ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು: ಗಾಂಧೀಜಿ, ಜವಾಹರಲಾಲ್ ನೆಹರು, ವಲ್ಲಭಬಾಯಿ ಪಟೇಲ್ ಸೇರಿದಂತೆ ಅನೇಕ ಸ್ವಾತಂತ್ರ ಹೋರಾಟಗಾರರ ಐತಿಹಾಸಿಕ ಸಂದರ್ಶನ, ಕಾರ್ಯಕ್ರಮಗಳ ಸಂಗ್ರಹವನ್ನು ಖಾಸಗಿ ತೆಕ್ಕೆಗೆ ಒಪ್ಪಿಸಲು ಮುಂದಾಗಿದೆ. ತುರ್ತು ಪರಿಸ್ಥಿತಿ, ಗಣ್ಯರ ನಿಧನ, ಸಂದರ್ಶನದ ರೇಡಿಯೊ ಹಾಗೂ ಡಿಡಿ ಮುದ್ರಿತ ಕಾರ್ಯಕ್ರಮಗಳನ್ನು ಒಟಿಟಿ ಸೇರಿದಂತೆ ಇನ್ನಿತರೆ ಖಾಸಗಿ ಮೂಲಗಳಿಗೆ ಹರಾಜು ಪ್ರಕ್ರಿಯೆ ಮೂಲಕ ನೀಡಲು ವ್ಯವಸ್ಥೆ ರೂಪಿಸಿದೆ. 'ಹಣಗಳಿಕೆ' ಉದ್ದೇಶದ ಈ ನೀತಿಗೆ ರಾಷ್ಟ್ರವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಕಾರ್ಯಕ್ರಮಗಳನ್ನು ಆಕಾಶವಾಣಿ, ಡಿಡಿ ವ್ಯಾಪ್ತಿಯಲ್ಲೇ ಕಾಪಾಡಲು ಕೇಂದ್ರ ಸರಕಾರ ಮುಂದಾಗಬೇಕಿದೆ ಎನ್ನುವ ಒತ್ತಾಯ ಕೇಳಿಬಂದಿದೆ. ಸ್ವತಃ ಇದೇ ಸಂಸ್ಥೆಯ ನಿವೃತ್ತ ನಿರ್ದೇಶಕ ವಲಯ ಕೂಡ ಟೀಕಿಸಿದೆ. ಹರಾಜಿನಲ್ಲಿ ಲಭ್ಯವಿದೆ ಭಂಡಾರ ಪ್ರಸಾರ ಭಾರತಿ ತನ್ನ ಆನ್ಲೈನ್ ಹರಾಜಿನಲ್ಲಿ 1936ರ ಬಳಿಕ ಡಿಡಿ, ಬಾನುಲಿಯಲ್ಲಿ ಪ್ರಸಾರವಾಗಿರುವ ಐತಿಹಾಸಿಕ ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ , ಟೆಲಿ ಸಿನಿಮಾ, ಸಾಕ್ಷ್ಯಚಿತ್ರಗಳು, ಜೀವನ ಚರಿತ್ರೆ, ನಾಟಕಗಳು ಸೇರಿದಂತೆ ಒಟ್ಟು 10 ವಿಭಾಗಗಳ ಬೃಹತ್ ಭಂಡಾರದ ಪ್ರಸಾರದ ಹಕ್ಕುಗಳನ್ನು ಮಾರಾಟಕ್ಕಿಟ್ಟಿದೆ. ಆದಾಯವೇ ಮುಖ್ಯವೇ? ಪ್ರಸಾರ್ ಭಾರತಿ ಸೆಕ್ಷನ್ 14 ಸ್ಪಷ್ಟವಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದೇ ಉದ್ದೇಶವೆಂದು ಹೇಳಿದೆ. ಆದರೆ, ಪ್ರಸಾರ ಭಾರತಿ ಹಣಗಳಿಕೆಯೆನ್ನುವ ಉದ್ದೇಶದಿಂದಲೇ ಸಂಗ್ರಹ ಹರಾಜಿಗೆ ಮುಂದಾಗುತ್ತಿರುವುದು ಸ್ಪಷ್ಟವಾಗಿ ತಿಳಿದುಬಂದಿದ್ದು, ಆದಾಯ ದೃಷ್ಟಿ ಎಷ್ಟು ಸರಿ ಎಂದು ಬೆಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಉದಯಾದ್ರಿ ಪ್ರಶ್ನಿಸಿದ್ದಾರೆ. ಪ್ರಸಾರ ಭಾರತಿ ಹೊಸ ನೀತಿ
- ಐತಿಹಾಸಿಕ ಕಾರ್ಯಕ್ರಮ ಸಂಗ್ರಹವನ್ನು 'ಅನುದಾನ ಸಂಗ್ರಹ'(ಮಾನಿಟೈಸ್)ಕ್ಕಾಗಿ ಖಾಸಗಿ ವಲಯಕ್ಕೆ ಹರಾಜಿನ ಮೂಲಕ ನೀಡಲಾಗುತ್ತಿದ್ದು, ಟಿವಿ, ರೇಡಿಯೋ ಪ್ರಸಾರದೊಂದಿಗೆ ಒಟಿಟಿ ಕ್ಷೇತ್ರದ ಪ್ರಸಾರಕ್ಕೂ ಇದು ಅನ್ವಯವಾಗಲಿದೆ.
- ಆನ್ಲೈನ್ ಮೂಲಕ ಹರಾಜು ಪ್ರಕ್ರಿಯೆಗೆ ಅವಕಾಶ
- ಹಕ್ಕುಗಳನ್ನು ವಾರ್ಷಿಕ ಅವಧಿಗೆ ಮಾರಾಟ
- ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಹರಾಜು ಪ್ರಕ್ರಿಯೆಗೆ ಅವಕಾಶ
- ಕಾರ್ಯಕ್ರಮಗಳ ಮಹತ್ವವನ್ನಾಧರಿಸಿ ದರ ನಿಗದಿ
- ಗರಿಷ್ಠ 5 ವರ್ಷದ ಅವಧಿಗೆ ಹಕ್ಕುಗಳ ಮಾರಾಟಕ್ಕೆ ಅವಕಾಶ
- ಕಾರ್ಯಕ್ರಮಗಳ ಗುಣಮಟ್ಟ ಕಾಯ್ದುಕೊಳ್ಳಲು ಷರತ್ತು
- ಒಟಿಟಿಯಲ್ಲಿ ಆಕಾಶವಾಣಿ ಹಳೇ ಸಂಗ್ರಹಕ್ಕೆ ಬೇಡಿಕೆಯಿದೆ
- ಉತ್ತಮ ಆದಾಯ ಹರಿದುಬರಲಿದೆ
- ದೇಸಿ ಕಾರ್ಯಕ್ರಮಗಳು ಯೂಟ್ಯೂಬ್ ಸೇರಿದಂತೆ ಹಲವೆಡೆ ಹೆಚ್ಚು ಪ್ರಸಾರಗೊಳ್ಳಲಿವೆ
- ಕೇವಲ ಡಿಡಿ, ಮಾತ್ರವಲ್ಲದೆ ಉಳಿದೆಡೆ ಸಹ ಕಾರ್ಯಕ್ರಮ ಸಿಗಲಿವೆ
- ಅಮೂಲ್ಯ ಸಂಪತ್ತಾಗಿರುವ ದೇಸಿ ಐತಿಹಾಸಿಕ ಕಾರ್ಯಕ್ರಮ ಖಾಸಗಿ ತೆಕ್ಕೆಗೆ ಜಾರುವ ಆತಂಕ
- ಸಂಗ್ರಹದ ಹಕ್ಕು ಹರಾಜಿನಿಂದ ದೇಸಿ ಅಸ್ಮಿತೆ ಆಕಾಶವಾಣಿಯಿಂದ ಕೈತಪ್ಪಲಿದೆ
- ಯೂಟ್ಯೂಬ್ ಸೇರಿದಂತೆ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲ ಕಾರ್ಯಕ್ರಮಗಳಿಂದ ಆಕಾಶವಾಣಿಗೆ ಸಿಗಲಿದ್ದ ಪ್ರಚಾರಕ್ಕೆ ಕುತ್ತು
- ಡಾ.ರಾಜ್ ಅಪಹರಣ, ಶಂಕರ್ನಾಗ್ ಸೇರಿದಂತೆ ತಾರೆಗಳ ಸಂದರ್ಶನಗಳಿವೆ
- ವಿದ್ವಾನ್ಗಳ ಸಂಗೀತ ಕಛೇರಿ, ವಾಗ್ಗೇಯಕಾರರ ರಚನೆ, ಮಾತುಕತೆಗಳಿವೆ
from India & World News in Kannada | VK Polls https://ift.tt/3w8ahyV