ಬೆಂಗಳೂರು: ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಅನ್ವಯಿಸಿ ರಾಜ್ಯ ಸರಕಾರವು ಮಂಗಳವಾರ ಕೋವಿಡ್ ಮಾರ್ಗಸೂಚಿಯ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಈ ಮೊದಲಿನ ಸುತ್ತೋಲೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಬ್ರಿಟನ್, ಯೂರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಾಜ್ಯದ ಇತರ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ಸ್ಯಾಂಪಲ್ ಮತ್ತು ಸ್ವವಿವರ ನೀಡಿ ತೆರಳಬಹುದು ಎಂದು ತಿಳಿಸಿದೆ. ಆರ್ಟಿಪಿಸಿಆರ್ ಮತ್ತು ನೆಗೆಟಿವ್ ವರದಿ ಹೊಂದಿದ್ದರೂ ಈ ಮೊದಲು ಕೋವಿಡ್ ಪರೀಕ್ಷೆಗೆ ಒಳಗಾಗಿ ಫಲಿತಾಂಶಕ್ಕಾಗಿ ಕಾಯುವುದು ಕಡ್ಡಾಯವಾಗಿತ್ತು. ಏತನ್ಮಧ್ಯೆ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವ ಪ್ರಮಾಣಿಕರು ಈ ಮೊದಲಿನಂತೆ ಸ್ವ್ಯಾಬ್ ಸ್ಯಾಂಪಲ್ ನೀಡಿ, ಕೋವಿಡ್ ವರದಿ ಫಲಿತಾಂಶಕ್ಕಾಗಿ ವಿಮಾನ ನಿಲ್ದಾಣದಲ್ಲೇ ಕಾಯಲು ಸೂಚಿಸಲಾಗಿದೆ. ವರದಿ ನೆಗೆಟಿವ್ ಇದ್ದವರು ವಿಮಾನ ನಿಲ್ದಾಣದಿಂದ ತೆರಳಬಹುದು ಎಂದು ಸರಕಾರ ಆದೇಶದಲ್ಲಿಉಲ್ಲೇಖಿಸಿದೆ. ಕೋವಿಡ್ ಅನುಸಾರವಾಗಿ ಆದೇಶವನ್ನು ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಲಾಗುವುದು. ರಾಜ್ಯ ಸರಕಾರ ಸೂಚಿಸಿದ ಕೋವಿಡ್ ಮಾರ್ಗಸೂಚಿಗಳನ್ನು ಪ್ರಯಾಣಿಕರು ಪಾಲಿಸುವಂತೆ ಸರಕಾರ ಸೂಚಿಸಿದೆ.
from India & World News in Kannada | VK Polls https://ift.tt/3zge7qu