ಹೊಸದಿಲ್ಲಿ: ಐತಿಹಾಸಿಕ ಲಾರ್ಡ್ಸ್ ಟೆಸ್ಟ್ನಲ್ಲಿ 151 ರನ್ಗಳ ಭರ್ಜರಿ ಗೆಲುವು ಪಡೆದಿದ್ದ ನಾಯಕತ್ವದ ಭಾರತ ತಂಡಕ್ಕೆ ಬುಧವಾರದಿಂದ ಹೆಡಿಂಗ್ಲೆಯಲ್ಲಿ ಶುರುವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಲಿದೆ ಎಂದು ಆಂಗ್ಲರ ಮಾಜಿ ಸ್ಪಿನ್ನರ್ ಮಾಂಟಿ ಪಣೇಸರ್ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಹೋಲಿಕೆ ಮಾಡಿದರೆ, ಮೂರೂ ವಿಭಾಗದಲ್ಲಿ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ಇಂಗ್ಲೆಂಡ್ ನಾಯಕ ಹಾಗೂ ಜಾನಿ ಬೈರ್ಸ್ಟೋವ್ ಅವರಿಗೆ ಹೆಡಿಂಗ್ಲೆ ತವರು ಅಂಗಳವಾಗಿದ್ದರಿಂದ ಭಾರತ ತಂಡಕ್ಕೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಲಿದೆ ಎಂದು ಮಾಜಿ ಸ್ಪಿನ್ನರ್ ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಮಾಂಟಿ ಪಣೇಸರ್, ಭಾರತ ತಂಡ ಅತ್ಯುತ್ತಮ ಬೌಲ್ ಮಾಡಿ ಆದಷ್ಟು ಬೇಗ ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ವಿಕೆಟ್ ಪಡೆದಿದ್ದೇ ಆದಲ್ಲಿ ಕೊಹ್ಲಿ ಪಡೆಗೆ ಮೂರನೇ ಪಂದ್ಯದ ಗೆಲುವಿನಲ್ಲಿ ಯಾವುದೇ ದೊಡ್ಡ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದ್ದಾರೆ. "ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ಜಾನಿ ಬೈರ್ಸ್ಟೋವ್ ಅವರಿಗೆ ಹೆಡಿಂಗ್ಲೆ ತವರು ಅಂಗಳವಾಗಿದೆ. ಅಂದಹಾಗೆ ಲಾರ್ಡ್ಸ್ ಟೆಸ್ಟ್ನಲ್ಲಿ ಭಾರತ ಅಸಾಧಾರಣ ಪ್ರದರ್ಶನ ತೋರಿದೆ. ಆದರೆ, ಹೆಡಿಂಗ್ಲೆಯಲ್ಲಿ ಕೊಹ್ಲಿ ಬಾಯ್ಸ್ ದೊಡ್ಡ ಸವಾಲು ಎದುರಿಸಲಿದ್ದಾರೆ. ಕಳೆದ ಪಂದ್ಯದಲ್ಲಿ ತೋರಿದ್ದ ಬೌಲಿಂಗ್ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಿದ್ದೇ ಆದಲ್ಲಿ ಭಾರತ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ," ಎಂದು ಹೇಳಿದರು. "ಜೋ ರೂಟ್ ಅವರನ್ನು ಬಹುಬೇಗ ಔಟ್ ಮಾಡಿದ್ದೇ ಆದಲ್ಲಿ ಭಾರತ ಗೆಲುವಿನ ನೆಚ್ಚಿನ ತಂಡವಾಗಲಿದೆ. ಮೊಹಮ್ಮದ್ ಸಿರಾಜ್ ಭಾರತ ತಂಡಕ್ಕೆ ದೊಡ್ಡ ಬದಲಾವಣೆಯನ್ನು ತಂದುಕೊಡಬಲ್ಲರು. ಪ್ರಸಕ್ತ ಸರಣಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ಮೊಹಮ್ಮದ್ ಸಿರಾಜ್ ಕಠಿಣ ಸಂಗತಿಗಳನ್ನು ತಂದೊಡ್ಡಿದ್ದಾರೆ. ಅಷ್ಟೇ ಅಲ್ಲದೇ ಸಿರಾಜ್ ಬೌಲಿಂಗ್ ಅನ್ನು ಅರ್ಥ ಮಾಡಿಕೊಳ್ಳುವಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದಾರೆ," ಎಂದರು. ಲಾರ್ಡ್ಸ್ ಟೆಸ್ಟ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ಆಟಗಾರರ ನಡುವೆ ಹೈ ಡ್ರಾಮಾ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಂಟಿ ಪಣೇಸರ್, ವಿರಾಟ್ ಕೊಹ್ಲಿ ನಾಯಕತ್ವದ ಭಾರತ, ಹೆಡಿಂಗ್ಲೆಯಲ್ಲಿಯೂ ಇಂಗ್ಲೆಂಡ್ ಮೇಲೆ ಒತ್ತಡ ಹೇರಲಿದೆ ಎಂದು ಅಂದಾಜಿಸಿದ್ದಾರೆ. "ಹೆಡಿಂಗ್ಲೆ ಟೆಸ್ಟ್ನಲ್ಲಿಯೂ ಇಂಗ್ಲೆಂಡ್ ತಂಡದ ಮೇಲೆ ತಮ್ಮ ಆಟಗಾರರು ಒತ್ತಡ ಹೇರಬೇಕೆಂಬುದನ್ನು ಕೊಹ್ಲಿ ನಿರೀಕ್ಷಿಸುತ್ತಿದ್ದಾರೆ. ಇದೇ ಮನೋಭಾವದೊಂದಿಗೆ ಅವರು ಪಂದ್ಯದಲ್ಲಿ ಮುಂದುವರಿಯಲಿದ್ದಾರೆ. ಕಳೆದ ಪಂದ್ಯದಂತೆ ಈ ಕಾದಾಟದಲ್ಲಿಯೂ ಭಾರತೀಯ ಆಟಗಾರರು ಹೈಡ್ರಾಮಾ ನಡೆಸಲಿದ್ದಾರೆ," ಎಂದು ಮಾಂಟಿ ಪಣೇಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3DciCol