಾರಾಷ್ಟ್ರಕ್ಕೆ ಹೋಗಿದ್ದರು. ಅಲ್ಲಿಂದ ಗೋರಖ್‌ಪುರ ತಲುಪಿ ರಸ್ತೆ ಮಾರ್ಗವಾಗಿ ಸೋನಾಲಿ ಗಡಿ ಮೂಲಕ ನೇಪಾಳ ತಲುಪಿದ್ದರು. ಇಲ್ಲಿಐಸಿಸ್‌ ಸಂಘಟನೆಯ ಮುಖಂಡನೊಬ್ಬನನ್ನು ಭೇಟಿ ಮಾಡಿ ವಾಪಸ್‌ ಮಹಾರಾಷ್ಟ್ರ ತಲುಪಿ ಮುಂಬೈ ಮೂಲಕ ಮಂಗಳೂರಿಗೆ ಬಂದು ರಸ್ತೆ ಮಾರ್ಗವಾಗಿ ಆಗುಂಬೆ, ತಿರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗ ದಾಟಿ ಬೆಂಗಳೂರಿಗೆ ಬಂದಿದ್ದರು. ಇನ್ನು ಕೆಲವು ದಿನಗಳಲ್ಲಿ ಬೆಂಗಳೂರಿನಿಂದ ನಕಲಿ ದಾಖಲೆಗಳನ್ನು ಸಂಗ್ರಹಿಸಿಕೊಂಡು ವಿದೇಶಕ್ಕೆ ಪರಾರಿ ಆಗುವ ಸಿದ್ಧತೆಯಲ್ಲಿದ್ದಾಗಲೇ ನೆರಳಿನಂತೆ ಬೆನ್ನತ್ತಿ ಬಂದಿದ್ದ ಕ್ಯೂ ಬ್ರಾಂಚ್‌ ಅಧಿಕಾರಿಗಳ ತಂಡ ಮೂವರನ್ನೂ ಬಂಧಿಸಿ ಚೆನ್ನೈಗೆ ಕರೆದುಕೊಂಡು ಹೋಗಿದೆ. ಎಸ್‌ಐ ವಿಲ್ಸನ್‌ ಕೊಂದಿದ್ದೂ ಇದೇ ಗ್ಯಾಂಗ್‌? ಜ.7ರಂದು ಬೆಂಗಳೂರಿನಲ್ಲಿಮೂವರು ಜಿಹಾದಿಗಳ ಬಂಧನ ಆಗುತ್ತಿದ್ದಂತೆ ಇವರ ವಿಚಾರಣೆಯಿಂದ ಉಳಿದ ಜಿಹಾದಿಗಳ ಸುಳಿವು ಎನ್‌ಐಎ ಅಧಿಕಾರಿಗಳಿಗೆ ಸಿಗುತ್ತಿತ್ತು. ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಉಗ್ರ ನಿಗ್ರಹ ದಳ ಅಧಿಕಾರಿಗಳು ಮೂರೂ ರಾಜ್ಯಗಳಲ್ಲಿಆರೋಪಿಗಳ ಬಂಧನಕ್ಕೆ ಬಲೆ ಬೀಸಿ ಅಲರ್ಟ್‌ ಆಗಿದ್ದ ಸಂದರ್ಭದಲ್ಲೇ ಜ.8ರ ರಾತ್ರಿ ತಮಿಳುನಾಡು ಕೇರಳ ಗಡಿಯ ಕಲಿಯಿಕ್ಕಾವಿಲ ಚೆಕ್‌ಪೋಸ್ಟ್‌ನಲ್ಲಿ ಶೂಟೌಟ್‌ ನಡೆಯಿತು. ಸ್ಪೆಷಲ್‌ ಸಬ್‌ ಇನ್ಸ್‌ಪೆಕ್ಟರ್‌ ವಿಲ್ಸನ್‌ ಅವರನ್ನು ಇಬ್ಬರು ಗುಂಡಿಟ್ಟು ಕೊಂದು ಪರಾರಿ ಆದರು. ಈ ಚೆಕ್‌ಪೋಸ್ಟ್‌ ಮೂಲಕ ಹಾದು ಹೋಗುವ ಎಲ್ಲಾವಾಹನಗಳನ್ನೂ ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಮಾರ್ಗದಲ್ಲಿಬಂದ ಮಹೀಂದ್ರ ಸ್ಕಾರ್ಪಿಯೋದಿಂದ ಇಳಿದ ಇಬ್ಬರು ಗುಂಡು ಹಾರಿಸಿ ವಿಲ್ಸನ್‌ ಅವರನ್ನು ಹತ್ಯೆಗೈದು ಪರಾರಿ ಆದರು. ಗುಂಡು ಹಾರಿಸಿದವರು ಅಬ್ದುಲ್‌ ಶಮೀಮ್‌ ಮತ್ತು ತೌಫೀಕ್‌ ಎಂದು ಎನ್‌ಐಎ ಮತ್ತು ಕ್ಯೂ ಬ್ರಾಂಚ್‌ ಅಧಿಕಾರಿಗಳು ಸಂಶಯಿಸಿದ್ದಾರೆ. ಈ ಇಬ್ಬರೂ ಕೂಡ ಬೆಂಗಳೂರಿನಲ್ಲಿಬಂಧಿತರಾದ ಜಿಹಾದಿಗಳ ಗ್ಯಾಂಗ್‌ಗೇ ಸೇರಿದ್ದಿರಬಹುದು ಎನ್ನುವ ಸಂಶಯವೂ ಇದ್ದು, ಇವರು ತಪ್ಪಿಸಿಕೊಳ್ಳುವ ಸಲುವಾಗಿಯೇ ವಿಲ್ಸನ್‌ ಅವರನ್ನು ಕೊಂದು ಪರಾರಿ ಆಗಿರಬಹುದು ಎನ್ನಲಾಗುತ್ತಿದೆ.


from India & World News in Kannada | VK Polls https://ift.tt/2tRKcYA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...