‘ದೇಶ ಒಡೆಯುವ ಮುನ್ನ ಈ ಪುಸ್ತಕ ಓದಿ’: 'ಗಣರಾಜ್ಯೋತ್ಸವ'ದಂದೇ ಪ್ರಧಾನಿಗೆ ಸಂವಿಧಾನ ರವಾನಿಸಿದ ಕಾಂಗ್ರೆಸ್‌..!

ಹೊಸ ದಿಲ್ಲಿ: ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಪುಸ್ತಕವನ್ನು ರವಾನಿಸಿದೆ. ‘ದೇಶವನ್ನು ಒಡೆಯುವ ಮುನ್ನ ಈ ಪುಸ್ತಕವನ್ನು ಓದಿ’ ಎಂದು ಪ್ರಧಾನಿಗೆ ಕಾಂಗ್ರೆಸ್‌ ಆಗ್ರಹಿಸಿದೆ. ‘ಆತ್ಮೀಯ ಪ್ರಧಾನ ಮಂತ್ರಿಗಳೇ. ಸಂವಿಧಾನದ ಪುಸ್ತಕ ಶೀಘ್ರದಲ್ಲೇ ನಿಮ್ಮನ್ನು ತಲುಪಲಿದೆ. ದೇಶವನ್ನು ಒಡೆಯುವ ಕಾರ್ಯದ ನಡುವೆ ನಿಮಗೆ ಬಿಡುವು ಸಿಕ್ಕರೆ ಈ ಪುಸ್ತಕವನ್ನು ತಪ್ಪದೇ ಓದಿ' ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಂದೇಶ ರವಾನಿಸಿದೆ. ಅಷ್ಟೇ ಅಲ್ಲ, ಆನ್‌ಲೈನ್‌ ಮೂಲಕ ಪುಸ್ತಕ ಖರೀದಿಸಿದ ಹಾಗೂ ಅದು ರವಾನೆಯಾಗುವ ಮಾಹಿತಿಯನ್ನೂ ಟ್ವಿಟ್ಟರ್‌ನಲ್ಲೇ ಲಗತ್ತಿಸಿದೆ. ಭಾನುವಾರ ಗಣರಾಜ್ಯೋತ್ಸವದ ದಿನದಂದೇ ಕಾಂಗ್ರೆಸ್ ಪಕ್ಷ ಸಂವಿಧಾನದ ಪುಸ್ತಕವನ್ನು ಪ್ರಧಾನಿಗೆ ರವಾನಿಸಿ ಗಮನ ಸೆಳೆದಿದೆ. ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡಾ ಭಾನುವಾರ ಬೆಳಗ್ಗೆಯಷ್ಟೇ ಇಂಥದ್ದೇ ಒಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ‘71ನೇ ಗಣರಾಜ್ಯೋತ್ಸವದ ದಿನದಂದು ನಾವು ಪ್ರಮಾಣ ವಚನ ಸ್ವೀಕರಿಸೋಣ. ನಾವು ನಿರಂತರವಾಗಿ ನ್ಯಾಯಕ್ಕಾಗಿ ಹೋರಾಟ ಮಾಡೋಣ. ನಾವು ಸ್ವತಂತ್ರರಾಗಿ ಇರಬೇಕಾದ್ದು ಜನ್ಮಸಿದ್ಧ ಹಕ್ಕು. ನ್ಯಾಯ ಹಾಗೂ ಸಮಾನತೆಯ ಸಿದ್ದಾಂತದ ಹಾದಿಯಲ್ಲಿ ನಡೆಯೋಣ. ಸಹೋದರತ್ವದ ಕಿಡಿಯನ್ನು ಜೀವಂತವಾಗಿ ಇಡೋಣ. ಪ್ರಶ್ನೆ ಮಾಡೋದು, ವಿರೋಧ ಮಾಡೋದು ನಮ್ಮ ಸಂವಿಧಾನಾತ್ಮಕ ಕರ್ತವ್ಯ ಅನ್ನೋದನ್ನು ಸರ್ಕಾರ ನೆನಪಿಸಿಕೊಳ್ಳಲಿ’ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟಿಸಿದ್ಧಾರೆ. ಹಿಂದಿಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ. ಪೌರತ್ವ ತಿದ್ದುಪಡಿ ವಿಧೇಯಕವನ್ನು ಬಿಜೆಪಿ ಸಂಸತ್‌ನಲ್ಲಿ ಮಂಡಿಸಿದ ದಿನದಿಂದಲೇ ವಿರೋಧ ಮಾಡುತ್ತಾ ಬಂದಿರುವ ಕಾಂಗ್ರೆಸ್‌, ಜಾರಿಯಾದ ಬಳಿಕವೂ ತನ್ನ ವಿರೋಧವನ್ನು ಮುಂದುವರೆಸಿದೆ. ಈ ಕಾಯ್ದೆ ದೇಶದ ಜಾತ್ಯತೀತ ನಿಲುವಿಗೆ ವಿರುದ್ಧವಾದದ್ದು ಎಂದು ಕಾಂಗ್ರೆಸ್ ವಾದಿಸುತ್ತಾ ಬಂದಿದೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಹಾಗೂ ರಾಜಸ್ತಾನ ರಾಜ್ಯಗಳ ವಿಧಾನಸಭೆಯಲ್ಲಿ ಸಿಎಎ ಜಾರಿ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶಗಳಿಂದ ಡಿಸೆಂಬರ್ 31, 2014ರ ಒಳಗೆ ಭಾರತಕ್ಕೆ ಬಂದಿರುವ ಹಿಂದೂ, ಸಿಖ್, ಜೈನ್, ಪಾರ್ಸಿ, ಬೌದ್ಧ ಹಾಗೂ ಕ್ರೈಸ್ತ ಧರ್ಮೀಯರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತದ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ಈ ಕಾಯ್ದೆಯನ್ವಯ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮರಿಗೆ ಪೌರತ್ವ ಸಿಗೋದಿಲ್ಲ ಎಂಬ ವಿಚಾರ ಕಾಂಗ್ರೆಸ್ ಪಕ್ಷವನ್ನು ಕೆರಳಿಸಿದೆ. ಆದ್ರೆ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶಗಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾಗಿದ್ದು, ಆ ರಾಷ್ಟ್ರಗಳಲ್ಲಿ ಧಾರ್ಮಿಕವಾಗಿ ಹಿಂಸೆಗೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪ್ರಭುತ್ವ ಕೊಡುತ್ತಿದ್ದೇವೆ ಅನ್ನೋದು ಬಿಜೆಪಿ ವಾದವಾಗಿದೆ.


from India & World News in Kannada | VK Polls https://ift.tt/2GnVlUb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...