'ಎಲ್ಲೆ ಮೀರಬೇಡಿ, ನಿಯಂತ್ರಣದಲ್ಲಿರಿ' ಕೊಹ್ಲಿಗೆ ಮಾಜಿ ಕ್ರಿಕೆಟಿಗ ವಾರ್ನಿಂಗ್‌!

ಹೊಸದಿಲ್ಲಿ: ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ವಿರಾಟ್‌ ಕೊಹ್ಲಿಯ ಆಕ್ರಮಣಕಾರಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ವಿಕೆಟ್‌ ಕೀಪರ್‌ ಫಾರೂಖ್‌ ಇಂಜಿನಿಯರ್, ಇದು ಮಿತಿ ಮೀರದಂತೆ ನಾಯಕ ಎಚ್ಚರ ವಹಿಸಬೇಕೆಂದು ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ಲಾರ್ಡ್ಸ್ ಟೆಸ್ಟ್‌ ಪಂದ್ಯದಲ್ಲಿನ ವಿರಾಟ್‌ ಕೊಹ್ಲಿಯ ಆಕ್ರಮಣಶೀಲತೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂದಹಾಗೆ ಈ ಪಂದ್ಯದಲ್ಲಿ ಭಾರತ ತಂಡ 151 ರನ್‌ ಗಳಿಂದ ಇಂಗ್ಲೆಂಡ್‌ ತಂಡವನ್ನು ಬಗ್ಗು ಬಡಿದಿತ್ತು, ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು. ಸ್ಪೋರ್ಟ್ಸ್‌ ತಕ್‌ ಜೊತೆ ಮಾತನಾಡುತ್ತಾ , ಉತ್ಸಾಹವನ್ನು ಶ್ಲಾಘಿಸಿದರು ಹಾಗೂ ತಮ್ಮ ಆಕ್ರಮಣಕಾರಿ ಸ್ವಭಾವ ಮಿತಿ ಮೀರದಂತೆ ನಾಯಕ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. "ಆಟದ ಮೇಲಿನ ಉತ್ಸಾಹ ಹಾಗೂ ಆಕ್ರಮಣಕಾರಿ ಸ್ವಭಾವಕ್ಕಾಗಿ ಕೊಹ್ಲಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಅವರು ಆಕ್ರಮಣಕಾರಿ ನಾಯಕ. ಆದರೆ, ಇದೆಲ್ಲವೂ ಮೀತಿ ಮೀರಬಾರದು. ಒಂದು ವೇಳೆ ಎಲ್ಲೆ ಮೀರಿದರೆ, ಅಂಪೈರ್‌ಗಳು ಹಾಗೂ ಮ್ಯಾಚ್‌ ರೆಫರಿಗಳು ಮಧ್ಯೆ ಪ್ರವೇಶಿಸುತ್ತಾರೆ," ಎಂದು ಇಂಜಿನಿಯರ್‌ ಕೊಹ್ಲಿಗೆ ಎಚ್ಚರಿಕೆ ನೀಡಿದ್ದಾರೆ. "ಕೆಲವೊಮ್ಮೆ ನೀವು ಆಕ್ರಮಣಕಾರಿ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಎಲ್ಲಾ ಸಮಯದಲ್ಲಿಯೂ ತೋರಿಸುವುದು ಒಳಿತಲ್ಲ ಎಂಬುದು ನನ್ನ ಅನಿಸಿಕೆ. ಆದರೆ, ಕೊಹ್ಲಿಯ ಆಕ್ರಮಣಕಾರಿ ಸ್ವಭಾವವನ್ನು ನಾನು ಇಷ್ಟಪಡುತ್ತೇನೆ. ಅಲ್ಲದೆ, ಅವರು ಅತ್ಯುತ್ತಮ ನಾಯಕ. ಇದಕ್ಕಾಗಿ ನಾನು ಬೆಂಬಲಿಸುತ್ತೇನೆ. ಇಡೀ ವಿಶ್ವದಲ್ಲಿಯೇ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್‌ ಕೊಹ್ಲಿ ಕೂಡ ಒಬ್ಬರು," ಎಂದು 83ರ ಪ್ರಾಯದ ಇಂಜಿನಿಯರ್‌ ಗುಣಗಾಣ ಮಾಡಿದ್ದಾರೆ. ಲಾರ್ಡ್ಸ್ ಟೆಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಇಂಗ್ಲೆಂಡ್‌ ವೇಗಿ ಜೇಮ್ಸ್ ಆಂಡರ್ಸನ್‌ ನಡುವೆ ಮಾತಿನ ಸಮರ ನಡೆದಿತ್ತು. ಅಷ್ಟೇ ಅಲ್ಲದೆ, ಜಸ್‌ಪ್ರಿತ್‌ ಬುಮ್ರಾ ಜೊತೆಯೂ ಜೇಮ್ಸ್ ಆಂಡರ್ಸನ್‌ ಕಿರಿಕ್‌ ಮಾಡಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಫಾರೂಖ್‌, ಇಂಗ್ಲೆಂಡ್‌ ಆಟಗಾರರು ಯಾವತ್ತೂ ಹಿಂದಕ್ಕೆ ಸರಿಯುವ ಮನಸ್ಥಿತಿಯವರಲ್ಲ. ಅವರು ಯಾವಾಗಲೂ ಉರಿವ ದೀಪಕ್ಕೆ ಎಣ್ಣೆ ಸುರಿಯುವ ಸ್ವಭಾವದವರು ಎಂದು ಆರೋಪಿಸಿದ್ದಾರೆ. "ನಮ್ಮನ್ನು ಅವರು 'ಬ್ಲಡಿ ಇಂಡಿಯನ್ಸ್' ಎಂದಿದ್ದರು. ಅವರು ನಮ್ಮ ಉಚ್ಚಾರಣೆಗಳನ್ನು ಅಪಹಾಸ್ಯ ಮಾಡಿದ್ದರು. ಆದರೆ , ನಾನು ಅವರಿಗೆ ಸರಿಯಾಗಿಯೇ ಉತ್ತರ ನೀಡಿದ್ದೆ. ಹೆಚ್ಚಿನ ರನ್‌ಗಳನ್ನು ಗಳಿಸುವ ಮೂಲಕ ಹಾಗೂ ವಿಕೆಟ್‌ ಕೀಪಿಂಗ್‌ ಮೂಲಕ ಅವರಿಗೆ ನಾನು ತಿರುಗೇಟು ನೀಡುತ್ತಿದ್ದೆ," ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟರು. "ಹೌದು, ಯಾವುದೇ ಅನುಚಿತ ವರ್ತನೆಗಳಿಂದ ಇಂಗ್ಲಿಷ್‌ ಆಟಗಾರರು ಹಿಂದೆ ಸರಿಯುವ ಮನಸ್ಥಿತಿಯವರಲ್ಲ. ಏಕೈಕ ಮಾರ್ಗವನ್ನು ನಿರೀಕ್ಷಿಸುವ ವ್ಯಕ್ತಿಗಳಿವರು. ನಾವು ಭಾರತೀಯರು ಏನು ಹೇಳಿದರೂ ಸುಮ್ಮನೆ ಇರುತ್ತಾರೆ ಎಂಬ ಭಾವನೆ ಅವರದು. ಆದರೆ, ಮೊಟ್ಟ ಮೊದಲ ಬಾರಿ ಅವರಿಗೆ ತಿರುಗೇಟು ನೀಡಿದ ಮೊದಲ ವ್ಯಕ್ತಿ ನಾನಾಗಿದ್ದೇನೆ," ಎಂದು ಫಾರೂಖ್‌ ಇಂಜಿನಿಯರ್‌ ತಮ್ಮ ಹಳೆಯ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3j5NIWK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...