ಸಿದ್ದರಾಮಯ್ಯ ಬಡಾವಣೆಗೆ ಕಳೆದ ಐದು ದಿನಗಳಿಂದ ವಿದ್ಯುತ್‌ ಸಂಪರ್ಕ ಕಟ್‌!

ದಾವಣಗೆರೆ: ಹೊಳಲ್ಕೆರೆ ತಾಲೂಕಿನ ರಾಮಗಿರಿ ಸಿದ್ದರಾಮಯ್ಯ ಬಡಾವಣೆಯ ಸುಮಾರು 70 ಕುಟುಂಬಗಳಿಗೆ ಕಳೆದ ಐದು ದಿನಗಳಿಂದ ವಿದ್ಯುತ್‌ ಸಂಪರ್ಕ ಕಟ್‌ ಮಾಡಿದ್ದರಿಂದ ಕತ್ತಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ. ಹದಿನೈದು ವರ್ಷಗಳಿಂದ ಅಲೆಮಾರಿ, ಸುಡಗಾಡು ಸಿದ್ದರು ಗುಡಿಸಲು ನಿರ್ಮಿಸಿಕೊಂಡು ಇಲ್ಲಿ ವಾಸವಾಗಿವೆ. ಬೆಸ್ಕಾಂ ಅಧಿಕಾರಿಗಳು ಏಕಾಏಕಿ ಬಂದು ಟಿಸಿ ಇರುವ ಕಂಬದಲ್ಲಿಯೇ ಕರೆಂಟ್‌ ಕಟ್‌ ಮಾಡಿ ಹೋಗಿದ್ದಾರೆ. ಇದರಿಂದಾಗಿ ಐದು ದಿನಗಳಿಂದ ಮನೆಗಳಲ್ಲಿ ವಿದ್ಯುತ್‌ ಇಲ್ಲವಾಗಿದೆ. ಟಿಸಿ ಸಂಪರ್ಕವನ್ನೇ ತೆಗೆದಿರುವ ಕಾರಣ ಬಡಾವಣೆಯ ಜತೆಗೆ ಗ್ರಾಪಂ ವ್ಯಾಪ್ತಿಯ ಪಂಪ್‌ ಹೌಸ್‌ ಮೋಟರುಗಳು ರನ್‌ ಆಗದೆ ಕುಡಿವ ನೀರು ಕೂಡ ಇಲ್ಲವಾಗಿದೆ ಸಿದ್ದರಾಮಯ್ಯ ಬಡಾವಣೆಯ ನಿವಾಸಿಗಳು ದೂರಿದ್ದಾರೆ. ‘ನಾವು ಕಳೆದ ಹದಿನೈದು ವರ್ಷಗಳಿಂದ ಮನೆಗಳಿಲ್ಲದೆ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದೆವು. ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್‌.ಆಂಜನೇಯ ಅವರು ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಹಾಗೆಯೇ ಬಡಾವಣೆ ನಿರ್ಮಿಸಿ ಸೈಟ್‌ಗಳನ್ನು ಕೂಡ ಹಂಚಿಕೆ ಮಾಡಿ, ನಮಗೆ ವಿದ್ಯುತ್‌ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಆದರೆ ಈಗ ಅಧಿಕಾರಿಗಳು ವಿದ್ಯುತ್‌ ಹಾಗೂ ಕುಡಿಯುವ ನೀರನ್ನೂ ಕಿತ್ತುಕೊಂಡಿದ್ದಾರೆಂದು’ ಅಲ್ಲಿನ ನಿವಾಸಿಗಳ ಅಳಲು ತೋಡಿಕೊಂಡರು. ಸಿದ್ದರಾಮಯ್ಯ ಬಡಾವಣೆಯು ನಾಯಕರಕಟ್ಟೆ (ಗೋಕಟ್ಟೆ)ಯ ಪಕ್ಕದಲ್ಲಿಯೇ ಇರುವ ಕಾರಣ ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮನೆ ಮುಳುಗುವ ಭೀತಿಗೆ ಒಳಗಾಗುತ್ತಿವೆ. ಇದೀಗ ವಿದ್ಯುತ್‌ ಸಂಪರ್ಕವೇ ಇಲ್ಲದೆ ಬಳಲುವಂತಾಗಿದೆ. ನಿವಾಸಿಗಳಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿತ್ತು. ಆದರೆ ಅವು ಯಾವುದೂ ಕೂಡ ಊರ್ಜಿತವಲ್ಲ ಎಂಬ ಮಾತು ಕೇಳಿ ಬಂದಿದ್ದು, ಈಗ ಮತ್ತೊಮ್ಮೆ ಹಕ್ಕುಪತ್ರ ನೀಡಬೇಕಿದೆ. ಪತ್ರ ಇಲ್ಲದೆ ನಿವಾಸಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.


from India & World News in Kannada | VK Polls https://ift.tt/3D5JqGM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...