'ಮೈದಾನದಲ್ಲಿ ಉಗ್ರ ಸ್ವರೂಪಿ' ತಮ್ಮ ನಾಯಕ ಕೊಹ್ಲಿ ಬಗ್ಗೆ ಜೇಮಿಸನ್‌ ಹೇಳಿದ್ದಿದು!

ಹೊಸದಿಲ್ಲಿ: ತಂಡದಲ್ಲಿನ ಅನುಭವ ಹಂಚಿಕೊಂಡ ಸ್ಟಾರ್‌ ಆಲ್‌ರೌಂಡರ್‌ , ಮೈದಾನದಲ್ಲಿ ಹಾಗೂ ಮೈದಾನದ ಹೊರಗಡೆ ತಮ್ಮ ನಾಯಕ ವಿರಾಟ್‌ ಕೊಹ್ಲಿಯ ಸ್ವಭಾವವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ನ್ಯೂಜಿಲೆಂಡ್‌ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಕೈಲ್‌ ಜೇಮಿಸನ್‌, 2021ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದರು. ಅಂದುಕೊಂಡಂತೆ, ಹದಿನಾಲ್ಕನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೊದಲ ಭಾಗದಲ್ಲಿ ಜೇಮಿಸನ್‌, ಬೌಲಿಂಗ್‌ ಹಾಗೂ ಬ್ಯಾಟಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಿದ್ದರು. ಇತ್ತಿಚೆಗೆ ಬಾಝ್‌ ಅಂಡ್‌ ಇಝ್ಝಿ ಫಾರ್‌ ಬ್ರೇಕ್‌ಫಾಸ್ಟ್ ಜೊತೆ ಸಂಭಾಷಣೆಯಲ್ಲಿ ಕಿವೀಸ್‌ ಆಲ್‌ರೌಂಡರ್‌, ವಿರಾಟ್‌ ಕೊಹ್ಲಿಯಲ್ಲಿರುವ ಪಂದ್ಯದ ಗೆಲುವಿನ ಉತ್ಸಾಹವನ್ನು ಶ್ಲಾಘಿಸಿದ್ದಾರೆ. " ನಿಜಕ್ಕೂ ಸುಂದರ ವ್ಯಕ್ತಿ. ಅವರ ವಿರುದ್ಧ ಕೆಲ ಪಂದ್ಯಗಳಲ್ಲಿ ಆಡಿದ್ದೇನೆ. ನಿಸ್ಸಂಶಯವಾಗಿ ಅವರು ಮೈದಾನದಲ್ಲಿ ಉಗ್ರ ಸ್ವರೂಪಿಯಾಗಿ ಕಾಣುತ್ತಾರೆ. ಆದರೆ, ಮೈದಾನದ ಹೊರಗಡೆ ಇದಕ್ಕೆ ವಿರುದ್ಧವಾಗಿ ಅಂದರೆ, ತುಂಬಾ ಒಳ್ಳೆಯ ಮತ್ತು ಸ್ವಾಗತಾರ್ಹ ಮನೋಭಾವದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ," ಎಂದರು. "ಅವರು(ಕೊಹ್ಲಿ) ಪಂದ್ಯಗಳ ಗೆಲುವಿನಲ್ಲಿ ಅಪಾರವಾದ ಉತ್ಸಾಹವನ್ನು ತೋರುತ್ತಾರೆ. ಈ ಕಾರಣದಿಂದಲೇ ಅವರು ಮೈದಾನದಲ್ಲಿ ಆಕ್ರಮಣಕಾರಿಯಾಗಿ ಕಾಣುತ್ತಾರೆ. ಆದರೆ, ಇದು ಕೇವಲ ಪಂದ್ಯ ಗೆಲ್ಲುವ ಉತ್ಸಾಹವಷ್ಟೆ," ಎಂದು ಆಲ್‌ರೌಂಡರ್‌ ಕೇಲ್‌ ಜೇಮಿಸನ್‌ ತಮ್ಮ ನಾಯಕನನ್ನು ಬೆಂಬಲಿಸಿದರು. "ಐಪಿಎಲ್‌ ನಂತಹ ದೊಡ್ಡ ಟೂರ್ನಿಯಲ್ಲಿ ಅತ್ಯಂತ ಪ್ರಮುಖ ತಂಡದ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಿದೆ. ನಮ್ಮ ತಂಡದಲ್ಲಿ ಕೆಲ ಅತ್ಯುತ್ತಮ ವಿದೇಶಿ ಆಟಗಾರರಿದ್ದಾರೆ. ಇಂತಹ ಆಟಗಾರರ ಜೊತೆ ಕೆಲಸ ಮಾಡುವುದು ಉತ್ತಮವಾಗಿದೆ," ಎಂದು ಹೇಳಿದ್ದಾರೆ. 14ನೇ ಐಪಿಎಲ್‌ ಟೂರ್ನಿಯ ಮೊದಲ ಅವಧಿಯ ವೇಳೆ ಭಾರತದಾದ್ಯಂತ ಪ್ರಯಾಣಿಸಿ ವಿವಿಧ ಸ್ಥಳಗಳನ್ನು ನೋಡಬೇಕೆಂದು ಬಯಸಿದ್ದೆ. ಆದರೆ, ಲಾಕ್‌ಡೌನ್‌ ಆಗಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಇದರಿಂದ ನನಗೆ ತುಂಬಾ ನಿರಾಶೆಯಾಗಿತ್ತು ಎಂದು ಕೈಲ್‌ ಜೇಮಿಸನ್‌ ಹೇಳಿಕೊಂಡಿದ್ದಾರೆ. "ನಾನು ಭಾರತದಲ್ಲಿ ಇದ್ದಾಗ ಲಾಕ್‌ಡೌನ್‌ ಇತ್ತು. ಅಷ್ಟೇ ಅಲ್ಲದೆ, ಐಪಿಎಲ್‌ ಟೂರ್ನಿಯಲ್ಲಿ ಸಾಕಷ್ಟು ಬಯೋ-ಬಬಲ್‌ಗಳಿದ್ದವು. ಈ ಕಾರಣದಿಂದ ಭಾರತದಲ್ಲಿ ವಿವಿಧ ಸ್ಥಳಗಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ, ಖಂಡಿತಾ ಭಾರತದಲ್ಲಿರುವ ವಿವಿಧ ಸ್ಥಳಗಳನ್ನು ಕಣ್ತುಂಬಿಸಿಕೊಳ್ಳುತ್ತೇನೆ," ಎಂದು ಜೇಮಿಸನ್‌ ತಿಳಿಸಿದ್ದಾರೆ. ಹದಿನಾಲ್ಕನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಎರಡನೇ ಭಾಗವು ಯುಎಇಯಲ್ಲಿ ಸೆ.19 ರಿಂದ ಮುಂದುವರಿಯಲಿದ್ದು, ಕಿವೀಸ್‌ ಆಲ್‌ರೌಂಡರ್‌ ಕೈಲ್‌ ಜೇಮಿಸನ್‌ ಆರ್‌ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XV6Bn7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...