ತಿ.ನಾ.ಪದ್ಮನಾಭ ಮಾಗಡಿ ಗ್ರಾಮಾಂತರ ರಾಮನಗರ: ಶ್ರೀ ರಾಮಚಂದ್ರ ವನವಾಸದಲ್ಲಿದ್ದಾಗ ಹಸಿವು ನೀಗಿಸಿಕೊಳ್ಳಲು ಸೇವಿಸಿದ್ದ ಈಗ ರಾಮನೂರಿನ ಹೆಸರಿನ ಜಿಲ್ಲೆಯಲ್ಲಿ ಜನರ ಫಲಹಾರವಾಗಿ ಜನರು ಭೂಚಕ್ರ ಗೆಡ್ಡೆ ರುಚಿ ಸವಿಯುತ್ತಿದ್ದಾರೆ. ದೀಪಾವಳಿ ಹಬ್ಬಕ್ಕಾಗಿ ಜಿಲ್ಲೆಯ ತಾಲೂಕಿನ ಸಂತೆಗಳಲ್ಲಿ ತರಕಾರಿ ತರಲು ಹೋದ ಜನರಿಗೆ ಹೊಸದೊಂದು ಗೆಡ್ಡೆ ದರ್ಶನವಾಗಿ ಗೆಡ್ಡೆಯನ್ನು ಕುತೂಹಲದಿಂದ ವೀಕ್ಷಿಸಿ ತರಕಾರಿ ಕೊಳ್ಳುವ ಮೊದಲು ವಿಶೇಷ ಗೆಡ್ಡೆಯನ್ನು ಸವಿದು ತಮ್ಮ ಮೊಬೈಲ್ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ತರಕಾರಿ ಸಾಮಾನು, ತರಲು ಮುಖ ಮಾಡಿದ್ದು ಕಂಡುಬಂತು. ಏನಿದು ಭೂಚಕ್ರ ಗೆಡ್ಡೆ? ಉಷ್ಣ ಪ್ರದೇಶಗಳ ಪೊದೆಗಳಲ್ಲಿ ಬೆಳೆಯುವ ಅಪರೂಪದ ಸಸ್ಯ ಭೂಮಿಯಲ್ಲಿ ಐದರಿಂದ ಆರು ಅಡಿ ಗಳವರೆಗೂ ಬೇರುಬಿಟ್ಟು ಒಂದು ಅಡಿ ವೃತ್ತಾಕಾರದ ಗಡ್ಡೆಯಾಗಿ ಹಬ್ಬಿಕೊಳ್ಳುತ್ತೆ. ಈ ಗೆಡ್ಡೆಯನ್ನು ಜನರು ಕಷ್ಟಪಟ್ಟು ಭೂಮಿಯಿಂದ ಬಿಡಿಸಿ ನೀರಿನಿಂದ ತೊಳೆದು ಮಾರಾಟ ಮಾಡಲು ತರಬೇಕು. ಕೆಮ್ಮಣ್ಣಿನ ಬಣ್ಣವಿರುವ ಈ ಗೆಡ್ಡೆ ತನ್ನ ನೋಟದಿಂದಲೇ ಎಂಥವರನ್ನೂ ಆಕರ್ಷಿಸಿ ಬಿಡುತ್ತದೆ. ಎಲ್ಲೆಲ್ಲಿ ಇದು ಬೇರೂರಿದೆ ಹೆಚ್ಚಾಗಿ ಕರ್ನಾಟಕದ ಶಿವಮೊಗ್ಗ ಹಾಗೂ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಬೆಳೆಯುತ್ತಿದ್ದು ಗೆಡ್ಡೆಯನ್ನು ಬೇರೆ ರಾಜ್ಯಗಳಿಂದ ತಂದು ಹಳೆ ಮೈಸೂರು ಭಾಗಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆಯುರ್ವೇದ ಗುಣಸಿಹಿಯಾದ ರುಚಿಯಿರುವ ಈ ಗೆಡ್ಡೆಯ ಎಲೆ, ಹೂವು, ಕಾಂಡ ಆಯುರ್ವೇದದಲ್ಲಿ ಔಷಧವಾಗಿ ಬಳಕೆಯಾಗುತ್ತದೆ. ದೇಹದ ಉಷ್ಣತೆ ನಿವಾರಿಸಿ ರಕ್ತ ಶುದ್ಧಿ ಮಾಡಲಿದೆ ಈ ಗೆಡ್ಡೆ ಎನ್ನುತ್ತಾರೆ ಗೆಡ್ಡೆಯನ್ನು ಹೊತ್ತು ತಂದು ಮಾರುವವರು. 10 ರೂ.ಗೆ 4 ಪೀಸ್25 ವರ್ಷಗಳ ಹಿಂದಿನಿಂದಲೂ ಈ ಗಡ್ಡೆ ಮಾರಾಟವಾಗುತ್ತಿದ್ದು ಮೊದಲು ಚಿಕ್ಕ ಪೀಸ್ 10 ಪೈಸೆಗೆ ಲಭಿಸುತ್ತಿತ್ತು. ಈಗ ಒಂದು ಪೀಸ್ಗೆ 10 ರೂ. ಇದೆ. ಕುಂಭಮೇಳದ ಪ್ರಿಯ ತಿನಿಸು ಮಹಾಕುಂಭಮೇಳದಲ್ಲಿ ಭೂಚಕ್ರ ಗೆಡ್ಡೆಗೆ ಭಾರೀ ಡಿಮ್ಯಾಂಡ್ ಇರುತ್ತದೆ. ಶ್ರೀರಾಮಚಂದ್ರ ಪ್ರಭು ಸೇವಿಸಿದ ಗೆಡ್ಡೆ ಎಂದು ಮಹಾಕುಂಭಮೇಳಕ್ಕೆ ದೇಶದ ನಾನಾ ಭಾಗಗಳಿಂದ ಬರುವ ಪ್ರತಿಯೊಬ್ಬ ಸಾಧುಸಂತರು ಈ ಗೆಡ್ಡೆಯನ್ನು ಸೇವಿಸುತ್ತಾರೆ. ರಾಮಕಂದಾ ಎಂಬ ಹೆಸರಿನಲ್ಲಿ ಉತ್ತರಭಾರತದಲ್ಲಿ ಗೆಡ್ಡೆ ಮಾರಾಟವಾಗುತ್ತದೆ. ಹನುಮನಿಗೂ ಹಿಡಿಸಿತ್ತು ತ್ರೇತ್ರಾಯುಗದಲ್ಲಿ ಶ್ರೀರಾಮಚಂದ್ರ ಅರಣ್ಯ ವಾಸದಲ್ಲಿದ್ದಾಗ ಭೂಚಕ್ರ ಗೆಡ್ಡೆಯನ್ನು ಲಕ್ಷ್ಮಣ, ಸೀತಾ ಜತೆಗೂಡಿ ಸೇವಿಸುತ್ತಿದ್ದರಂತೆ. ಬಾಹುಬಲಿ ಹನುಮಾನ್ ಹಾಗೂ ವಾನರ ಸೇನೆಗೂ ಈ ಭೂಚಕ್ರ ಗೆಡ್ಡೆ ಪ್ರಿಯವಾದ ಆಹಾರವಾಗಿತ್ತು ಎನ್ನುತ್ತದೆ ಪುರಾಣ. ಮಣ್ಣಿನ ಒಳಗೆ ಬೆಳೆಯುವ ಗೆಡ್ಡೆ ಗೆಣಸುಗಳನ್ನು ಹೆಚ್ಚು ಸೇವನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ನೈಸರ್ಗಿಕವಾಗಿ ಸಿಗುವ ಹಾಗೂ ರಾಸಾಯನಿಕ ರಹಿತವಾದ ಗೆಡ್ಡೆಗಳಲ್ಲಿ ಪೋಷಕಾಂಶ ಹೆಚ್ಚಾಗಿಸಿದೆ. ಡಾ.ಸುಪ್ರೀತಾ, ಆಯುರ್ವೇದ ವೈದ್ಯೆ
from India & World News in Kannada | VK Polls https://ift.tt/3GUVw7F