ಬೆಂಗಳೂರು: ಕಳೆದ ಹತ್ತು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದ ಉಪರಾಷ್ಟ್ರಪತಿ ಮತ್ತು ಕುಟುಂಬ ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ತೆರಳಿದೆ. ಬುಧವರಾ ಬೆಳಗ್ಗೆ 9.30ಕ್ಕೆ ಎಚ್ ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಉಪರಾಷ್ಟ್ರಪತಿಗಳು ದೆಹಲಿಗೆ ತೆರಳಿದರು. ಈ ಸಂದರ್ಭದಲ್ಲಿ ಅವರನ್ನು ಬೀಳ್ಕೊಟ್ಟ ಸಿಎಂ ಅವರು ವೆಂಕಯ್ಯ ನಾಯ್ಡು ಅವರಿಗೆ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಹೂಗುಚ್ಛ ನೀಡುವ ಪದ್ದತಿಗೆ ಸಿಎಂ ಬೊಮ್ಮಾಯಿ ತಿಲಾಂಜಲಿ ಹಾಡಿದ್ದಾರೆ. ಹಾರ ತುರಾಯಿ ಬದಲಾಗಿ ಪುಸ್ತಕಗಳನ್ನು ನೀಡಬೇಕು ಎಂಬ ಆದೇಶವನ್ನು ಮಾಡಲಾಗಿದೆ. ಅದರಂತೆ ಹತ್ತು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದ ವೆಂಕಯ್ಯ ನಾಯ್ಡು ಅವರಿಗೆ ಸಿಎಂ ಬೊಮ್ಮಾಯಿ ಅವರು ಉಡುಗೊರೆಯಾಗಿ ಪ್ರೈಡ್ ಆಂಡ್ ಪ್ರಿಜುಡಿಸ್ ಎಂಬ ಪುಸ್ತಕವನ್ನು ನೀಡಿದ್ದಾರೆ. ಜೇನ್ ಆಸ್ಟೆನ್ ಬರೆದಿರುವ ಈ ಪುಸ್ತಕ ಪ್ರಸಿದ್ದ ಕಾದಂಬರಿಯಾಗಿದೆ. ಈ ಪುಸ್ತಕವನ್ನು ಉಪರಾಷ್ಟ್ರಪತಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಂಸದ ಪಿ ಸಿ ಮೋಹನ್ ಉಪಸ್ಥಿತರಿದ್ದರು.
from India & World News in Kannada | VK Polls https://ift.tt/3zhzSpU