ಪೂಜಾರ ತಮ್ಮ ಬ್ಯಾಟಿಂಗ್‌ ತಂತ್ರವನ್ನೇ ಕಳೆದುಕೊಂಡಿದ್ದಾರೆಂದು ಟೀಕಿಸಿದ ವಾನ್‌!

ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧ ಪ್ರಥಮ ಇನಿಂಗ್ಸ್‌ಲ್ಲಿ ವೈಫಲ್ಯ ಅನುಭವಿಸಿದ ಭಾರತ ತಂಡದ ಅವರನ್ನು ಟೀಕಿಸಿದ ಮಾಜಿ ನಾಯಕ ಮೈಕಲ್‌ ವಾನ್‌, ಬಲಗೈ ಆಟಗಾರ ತಮ್ಮ ಬ್ಯಾಟಿಂಗ್‌ ತಂತ್ರವನ್ನು ಕಳೆದುಕೊಂಡಿದ್ದಾರೆಂದು ಹೇಳಿದ್ದಾರೆ. ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ, ಜೇಮ್ಸ್ ಆಂಡರ್ಸನ್‌ ಅವರ ಮಾರಕ ದಾಳಿಗೆ ನಲುಗಿ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 78ರನ್‌ಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್‌, ಮೊದಲನೇ ದಿನದಾಟದ ಅಂತ್ಯಕ್ಕೆ 42 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 120 ರನ್ ಗಳಿಸಿದ್ದು, 42 ರನ್‌ ಮುನ್ನಡೆ ಗಳಿಸಿದೆ. ಕಳೆದ ಎರಡು ವರ್ಷಗಳಿಂದ ಚೇತೇಶ್ವರ್ ಪೂಜಾರ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ. 2020ರ ಆರಂಭದಿಂದ ಇಲ್ಲಿಯವರೆಗೂ ಪೂಜಾರ ಅವರ ಬ್ಯಾಟಿಂಗ್‌ ಸರಾಸರಿ 25ಕ್ಕಿಂತಲೂ ಕಡಿಮೆ ಇದೆ. ಅಂದಹಾಗೆ, ಹೆಡಿಂಗ್ಲೆ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ ಜೇಮ್ಸ್ ಆಂಡರ್ಸನ್‌ ಅವರ ಔಟ್‌ ಸ್ವಿಂಗ್‌ ಎಸೆತಕ್ಕೆ ಪೂಜಾರ ವಿಕೆಟ್‌ ಒಪ್ಪಿಸಿದ್ದರು. ಬಿಬಿಸಿಯ ಟೆಸ್ಟ್‌ ಮ್ಯಾಚ್‌ ಸ್ಪೆಷಲ್‌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ , ಚೇತೇಶ್ವರ್‌ ಪೂಜಾರ ಎಲ್ಲವನ್ನೂ ಸಮುದ್ರದ ರೀತಿ ನೋಡುವ ಮೂಲಕ ತಮ್ಮ ಮೈ ಮೇಲೆ ಅನಗತ್ಯ ಒತ್ತಡವನ್ನು ಎಳೆದುಕೊಳ್ಳುತ್ತಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಪೂಜಾರ ತಮ್ಮ ಬ್ಯಾಟಿಂಗ್‌ನಲ್ಲಿ ಎಲ್ಲವನ್ನೂ ಸಮುದ್ರದ ರೀತಿ ನೋಡುತ್ತಿದ್ದಾರೆ. ಹಾಗಾಗಿ, ತಮ್ಮ ಬ್ಯಾಟಿಂಗ್‌ ತಂತ್ರ ಹಾಗೂ ಮನಸ್ಸನ್ನು ಕಳೆದುಕೊಂಡವರ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ. ರನ್‌ ಗಳಿಸುವುದಕ್ಕಿಂತ, ಎದುರಾಳಿ ತಂಡದಿಂದ ಪಾರಾಗುವ ರೀತಿ ಅವರು ನನಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಜೇಮ್ಸ್ ಆಂಡರ್ಸನ್‌ ಅದ್ಭುತ ಔಟ್‌ ಸ್ವಿಂಗ್‌ ಹಾಕುವ ಮೂಲಕ ಪೂಜಾರ ವಿಕೆಟ್‌ ಪಡೆದರು," ಎಂದು ವಾನ್‌ ತಿಳಿಸಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್‌ಗಳು ಚಲಿಸುವ ಚೆಂಡಿನ ವಿರುದ್ಧ ಯಾವುದೇ ಉದ್ದೇಶವನ್ನು ತೋರಿಸಲಿಲ್ಲ ಎಂದು ವಾನ್ ಹೇಳಿದರು. ಎದುರಾಳಿ ಬೌಲಿಂಗ್‌ ದಾಳಿಯ ವಿರುದ್ಧ ಪಾರಾಗುವುದು ಮಾತ್ರ ಇವರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ತಂಡ ಕೇವಲ 78 ರನ್‌ಗಳಿಗೆ ಕುಸಿಯಬೇಕಾಯಿತು ಎಂದು ವಾನ್‌ ಅಭಿಪ್ರಾಯ ಪಟ್ಟರು "ಭಾರತ ತಂಡ ಅದರಲ್ಲೂ ವಿಶೇಷವಾಗಿ ರೋಹಿತ್‌ ಶರ್ಮಾ ಸಿಲುಕಿಕೊಂಡವರ ರೀತಿ ನನಗೆ ಕಾಣಿಸಿದ್ದರು. ಅವರು ಎಂಥಾ ಅದ್ಭುತ ಆಟಗಾರ, ಆದರೂ ಅವರು ರನ್‌ ಗಳಿಸದೆ ಪಾರಾಗುವುದಕ್ಕೆ ಮಾತ್ರ ಆಡುತ್ತಿದ್ದರು. ಜಡೇಜಾ ಕೂಡ ಅದೇ ರೀತಿ ಕಂಡರು. ಆದರೆ, ರಿಷಭ್‌ ಪಂತ್‌ ಅರ್ಧ ಹೊಡೆತಗಳಿಗೆ ಕೈ ಹಾಕುತ್ತಿದ್ದರು. ಇದು ಅವರ ಸ್ವಾಭವಿಕ ಆಟವಲ್ಲ," ಎಂದು ಮೈಕಲ್‌ ವಾನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3sM0NHY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...