ಪ್ಲಾಸ್ಟಿಕ್‌ ಬಾಲ್‌ ಎಸೆದ ಘಟನೆಯಿಂದ ಸಿರಾಜ್‌ಗೆ ಬೇಸರವಾಗಿದೆ ಎಂದ ಪಂತ್‌!

ಲೀಡ್ಸ್‌: ಮೂರನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ಇಂಗ್ಲೆಂಡ್‌ ವೀಕ್ಷಕರ ಅನುಚಿತ ವರ್ತನೆ ಬಗ್ಗೆ ಬೇಸರ ಹೊರಹಾಕಿದ ವಿಕೆಟ್‌ ಕೀಪರ್‌ , ಇಂತಹ ಘಟನೆಗಳು ಕ್ರಿಕೆಟ್‌ ಪಾಲಿಗೆ ಒಳಿತಲ್ಲ ಎಂದು ಹೇಳಿದ್ದಾರೆ. ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ, ಜೇಮ್ಸ್ ಆಂಡರ್ಸನ್‌ ಅವರ ಮಾರಕ ದಾಳಿಗೆ ನಲುಗಿ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 78ರನ್‌ಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌, ಮೊದಲನೇ ದಿನದಾಟದ ಅಂತ್ಯಕ್ಕೆ 42 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 120 ರನ್ ಗಳಿಸಿದ್ದು, 42 ರನ್‌ ಮುನ್ನಡೆ ಗಳಿಸಿದೆ. ಅಂದಹಾಗೆ, ಇಂಗ್ಲೆಂಡ್‌ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಬೌಂಡರಿ ಲೈನ್‌ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಸಿರಾಜ್‌ಗೆ ಸ್ಥಳೀಯ ವೀಕ್ಷಕರು, ಸ್ಕೋರ್‌ ಎಷ್ಟು ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಿರಾಜ್‌, ಸರಣಿಯಲ್ಲಿ ನಾವು 1-0 ಮುನ್ನಡೆಯಲ್ಲಿದ್ದೇವೆಂದು ತಿರುಗೇಟು ನೀಡಿದ್ದರು. ಆದರೂ, ಇಂಗ್ಲೆಂಡ್‌ ಅಭಿಮಾನಿಗಳು ಸಿರಾಜ್‌ ಕಡೆಗೆ ಕೆಲ ವಸ್ತುಗಳನ್ನು ಎಸೆದಿದ್ದರು. ಮೊದಲನೇ ದಿನದಾಟದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ರಿಷಭ್‌ ಪಂತ್‌, " ಕಡೆಗೆ ಕೆಲವರು ಚೆಂಡು ಅಥವಾ ಬೇರೆ ಏನೋ ವಸ್ತುಗಳನ್ನು ಎಸೆದಿದ್ದರು ಎಂದೆನಿಸುತ್ತಿದೆ. ಇದರಿಂದ ಸಿರಾಜ್‌ಗೆ ಬೇಸರವಾಗಿದೆ. ಹೌದು, ನೀವು ಗ್ಯಾಲರಿಯಲ್ಲಿದ್ದು ಹೇಗೆ ಬೇಕಾದರೂ ಮಾತನಾಡಿ, ಆದರೆ, ಯಾವುದೇ ವಸ್ತುಗಳನ್ನು ಆಟಗಾರರ ಕಡೆ ಎಸೆಯುವುದು ಕ್ರಿಕೆಟ್‌ ಪಾಲಿಗೆ ಒಳಿತಲ್ಲ," ಎಂದು ಹೇಳಿದ್ದಾರೆ. ಅಂದಹಾಗೆ, ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರಿಷಭ್‌ ಪಂತ್‌ 9 ಎಸೆತಗಳಿಗೆ ಕೇವಲ 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಇದರಿಂದಾಗಿ ಎಡಗೈ ಬ್ಯಾಟ್ಸ್‌ಮನ್‌ ವಿರುದ್ಧ ಭಾರತೀಯ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟೀಕಿಸಿದ್ದಾರೆ. ಟೀಮ್‌ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 78 ರನ್‌ಗಳಿಗೆ ಆಲೌಟ್‌ ಆದ ಬಗ್ಗೆ ಪ್ರತಿಕ್ರಿಯಿಸಿದ ರಿಷಭ್‌ ಪಂತ್, ನಾವು ಬ್ಯಾಟ್‌ ಮಾಡುವಾಗ, ಪಿಚ್‌ ಸ್ವಲ್ಪ ಮೃದುವಾಗಿತ್ತು. ಆದರೆ, ಇಂಗ್ಲೆಂಡ್‌ ಬ್ಯಾಟ್‌ ಮಾಡುವಾಗ, ಪಿಚ್‌ ಅನ್ನು ತುಂಬಾ ರೋಲ್‌ ಮಾಡಲಾಗಿತ್ತು. ಇದು ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ಗೆ ನೆರವಾಗಿತ್ತು ಎಂದು ಪಂತ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಹೌದು, ಇಂಗ್ಲೆಂಡ್‌ ತಂಡ ಪರಿಸ್ಥಿತಿಗಳನ್ನು ತುಂಬಾ ಚೆನ್ನಾಗಿ ಉಪಯೋಗಿಸಿಕೊಂಡಿದೆ. ನಾವು ಆಲ್ಔಟ್‌ ಆದ ಬಳಿಕ ಪಿಚ್‌ ಅನ್ನು ತುಂಬಾ ರೋಲ್‌ ಮಾಡಲಾಗಿತ್ತು. ಇದು ಬ್ಯಾಟಿಂಗ್‌ಗೆ ತುಂಬಾ ಸಹಕಾರಿಯಾಗಿತ್ತು. ಆದರೆ, ನಾವು ಮೊದಲು ಬ್ಯಾಟ್‌ ಮಾಡುವಾಗ, ವಿಕೆಟ್‌ ಸ್ವಲ್ಪ ಮೃದುವಾಗಿತ್ತು ಹಾಗೂ ಅದಕ್ಕೆ ತಕ್ಕಂತೆ ಇಂಗ್ಲೆಂಡ್ ಅತ್ಯುತ್ತಮ ದಾಳಿ ನಡೆಸಿತ್ತು," ಎಂದು ಹೇಳಿದರು. "ಇಂತಹ ಸನ್ನಿವೇಶದಲ್ಲಿ ನಾವು ಇನ್ನಷ್ಟು ಉತ್ತಮ ಪ್ರದರ್ಶನ ತೋರಬೇಕಾಗಿತ್ತು. ಆದರೆ, ಇದು ನಮ್ಮಿಂದ ಸಾಧ್ಯವಾಗಲಿಲ್ಲ. ಪ್ರಥಮ ಇನಿಂಗ್ಸ್‌ನಲ್ಲಿ ನಾವು ಮಾಡಿರುವ ತಪ್ಪುಗಳನ್ನು ಮುಂದಿನ ಇನಿಂಗ್ಸ್‌ನಲ್ಲಿ ತಿದ್ದಿಕೊಳ್ಳುತ್ತೇವೆ," ಎಂದು ರಿಷಭ್‌ ಪಂತ್‌ ಭರವಸೆ ನೀಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3DjfiHT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...