ಪುಣೆ: ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅದ್ದೂರಿಯಾಗಿ ಗೆದ್ದ ವಿಶ್ವಾಸದಲ್ಲಿರುವ ಭಾರತ ತಂಡ ಶುಕ್ರವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಣಾಹಣಿಯಲ್ಲಿ ವಿಜಯಮಾಲೆ ಹಾಕಿಸಿಕೊಳ್ಳುವ ತವಕದಲ್ಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿರುವ ಭಾರತಕ್ಕೆ ಈ ಪಂದ್ಯದಲ್ಲಿ ಜಯಿಸುವುದು ಕಷ್ಟವೇನಲ್ಲ. ಆದರೆ, ವೇಗಿ ಲಸಿತ್ ಮಾಲಿಂಗ ನೇತೃತ್ವದ ಶ್ರೀಲಂಕಾ ಪಡೆ ಏಕಾಏಕಿ ಸಿಡಿದೇಳದಂತೆ ಎಚ್ಚರ ವಹಿಸುವ ಜರೂರತ್ತಿದೆ. ಎರಡನೇ ಪಂದ್ಯದಲ್ಲಿ ಭಾರತ ತಂಡದ ಪ್ರದರ್ಶನ ಆಶಾದಾಯಕವಾಗಿತ್ತು. ಎದುರಾಳಿ ಯಾವುದೇ ಕ್ಷಣದಲ್ಲೂ ಚೇತರಿಸಿಕೊಳ್ಳದಂತೆ ನೋಡಿಕೊಂಡಿತಲ್ಲದೆ ಯಾವುದೇ ಗೊಂದಲವಿಲ್ಲದೆ ಅಧಿಕಾರಯುತವಾಗಿ ಬಗ್ಗು ಬಡಿಯಿತು. ಕೊಹ್ಲಿ ಬಳಗದ ಪ್ರತಿಯೊಬ್ಬ ಸದಸ್ಯಧಿ ನಿಗೂ ಜಯದ ಶ್ರೇಯಸ್ಸು ದೊರೆಯುತ್ತದೆ. ಬೌಲಿಂಗ್ನಲ್ಲಿ ಬಲಾಢ್ಯ: ಕಳೆದ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಿರುವ ಜಸ್ಪ್ರಿತ್ ಬುಮ್ರಾ ಅವರದ್ದು ‘ಯಶಸ್ವಿ ಮರುಪ್ರವೇಶ’ ಎನಿಸಿಕೊಳ್ಳಲಿಲ್ಲ. ಬ್ಯಾಟ್ಸ್ಧಿಮನ್ಗಳಿಗೆ ಧಾರಾಳವಾಗಿ ರನ್ ಬಿಟ್ಟುಕೊಟ್ಟರು. ನಿರ್ಣಾಯಕ ಸಂದರ್ಭಗಳಲ್ಲಿ ಒತ್ತಡ ಹೇರುವಲ್ಲಿಯೂ ವಿಫಲರಾದರು. ಆದಾಗ್ಯೂ, ಗಾಯಾಳುವಾಗಿ ವಿಶ್ರಾಂತಿಯಲ್ಲಿದ್ದ ಅವಧಿಯಲ್ಲಿ ಬೌಲಿಂಗ್ ಕಸುವು ಕಳೆದುಕೊಂಡಿಲ್ಲ ಎಂಬುದನ್ನು ಇಂದೋರ್ನ ಸಪಾಟಾದ ಪಿಚ್ನಲ್ಲಿ ಬುಮ್ರಾ ಖಾತ್ರಿ ಪಡಿಸಿದರು. ಇದೇ ವೇಳೆ, ದಿಲ್ಲಿ ವೇಗಿ ನವದೀಪ್ ಸೈನಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಭರ್ಜರಿ ಭರವಸೆ ಮೂಡಿಸಿದ್ದಾರೆ. 4 ಓವರ್ ಗಳಲ್ಲಿ ಕೇವಲ 18 ರನ್ ವೆಚ್ಚದಲ್ಲಿ 2 ವಿಕೆಟ್ ಪಡೆದ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠರಾಗಿ ಪುರಸ್ಕೃತಗೊಂಡಿದ್ದರು. ಸೈನಿಯ ತೋಳ್ಬಲವನ್ನು ಸಮರ್ಥಿಸುವ ಹಿರಿಯ ಆಟಗಾರರಿಗೆ ಇದು ಖುಷಿಯ ಸಂಗತಿ. ಅಂತೆಯೇ ಕುಲ್ದೀಪ್ ಹಾಗೂ ಶಾರ್ದುಲ್ ಠಾಕೂರ್ ಕೂಡ ಕೆಲವು ವಿಕೆಟ್ ಉರುಳಿಸಿ ವಿಶ್ವಾಸ ಮೂಡಿಸಿದರು. ಕೆ.ಎಲ್ ರಾಹುಲ್ ಆನೆಬಲ: ಆರಂಭಿಕ ಬ್ಯಾಟ್ಸ್ಮನ್ ಆಯ್ಕೆ ಪರೀಕ್ಷೆಯಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ ಮತ್ತೊಮ್ಮೆ ಉತ್ತೀರ್ಣರಾಗಿದ್ದಾರೆ. 142 ರನ್ಗಳ ಸವಾಲು ಬೆನ್ನಟ್ಟುವ ಹಾದಿಯಲ್ಲಿ ಈ ಕಲಾತ್ಮಕ ಬ್ಯಾಟ್ ್ಸಮನ್ ವೈಯಕ್ತಿಕವಾಗಿ 45 ರನ್ಗಳ ಕೊಡುಗೆ ನೀಡುವುದರ ಜತೆಗೆ ಶಿಖರ್ ಧವನ್ ಜತೆ ಮೊದಲ ವಿಕೆಟಿಗೆ 71 ರನ್ಗಳ ಜತೆಯಾಟವನ್ನೂ ಕಟ್ಟಿಕೊಟ್ಟರು. ತಂಡಕ್ಕೆ ಮರು ಪ್ರವೇಶ ಮಾಡಿರುವ ಶಿಖರ್ ಧವನ್ ‘ಜಸ್ಟ್ ಪಾಸ್’ ಆಗಿದ್ದಾರೆ. ರನ್ ಗಳಿಕೆಯ ವೇಗವನ್ನು ಅವರು ವೃದಿಟಛಿಸಿಕೊಳ್ಳಬೇಕಾಗಿದೆ. ಬ್ಯಾಟಿಂಗ್ ವಿಭಾಗದ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ವಿರಾಟ್ ಕೊಹ್ಲಿ ಬಗ್ಗೆ ಅವಿಶ್ವಾಸದ ಮಾತೇ ಇಲ್ಲ. ಇನ್ನು ಶ್ರೇಯಸ್ ಅಯ್ಯರ್ ಬಗ್ಗೆ ಹೇಳಬೇಕೆಂದರೆ, ಒಂದು ಸ್ಥಾನ ಬಡ್ತಿ ಕೊಟ್ಟರೂ ಅದಕ್ಕೆ ಪೂರಕ ಪ್ರದರ್ಶನ ನೀಡಬಲ್ಲೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ದಾಖಲೆಯ ಹೊಸ್ತಿಲಲ್ಲಿ ಬುಮ್ರಾ: ವೇಗಿ ಬುಮ್ರಾ ಇಂದು ಒಂದು ವಿಕೆಟ್ ಪಡೆದರೆ ಟಿ20 ಮಾದರಿಯಲ್ಲಿ ಒಟ್ಟು 53 ವಿಕೆಟ್ ಉರುಳಿಸಿದಂತಾಗಲಿದೆ. ಅದು ಟಿ20 ಮಾದರಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಸಾಧನೆ ಎನಿಸಿಕೊಳ್ಳಲಿದೆ. ಬುಮ್ರಾ ಸದ್ಯ ಆರ್. ಅಶ್ವಿನ್ ಮತ್ತು ಯಜ್ವೇಂದ್ರ ಚಹಲ್ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. 52 ವಿಕೆಟ್ ಪಡೆಯಲು ಬುಮ್ರಾ 44 ಹಾಗೂ ಅಶ್ವಿನ್ 46 ಪಂದ್ಯ ತೆಗೆದುಕೊಂಡಿದ್ದರು. ಆದರೆ, ಚಹಲ್ ಕೇವಲ 36 ಪಂದ್ಯಗಳಲ್ಲಿ ಈ ಶ್ರೇಯಸ್ಸಿಗೆ ಭಾಜನರಾಗಿದ್ದಾರೆ. ತಂಡಗಳು ಇಂತಿದೆ: ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್, ರಿಷಭ್ ಪಂತ್ (ವಿಕೆಟ್ಕೀಪರ್), ಶಿವಂ ದುಬೆ, ಯಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಶಾರ್ದುಲ್ ಠಾಕೂರ್, ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್. ಶ್ರೀಲಂಕಾ: ಲಸಿತ್ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ಕುಸಾಲ್ ಪೆರೆರಾ, ನಿರೋಶನ್ ಡಿಕ್ವೆಲ್ಲ, ಧನಂಜಯ ಡಿ’ಸಿಲ್ವಾ, ಇಸುರು ಉದಾನ, ಭಾನುಕ ರಾಜಪಕ್ಸ, ಒಶಾಡ ಫರ್ನಾಂಡೊ, ವಾನಿಂಡು ಹಸರಂಗ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಲಕ್ಷಣ್ ಸಂದಕನ್ ಮತ್ತು ಕಸುನ್ ರಜಿತ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NcVUUR