ತೆಹ್ರಾನ್: ಇರಾನ್ನ ಉನ್ನತ ಸೇನಾಧಿಕಾರಿ ವೇಳೆ ನಡೆದ ಕಾಲ್ತುಳಿತದಲ್ಲಿ ಬರೋಬ್ಬರಿ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸತತ ನಾಲ್ಕನೇ ದಿನ ಸುಲೈಮಾನಿ ಅಂತಿಮ ಯಾತ್ರೆ ನಡೆಯುತ್ತಿದ್ದು, ಮಂಗಳವಾರ ಆತನ ತವರು ನೆಲ ಕೆರ್ಮಾನ್ನಲ್ಲಿ ನಡೆದ ಶವ ಯಾತ್ರೆ ವೇಳೆ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿ 48ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಲೈಮಾನಿ ಅಂತಿಮ ಯಾತ್ರೆಗೆ ಕಳೆದ ಮೂರು ದಿನಗಳಿಂದ ಹತ್ತಾರು ಲಕ್ಷ ಜನರು ಹರಿದು ಬರುತ್ತಿದ್ದಾರೆ. ಸೋಮವಾರ ರಾಜಧಾನಿ ತೆಹ್ರಾನ್ನಲ್ಲಿ ನಡೆದ ಅಂತಿಮ ಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸ್ವತಃ ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲ್ ಖಮೇನಿ ಅಂತಿಮ ಯಾತ್ರೆ ವೇಳೆ ಕಣ್ಣೀರು ಹಾಕಿದ್ದರು. ಮಂಗಳವಾರ ಕೆರ್ಮನ್ನಲ್ಲಿ ದಫನಕ್ಕೂ ಮುನ್ನ ನಡೆದ ಯಾತ್ರೆಯಲ್ಲಿ ಲಕ್ಷಾಂತರ ಜನರು ಸೇರಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ.
ಇರಾನ್ನ ಇಸ್ಲಾಮಿಕ್ ರಿವಲ್ಯೂಷನರಿ ಕೋರ್ನ ಕುದ್ಸ್ ಫೋರ್ಸ್ ಮುಖ್ಯಸ್ಥನಾಗಿದ್ದ ಸುಲೈಮನಿಯನ್ನು ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದ ಸಮೀಪ ಡ್ರೋನ್ ದಾಳಿ ನಡೆಸಿ ಅಮೆರಿಕಾ ಹತ್ಯೆ ಮಾಡಿತ್ತು. ಸೆಲೆಬ್ರಿಟಿ ಸೇನಾಧಿಕಾರಿ, ರಾಷ್ಟ್ರೀಯ ಹೀರೋ ಸೊಲೈಮನಿ ಸಾವಿಗೆ ಇರಾನಿಯನ್ನರು ಕಂಬನಿ ಮಿಡಿದಿದ್ದಲ್ಲದೆ, ಅಮೆರಿಕಾ ವಿರುದ್ಧ ತೀವ್ರ ಆಕ್ರೋಶವನ್ನೂ ಹೊರಹಾಕಿದ್ದಾರೆ. ಜೊತೆಗೆ ಪ್ರಧಾನಿ, ಸರ್ವೋಚ್ಛ ನಾಯಕರಾದಿಯಾಗಿ ದೊಡ್ಡಣ್ಣನ ವಿರುದ್ಧ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದ್ದಾರೆ.
from India & World News in Kannada | VK Polls https://ift.tt/2N3MvyA