ಈರುಳ್ಳಿಗೆ ಮಿತಿ ಮೀರಿದ ಕೊಳೆರೋಗ; ದಾರಿ ಕಾಣದೆ ಎಕರೆಗಟ್ಟಲೆ ಬೆಳೆಯನ್ನೇ ನಾಶ ಮಾಡ್ತಿದ್ದಾರೆ ರೈತರು!

ಚಳ್ಳಕೆರೆ: ಈರುಳ್ಳಿ ಬೆಳೆಗೆ ಮೀತಿ ಮೀರಿದ ಕೊಳೆ ರೋಗ ಬಂದು ರೈತ ಬೆಳೆ ಉಳಿಸಿಕೊಳ್ಳಲಾಗದೆ ಗಟ್ಟಿ ನಿರ್ಧಾರ ಬಂದು ಟ್ರ್ಯಾಕ್ಟರ್‌ ಮೂಲಕ ಬೆಳೆ ನಾಶಪಡಿಸುತ್ತಿದ್ದಾರೆ. ನೇರಳೆ ಮಚ್ಚೆಯಿಂದ ಸುಳಿ ಒಣಗಿ ನೆಲಕ್ಕೆ ಬೀಳುತ್ತಿದ್ದರೆ. ಇತ್ತ ಭೂಮಿಯಲ್ಲಿರುವ ಉಳ್ಳಾಗಡ್ಡೆ ಬುಡ ಕೊಳೆಯುತ್ತ ಬರುತ್ತಿದೆ. ಹೀಗಾಗಿ ಇಡೀ ಬೆಳೆಯೇ ಕೈಬಿಟ್ಟು ಹೋಗುತ್ತಿರುವುದರಿಂದ ಒಬ್ಬರ ನಂತರ ಒಬ್ಬ ರೈತರು ಹೊಲದಲ್ಲಿ ಟ್ರ್ಯಾಕ್ಟರ್‌ ಓಡಿಸಿ ಬೆಳೆ ನಾಶ ಮಾಡುತ್ತಿರುವುದು ತಾಲೂಕಿನಲ್ಲಿ ಕಂಡು ಬರುತ್ತಿದೆ. ಕಳೆದ 3 ವರ್ಷದಿಂದಲೂ ಈರುಳ್ಳಿ ಬೆಳೆ ರೈತರನ್ನು ಕೈಹಿಡಿಯುತ್ತಿಲ್ಲ. ಇದರ ನಡುವೆ ಕೋವಿಡ್‌ ಆರ್ಥಿಕ ಸಂಕಷ್ಟ ಹೀಗೆ ಎರಡರ ನಡುವೆ ರೈತರು ಸಿಕ್ಕಿಕೊಂಡು ಹೈರಾಣರಾಗುತ್ತಿದ್ದಾರೆ. ಕಳೆದ ತಿಂಗಳು ಬೆಳೆಗೆರೆ ಗ್ರಾಮದ ರೈತ ಶ್ರೀನಿವಾಸ್‌ ತನ್ನ 4 ಎಕರೆ ಈರುಳ್ಳಿ ಬೆಳೆಯನ್ನು ಮೊದಲಿಗೆ ಕುರಿ, ಮೇಕೆ ಮೇಯಿಸಿ ನಂತರ ಟ್ರ್ಯಾಕರ್‌ ಮೂಲಕ ನಾಶಪಡಿಸಿದ್ದಾರೆ. ಇತ್ತ ಕಳೆದ ವಾರ ಬತ್ತಯ್ಯನಹಟ್ಟಿಯ ಟಿ. ಸೂರಯ್ಯ ಸಹಾ 5 ಎಕರೆ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸಿದ್ದಾರೆ. ಈಗ ವಿಡುಪನಕುಂಟೆಯ ವೀರಣ್ಣ ತನ್ನ 5 ಎಕರೆಯಲ್ಲಿದ್ದ 2 ತಿಂಗಳಿನ ಬೆಳೆಯನ್ನು ಟ್ರ್ಯಾಕ್ಟರ್‌ ಓಡಿಸಿ ನಾಶಪಡಿಸಿದ್ದಾರೆ. ರೋಗಗ್ರಸ್ತ ಆಗಿರುವ ಈರುಳ್ಳಿಯಿಂದ ಆವಕವಿಲ್ಲದೆ ಒಂದು ಕಡೆ ಗಗನಕ್ಕೇರುತ್ತಿರುವ ಬೆಲೆ. ಇನ್ನೊಂದೆಡೆ ಅಳಿದುಳಿದ ಗೆಡ್ಡೆಯಿಂದಾದರೂ ಲಾಭದ ನಿರೀಕ್ಷೆಯಲ್ಲಿದ್ದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಕೊಳೆಯುತ್ತಿರುವ ಈರುಳ್ಳಿಯನ್ನು ಜಮೀನಿನ ಹರಿವಿನಲ್ಲೇ ಬಿಡುತ್ತಿದ್ದಾರೆ. ಈರುಳ್ಳಿ ಬೆಳೆ ಲಾಟರಿ ಇದ್ದಂತೆ, ಹೋದ ವರ್ಷ ಮಳೆ ಕೈಕೊಟ್ಟು ಬೆಳೆ ಹಾನಿಯಾಯಿತು. ಕಳೆದ ವರ್ಷ ಮಳೆ ಜಾಸ್ತಿ ಮತ್ತು ರೋಗ ಹತೋಟಿಗೆ ಬಾರದೆ ಕೈಕೊಟ್ಟಿತು. ಈ ಬಾರಿ ಮತ್ತದೇ ಕೊಳೆ ರೋಗ ಮತ್ತು ಮೋಡ ಮುಸುಕಿದ ವಾತಾರಣದಿಂದ ಬೆಳೆ ಹಾನಿಯಾಗುತ್ತಿದೆ. ಹೀಗಾಗಿ ಉಳ್ಳಾಗಡ್ಡೆ ಬೆಳೆದು ಕುಬೇರನಾಗುವ ಕನಸು ಕಂಡಿದ್ದ ರೈತ ಈಗ ಕುಚೇಲನಾಗುವಂತಾಗಿದೆ. ದುಬಾರಿ ಬೀಜ: ಈರುಳ್ಳಿ ಹುಟ್ಟುವಳಿಯಿಂದಲೂ ಒಂದು ಕಡೆ ರೋಗ ಭಾದೆ ಮತ್ತೊಂದೆಡೆ ಕಳೆಯಿಂದ ನಲಗುತ್ತಿದ್ದರಿಂದ ಕಳೆ ತೆಗೆಸುವುದು, ಔಷಧ ಹೊಡೆಯುವುದು. ಗೊಬ್ಬರ ಚಲ್ಲುವುದು ಮಾಡಿದರೂ ಬೆಳೆ ಉಳಿಸಿಕೊಳ್ಳಲು ಆಗುತ್ತಿಲ್ಲ. ಆದರೆ, ಕಾಂಚಾಣ ಮಾತ್ರ ನೀರಿನಂತೆ ಖರ್ಚಾಗುತ್ತಿದೆ. ಕೆಜಿಗೆ 2ರಿಂದ 2500 ರೂ.ದುಬಾರಿ ಬೆಲೆಯ ಬೀಜ, ಕೂಲಿಗೆ 250 ರೂ., ಗೊಬ್ಬರ, ಔಷಧ ಸೇರಿ ಎಕರೆಗೆ ಸಾವಿರಾರು ರೂ. ಖರ್ಚು ಮಾಡುತ್ತಾರೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಮತ್ತೆ ಮಳೆಯ ಪ್ರವಾಹದಿಂದ ಅಲ್ಲಿನ ಬೆಳೆ ಕೊಚ್ಚಿಕೊಂಡು ಹೋಯಿತು. ಇತ್ತ ರಾಜ್ಯದಲ್ಲೆ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಯ ಬಯಲು ಸೀಮೆ ರೈತರು ಈ ಬಾರಿಯಾದರೂ ಲಾಟರಿ ಹೊಡೆಯವುದು ಎಂಬ ಕನಸು ಕಂಡಿದ್ದರು. ಆದರೆ, ನೇರಳೆ ಮಚ್ಚೆ ರೋಗ, ಬುಡ ಕೊಳೆ ರೋಗದಿಂದ ಬೆಳೆ ನಲುಗಿ ಹೋಗಿದೆ.


from India & World News in Kannada | VK Polls https://ift.tt/3mlY470

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...