ಎಎಪಿಗೆ ಆಘಾತ ನೀಡಿದ ಕಾಂಗ್ರೆಸ್‌, ಗೃಹ ಬಳಕೆ ವಿದ್ಯುತ್‌ ದರ 3 ರೂ. ಇಳಿಸಿದ ಪಂಜಾಬ್‌ ಸರಕಾರ!

ಚಂಡೀಗಢ: ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಪಂಜಾಬ್‌ ಸರಕಾರವು ರಾಜ್ಯದಲ್ಲಿ ವಿದ್ಯುತ್‌ ದರ ಇಳಿಸುವ ಮೂಲಕ ದೀಪಾವಳಿ ಕೊಡುಗೆ ನೀಡಿದೆ. "ಗೃಹ ಬಳಕೆಯ ವಿದ್ಯುತ್‌ ದರವನ್ನು ಯೂನಿಟ್‌ಗೆ 3 ರೂ. ಇಳಿಸಲಾಗಿದೆ. ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಮತ್ತು ಎಲ್ಲಾ ಶ್ರೇಣಿಗಳಿಗೂ ಅನ್ವಯವಾಗಲಿದೆ. ಇದರಿಂದ ಕಡಿಮೆ ವಿದ್ಯುತ್‌ ಬಳಸುವವರಿಗೆ ಯೂನಿಟ್‌ಗೆ 1.19 ರೂ. ಬೀಳಲಿದೆ," ಎಂದು ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸುದ್ದಿಗಾರರಿಗೆ ತಿಳಿಸಿದರು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಉಚಿತ ವಿದ್ಯುತ್ ನೀಡುವ ಚುನಾವಣೆ ಭರವಸೆಗೆ ತಿರುಗೇಟು ನೀಡಿರುವ ಚನ್ನಿ, ತಮ್ಮ ಸರ್ಕಾರದ ಸಮೀಕ್ಷೆಯು ಜನರಿಗೆ ಅಗ್ಗದ ವಿದ್ಯುತ್‌ ಬೇಕಾಗಿದೆ, ಉಚಿತ ವಿದ್ಯುತ್ ಅಲ್ಲ ಎಂಬುದನ್ನು ಸೂಚಿಸುತ್ತಿದೆ ಎಂದು ಹೇಳಿದರು. ಜತೆಗೆ ಈ ನಿರ್ಧಾರದಿಂದ ಪಂಜಾಬ್‌ನ ಶೇ. 95ರಷ್ಟು ನಿವಾಸಿಗಳಿಗೆ ಪ್ರಯೋಜನವಾಗಲಿದೆ ಎಂದು ಸಿಎಂ ಹೇಳಿದ್ದು, ಇದೇ ವೇಳೆ ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 11ರಷ್ಟು ಹೆಚ್ಚಳ ಮಾಡಲೂ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಚನ್ನಿ ತಿಳಿಸಿದರು. ಮತ್ತೆ ಮೇಲುಗೈ ಸಾಧಿಸಿದ ನವಜೋತ್‌ ಸಿಂಗ್‌ ಸಿಧು ಪಂಜಾಬ್‌ ಅಡ್ವೊಕೇಟ್‌ ಜನರಲ್‌ ಅಮರ್‌ಪ್ರೀತ್‌ ಸಿಂಗ್‌ ಡಿಯೋಲ್‌ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಪಿಸಿಸಿ) ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಮತ್ತೊಮ್ಮೆ ಮೇಲುಗೈ ಸಾಧಿಸಿದಂತಾಗಿದೆ. ಖ್ಯಾತ ಕ್ರಿಮಿನಲ್‌ ಲಾಯರ್‌ ಆಗಿರುವ ಡಿಯೋಲ್‌ ಅವರನ್ನು ಕಳೆದ ಸೆ.27ರಂದು ರಾಜ್ಯದ ಅಡ್ವೊಕೇಟ್‌ ಜನರಲ್‌ ಆಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸರಕಾರ ನೇಮಕ ಮಾಡಿತ್ತು. ಜತೆಗೆ, ಇಕ್ಬಾಲ್‌ ಪ್ರೀತ್‌ ಸಿಂಗ್‌ ಸಹೋಟಾ ಅವರನ್ನು ಪೊಲೀಸ್‌ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಈ ನೇಮಕಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪಿಪಿಸಿಸಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ಮರುದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ವರಿಷ್ಠರನ್ನು ಭೇಟಿ ಮಾಡಿದಾಗಲೂ ತಮ್ಮ ಹಠಕ್ಕೆ ಅಂಟಿಕೊಂಡಿದ್ದ ಅವರು, ಈ ಇಬ್ಬರ ನೇಮಕಾತಿ ಆದೇಶ ಪಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದರು. ಗುರು ಗ್ರಂಥ ಸಾಹಿಬ್‌ಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ 2015ರ ಅ.14ರಂದು ಬೆಹಬಲ್‌ ಕಲಾನ್‌, ಕೊಟ್ಕಾಪುರಗಳಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಒಟ್ಟು ನಾಲ್ವರು (ಎರಡೂ ಸ್ಥಳಗಳಲ್ಲಿ ತಲಾ ಇಬ್ಬರು) ಮೃತಪಟ್ಟಿದ್ದರು. ಅಂದಿನ ಡಿಜಿಪಿಯಾಗಿದ್ದ ಸುಮೇಧ್‌ ಸಿಂಗ್‌ ಸೈನಿ ಹಾಘೂ ಇತರ ಆರೋಪಿಗಳ ಪರವಾಗಿ ಡಿಯೋಲ್‌ ಅವರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಅಲ್ಲದೇ, ಜಾಗೃತ ದಳವು 2020ರಲ್ಲಿ ಸೈನಿ ಅವರನ್ನು ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಿದಾಗ, ಅವರ ಪರ ವಾದಿಸಿ ಬಿಡುಗಡೆ ಮಾಡಿಸುವಲ್ಲಿಯೂ ಡಿಯೋಲ್‌ ಯಶಸ್ವಿಯಾಗಿದ್ದರು. ಇದೇ ಕಾರಣದಿಂದ ಅವರ ನೇಮಕವನ್ನು ಸಿಧು ವಿರೋಧಿಸಿದ್ದರು. ಕೆಲವು ಸಿಖ್‌ ಸಂಘಟನೆಗಳು ಸಹ ಡಿಯೋಲ್‌ ನೇಮಕ ಖಂಡಿಸಿದ್ದವು. ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೆ ಡಿಯೋಲ್‌ ರಾಜೀನಾಮೆ ಪತ್ರ ಹಸ್ತಾಂತರಿಸಿದ್ದಾರೆ. ಆದರೆ ರಾಜೀನಾಮೆ ಕುರಿತಂತೆ ಮುಖ್ಯಮಂತ್ರಿ ಚನ್ನಿ ಅಥವಾ ಡಿಯೋಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


from India & World News in Kannada | VK Polls https://ift.tt/3buswoD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...