ಇಂದೋರ್: ಭಾರತ ತಂಡದ ಬಲಗೈ ಆರಂಭಿಕ ಬ್ಯಾಟ್ಸ್ಮನ್ ಸದ್ಯ ಅದ್ಭುತ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಕಳೆದ ವೆಸ್ಟ್ಇಂಡೀಸ್ ಸರಣಿಯಲ್ಲಿನ ಉತ್ತಮ ಫಾರ್ಮ್ ಅನ್ನು ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಮುಂದುವರಿಸಿದ್ದಾರೆ. ಪರಿಣಾಮ ಲಂಕಾ ವಿರುದ್ಧ ಎರಡನೇ ಪಂದ್ಯದಲ್ಲಿ ಗೆಲುವು ಬಾರಿಸಿರುವ ಟೀಮ್ ಇಂಡಿಯಾ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. 143 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಕೆಎಲ್ ರಾಹುಲ್ ಹಾಗೂ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 9.1 ಓವರ್ಗಳಲ್ಲಿ 71 ರನ್ಗಳ ಜೊತೆಯಾಟ ನೀಡಿದರು. ಈ ಪೈಕಿ ಧವನ್ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿದರೆ ಕೆಎಲ್ ರಾಹುಲ್ ಬಿರುಸಿನ ಆಟದ ಮೂಲಕ ಗಮನ ಸೆಳೆದರು. ಲಂಕಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ರಾಹುಲ್ ಕೇವಲ 32 ಎಸೆತಗಳಲ್ಲಿ ಆರು ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿದರು. ಆಕರ್ಷಕ ಬ್ಯಾಟಿಂಗ್ ಮೂಲಕ ಬಹಳ ಸಲೀಸಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮುಂಬರುವ ವಿಶ್ವಕಪ್ ರೇಸ್ನಲ್ಲಿ ಜತೆಗೆ ಓಪನರ್ ಸ್ಥಾನಕ್ಕಾಗಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಜೊತೆಗೆ ನಿಕಟ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಶಿಖರ್ ಧವನ್ ವಿರುದ್ದ ಯಾವುದೇ ರೀತಿಯ ಪೈಪೋಟಿಗಿಳಿದಿಲ್ಲ ಎಂಬುದನ್ನು ರಾಹುಲ್ ಸ್ಪಷ್ಟಪಡಿಸಿದರು. ದೇಶಕ್ಕಾಗಿ ಪಂದ್ಯ ಗೆಲ್ಲುವ ಸುಲಭ ಯೋಜನೆಯೊಂದಿಗೆ ನಾವೆಲ್ಲರೂ ಆಡುತ್ತಿದ್ದೇವೆ ಎಂದರು. ಅದೇ ಹೊತ್ತಿಗೆ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ನಡುವೆ ಯಾರು ಅತ್ಯುತ್ತಮ ಜೊತೆಗಾರ ಎಂಬುದಕ್ಕೆ ಉತ್ತರವಾಗಿ ಇಬ್ಬರು ಶ್ರೇಷ್ಠ ಆರಂಭಿಕರು ಎಂದು ರಾಹುಲ್ ಉತ್ತರಿಸಿದರು. "ರೋಹಿತ್ ಶರ್ಮಾ ಬ್ಯಾಟಿಂಗ್ ಅನ್ನು ತುಂಬಾನೇ ಸುಲಭಗೊಳಿಸುತ್ತಾರೆ. ಮಗದೊಂದು ತುದಿಯಿಂದ ರೋಹಿತ್ ಸೊಗಸಾದ ಬ್ಯಾಟಿಂಗ್ ಆನಂದಿಸುತ್ತೇನೆ. ಇನ್ನೊಂದೆಡೆ ನಾನವತ್ತೂ ಶಿಖರ್ ಧವನ್ ಜತೆ ಬ್ಯಾಟಿಂಗ್ ಮಾಡಿದ್ದೇನೆ. ವಿಶೇಷವಾಗಿಯೂ ನನ್ನ ಟೆಸ್ಟ್ ಕೆರಿಯರ್ ಶಿಖರ್ ಧವನ್ ಜತೆ ಆರಂಭಿವಾಗಿದೆ. ನಾವಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ನಾನು ಇಬ್ಬರ ಜೊತೆಗೂ (ರೋಹಿತ್ ಹಾಗೂ ಶಿಖರ್) ಬ್ಯಾಟಿಂಗ್ ಮಾಡುವುದನ್ನು ಆನಂದಿಸುತ್ತೇನೆ" ಎಂದರು. ಈ ಮಧ್ಯೆ ಓಪನರ್ ಸ್ಥಾನಕ್ಕಾಗಿ ಮೂವರು ಪ್ರಮುಖ ಬ್ಯಾಟ್ಸ್ಮನ್ಗಳ ನಡುವಣ ಆರೋಗ್ಯಕರ ಪೈಪೋಟಿಯು ತಂಡದ ಪಾಲಿಗೆ ಉತ್ತಮವಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಅದೇ ಹೊತ್ತಿಗೆ ಮುಂಬರುವ ವಿಶ್ವಕಪ್ ಹಿನ್ನೆಲೆಯಲ್ಲಿ ಪ್ರಮುಖ ನಾಲ್ವರು ಬ್ಯಾಟ್ಸ್ಮನ್ಗಳನ್ನು ಹೊರತುಪಡಿಸಿ ಒತ್ತಡವನ್ನು ನಿಭಾಯಿಸಿ ಪಂದ್ಯ ಗೆಲ್ಲಿಸಬಲ್ಲ ಯುವ ಆಟಗಾರರನ್ನು ಹುಡುಕಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36zatJV