ಹೊಸದಿಲ್ಲಿ: 2019ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿನ ಪಾಕಿಸ್ತಾನ ಪೋಷಿತ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆದ ಬಳಿಕ ಪ್ರತಿದಾಳಿ ತಡೆದು ಪಾಕ್ ಪೈಲೆಟ್ಗಳನ್ನು ಬೆನ್ನಟ್ಟಿ 'ದೇಶದ ಹೀರೋ' ಎನಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅವರಿಗೆ ಬಡ್ತಿ ನೀಡಲಾಗಿದೆ. ಅವರನ್ನು ಪೈಲಟ್ ವಿಂಗ್ ಕಮಾಂಡರ್ ಶ್ರೇಣಿಯಿಂದ 'ಗ್ರೂಪ್ ಕ್ಯಾಪ್ಟನ್' ದರ್ಜೆಗೆ ಸೇರಿಸಲಾಗಿದೆ. ಭಾರತೀಯ ಭೂ ಸೇನಾಪಡೆ ಕರ್ನಲ್ ಶ್ರೇಣಿಗೆ ಸಮನಾದ ಹುದ್ದೆ ಆಗಿದೆ. ಮೂರು ವರ್ಷಗಳ ಹಿಂದೆ 2019ರ ಫೆಬ್ರವರಿಯಲ್ಲಿ ಸರ್ಜಿಕಲ್ ದಾಳಿ ಬಳಿಕ ಪಾಕಿಸ್ತಾನ ವಾಯುಪಡೆಯು ಎಫ್ - 16 ಯುದ್ಧ ವಿಮಾನಗಳ ಮೂಲಕ ಗಡಿ ದಾಟಿಕೊಂಡು ಪ್ರತೀಕಾರಕ್ಕಾಗಿ ಎರಗಿದ್ದವು. ಇದಕ್ಕೆ ತಿರುಗೇಟು ನೀಡಲು ಮಿಗ್-21 ಯುದ್ಧ ವಿಮಾನಗಳ ಮೂಲಕ ಅಭಿನಂದನ್ ವರ್ಧಮಾನ್ ನೇತೃತ್ವದ ಐಎಎಫ್ ತಂಡಕ್ಕೆ ಮುನ್ನುಗ್ಗಿತ್ತು. ಒಂದು ಎಫ್ - 16 ವಿಮಾನವನ್ನು ಕೂಡ ಅಭಿನಂದನ್ ಹೊಡೆದುರುಳಿಸಿದ್ದರು. ಆದರೆ ದುರಾದೃಷ್ಟವಶಾತ್ ಅಭಿನಂದನ್ ಅವರ ವಿಮಾನ ಕೂಡ ಪತನಗೊಂಡು ಪಾಕಿಸ್ತಾನ ಸೇನೆಯು ಅವರನ್ನು ವಶಕ್ಕೆ ಪಡೆದಿತ್ತು. ಆದರೆ ಯುದ್ಧ ಒಪ್ಪಂದ ಹಾಗೂ ಭಾರತ ಸರಕಾರದ ತೀವ್ರ ಒತ್ತಡಕ್ಕೆ ಮಣಿದು ಒಂದಿಷ್ಟು ಸಮಯದ ಬಳಿಕ ಬಳಿಕ ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳು ಅಭಿನಂದನ್ ವರ್ಧಮಾನ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಒಪ್ಪಿಸಿದ್ದರು. ಬಳಿಕ ಅವರಿಗೆ ಕೇಂದ್ರ ಸರಕಾರವು 'ಶೌರ್ಯ ಚಕ್ರ' ಪುರಸ್ಕಾರ ನೀಡಿ ಗೌರವಿಸಿತ್ತು.
from India & World News in Kannada | VK Polls https://ift.tt/3CLUXdO