ಹೈದರಾಬಾದ್: ಮಾಜಿ ಪ್ರಧಾನಿ ಅವರು ಭಾರತದ ಆರ್ಥಿಕತೆ ಸುಧಾರಣೆಯ ಪಿತಾಮಹ ಎಂದು ಕರೆದಿರುವ ಮುಖ್ಯ ನ್ಯಾಯಮೂರ್ತಿ , ಕಾಂಗ್ರೆಸ್ನ ಹಿರಿಯ ನಾಯಕನ ಆಡಳಿತದಲ್ಲಿ ದೇಶದ ಸುಧಾರಣಾ ಪರ್ವ ಆರಂಭವಾಯಿತು ಎಂದು ಬಣ್ಣಿಸಿದ್ದಾರೆ. ಹೈದರಾಬಾದ್ನ ಅಂತಾರಾಷ್ಟ್ರೀಯ ನ್ಯಾಯ ನಿರ್ಣಯ ಮತ್ತು ಮಧ್ಯಸ್ಥಿಕೆ ಕೇಂದ್ರದಲ್ಲಿ ಮಾತನಾಡಿದ ಅವರು, ಸಂಧಾನ ಹಾಗೂ ಮಧ್ಯಸ್ಥಿಕೆಗಳ ಮೂಲಕ ವಿವಾದ ಬಗೆಹರಿಸುವುದು ಭಾರತದ ಸಂಸ್ಕೃತಿಯ ಭಾಗವಾಗಿದೆ ಎಂದಿದ್ದಾರೆ. 'ನಿಮಗೆ ಗೊತ್ತೇ, ಭಾರತದ ಆರ್ಥಿಕ ಸುಧಾರಣೆಗಳ ಪಿತಾಮಹ ಬೇರಾರೂ ಅಲ್ಲ, ಅದು ಪಿವಿ ನರಸಿಂಹ ರಾವ್. ತೆಲಂಗಾಣದ ಮಗ. ಅವರ ನಾಯಕತ್ವದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಆರಂಭವಾದವು' ಎಂದು ಸಿಜೆಐ ಹೇಳಿದ್ದಾರೆ. 'ಈ ನ್ಯಾಯನಿರ್ಣಯ ಮತ್ತು ಮಧ್ಯಸ್ಥಿಕೆಗಳನ್ನು ನಾವು ಹೊಸದಾಗಿ ಆವಿಷ್ಕರಿಸಿದ ವ್ಯವಸ್ಥೆಗಳಲ್ಲ. ನಮ್ಮ ಎಲ್ಲ ವಿವಾದಗಳನ್ನೂ ಮಧ್ಯಸ್ಥಿಕೆಗಳು, ಸಂಧಾನ ಹಾಗೂ ಸಮನ್ವಯದ ಮೂಲಕ ಪರಿಹರಿಸುವುದು ಭಾರತದ ಸಂಸ್ಕೃತಿಯಲ್ಲಿಯೇ ಇತ್ತು. ಪ್ರತಿದಿನವೂ ನಾವು ನಮ್ಮ ಮಕ್ಕಳು, ಸಹೋದರರು ಮತ್ತು ಸ್ನೇಹಿತರೊಂದಿಗೆ ಸಂಧಾನ ಮಾಡುತ್ತಿರುತ್ತೇವೆ' ಎಂದಿದ್ದಾರೆ.
from India & World News in Kannada | VK Polls https://ift.tt/3y6jNSD