ಸ್ಥಗಿತಗೊಂಡ ಕೃಷಿಭಾಗ್ಯ; ಸುಸ್ಥಿರ ಬೇಸಾಯಕ್ಕೆ ಅಡ್ಡಿ: ಕೊಡಗಿನ ಫಲಾನುಭವಿಗಳಿಗೆ ನಿರಾಸೆ!

ಸುನಿಲ್‌ ಪೊನ್ನೇಟಿ ಮಡಿಕೇರಿ ಮಡಿಕೇರಿ: ಮಳೆಯಾಶ್ರಿತ ಪ್ರದೇಶದ ರೈತರ ಅನುಕೂಲಕ್ಕಾಗಿ 2014-15ರಲ್ಲಿ ಜಾರಿಗೆ ಬಂದಿದ್ದ ಸ್ಥಗಿತವಾಗಿದ್ದರಿಂದ ಈ ಯೋಜನೆ ಅಡಿಯಲ್ಲಿ ಕೃಷಿ ಹೊಂಡಕ್ಕೆ ಸರಕಾರ ಕೊಡುತ್ತಿದ್ದ ಸಬ್ಸಿಡಿಯೂ ನಿಂತಿದೆ. ಇದರಿಂದ ಕೊಡಗಿನಲ್ಲಿ ಫಲಾನುಭವಿಗಳಿಗೆ ನಿರಾಸೆಯಾಗಿದ್ದು, ಸುಸ್ಥಿರ ಕೃಷಿಯ ಕನಸಿಗೂ ಕಲ್ಲುಬಿದ್ದಿದೆ. 6 ವರ್ಷಗಳ ಹಿಂದೆ ರಾಜ್ಯದಲ್ಲಿ ಜಾರಿಗೆ ಬಂದಿದ್ದ ಕೃಷಿ ಭಾಗ್ಯ ಯೋಜನೆಯಿಂದ ಲಕ್ಷಾಂತರ ರೈತರಿಗೆ ಪ್ರಯೋಜನ ಆಗಿತ್ತು. ತಮ್ಮ ಜಮೀನಿನಲ್ಲಿ ಈ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90ರಷ್ಟು ಮತ್ತು ಇತರ ವರ್ಗದ ರೈತರಿಗೆ ಶೇ. 80ರಷ್ಟು ಸಹಾಯಧನವನ್ನು ಸರಕಾರ ಕೊಡುತ್ತಿತ್ತು. ಜಿಲ್ಲೆಯಲ್ಲೂ ಸಾಕಷ್ಟು ರೈತರು ಈ ಯೋಜನೆಯ ಲಾಭ ಪಡೆದುಕೊಂಡಿದ್ದರು. ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಲು ಪಾಲಿಥಿನ್‌ ಹೊದಿಕೆ, ಡೀಸೆಲ್‌ ಪಂಪ್‌ಸೆಟ್‌, ತುಂತುರು ಅಥವಾ ಹನಿ ನೀರಾವರಿ ವ್ಯವಸ್ಥೆ, ಕೃಷಿ ಹೊಂಡದ ಸುತ್ತಲೂ ನೆರಳು ಪರದೆ, ಬದು ನಿರ್ಮಾಣ ಕಾಮಗಾರಿಗೂ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ ಆರ್ಥಿಕ ನೆರವು ಸಿಗುತ್ತಿತ್ತು. ಆರಂಭದಲ್ಲಿ ರಾಜ್ಯದ 23 ಜಿಲ್ಲೆಗಳ 107 ತಾಲೂಕುಗಳಲ್ಲಿ ಜಾರಿಯಾದ ಯೋಜನೆಯನ್ನು 2015-16ರಲ್ಲಿ 25 ಜಿಲ್ಲೆಗಳ 132 ತಾಲೂಕುಗಳಿಗೆ ವಿಸ್ತರಿಸಲಾಯಿತು. 2017-18ರಿಂದ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಜಾರಿಗೆ ತರಲಾಗಿತ್ತು. ಅನುದಾನ ಇಲ್ಲದೆ ನಿರಾಸೆಕೊಡಗಿನಲ್ಲೂ ಕೃಷಿಭಾಗ್ಯ ಯೋಜನೆಗೆ ಸಾಕಷ್ಟು ಬೇಡಿಕೆ ಇತ್ತು. ಈಗಲೂ ರೈತರು ಕೃಷಿ ಇಲಾಖೆಯಲ್ಲಿ ಯೋಜನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ಅನುದಾನ ಇಲ್ಲ ಎನ್ನುವ ಮಾಹಿತಿ ಸಿಗುತ್ತಲೇ ನಿರಾಸೆಯಿಂದ ಮರಳುವಂತಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಬೇರೆ ಬೇರೆ ಅಳತೆಯ ಕೃಷಿ ಹೊಂಡಗಳನ್ನು ರೈತರು ನಿರ್ಮಿಸಿಕೊಂಡಿದ್ದು, ಜಿಲ್ಲೆಯ ಉಳಿದ ನಾಲ್ಕು ತಾಲೂಕುಗಳಿಗೆ ಹೋಲಿಸಿದರೆ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಹೊಂಡಗಳು ಕಂಡು ಬರುತ್ತವೆ. ಕೃಷಿಯ ಜೊತೆಗೆ ಮೀನುಗಾರಿಕೆಗೂ ಬಳಕೆಯಾಗುತ್ತಿದೆ. ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆಯನ್ನು ಈಗ ಬಿಜೆಪಿ ಸರಕಾರ ಸ್ಥಗಿತಗೊಳಿಸಿದೆ. ರೈತರಿಗೆ ಬಹುಪಯೋಗಿ ಆಗಿದ್ದ ಯೋಜನೆಯೊಂದನ್ನು ಹೀಗೆ ಹಿಂತೆಗೆದುಕೊಂಡಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಮತ್ತೆ ಆರಂಭಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಅವ್ಯವಹಾರ ಆರೋಪ ಹಿನ್ನೆಲೆ ಯೋಜನೆ ಸ್ಥಗಿತ ರೈತರಿಗೆ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡಲು ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿತ್ತು. ಈ ಸಂಸ್ಥೆಗಳನ್ನು ರಾಜ್ಯಮಟ್ಟದಲ್ಲಿ ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ರೈತರು ಇಚ್ಛಿಸಿದಲ್ಲಿ ಮಾತ್ರ ಅವರ ಪಾಲಿನ ವಂತಿಗೆಯನ್ನು ಪಡೆದು ಇಂತಹ ಸಂಸ್ಥೆಗಳ ಮೂಲಕ ಕೃಷಿ ಹೊಂಡ ನಿರ್ಮಿಸಲಾಗುತ್ತಿತ್ತು. ಆದರೆ ಕೃಷಿ ಹೊಂಡ ನಿರ್ಮಾಣ ಹೆಸರಿನಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರಕಾರ ಕೃಷಿ ಭಾಗ್ಯ ಯೋಜನೆ ಸ್ಥಗಿತಗೊಳಿಸಿದೆ ಎನ್ನಲಾಗಿದೆ. ಯೋಜನೆ ಉದ್ದೇಶ
  • ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯಾಗಿ ಬದಲಾವಣೆ
  • ಮಳೆ ನೀರಿನ ಸಮರ್ಪಕ ಸಂಗ್ರಹ, ಉಪಯುಕ್ತ ಬಳಕೆ
  • ಕೃಷಿ ಉತ್ಪಾದಕತೆ ಉತ್ತಮಪಡಿಸುವುದು, ಆದಾಯ ಹೆಚ್ಚಿಸುವುದು
  • ಅಗತ್ಯ ಸಂದರ್ಭದಲ್ಲಿ ರಕ್ಷಣಾತ್ಮಕ ನೀರಾವರಿ
ಕೊಡಗಿನಲ್ಲಿ ಕೃಷಿಭಾಗ್ಯ ವರ್ಷ ಫಲಾನುಭವಿಗಳ ಸಂಖ್ಯೆ ವೆಚ್ಚ 2018-19- 548 -2.746 ಕೋ.ರೂ. 2019-20 -1,094 -5.974 ಕೋ.ರೂ. ಕೊಡಗಿನಲ್ಲಿ ಕೃಷಿ ಹೊಂಡಕ್ಕೆ ಬೇಡಿಕೆ ಇದೆ. ಆದರೆ ಈಗ ಸೂಕ್ತ ಅನುದಾನ ಇಲ್ಲ. ಸರಕಾರದಿಂದ ಸೂಚನೆ ಬಂದ ನಂತರ ಬೇಡಿಕೆಗಳ ಬಗ್ಗೆ ಗಮನಹರಿಸಲಾಗುವುದು. ಶಬಾನಾ ಎಂ. ಶೇಖ್‌ ಜಂಟಿ ನಿರ್ದೇಶಕರು, ಕೃಷಿ ಇಲಾಖೆ,


from India & World News in Kannada | VK Polls https://ift.tt/3mNauV7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...