ವಿರೋಧಿ ಬಣ ಹಣಿಯಲು ಮುಂದಾದ ತಾಲಿಬಾನ್‌; ಕಾಬೂಲ್‌ನಿಂದ ಪಂಜ್‌ಶಿರ್‌ ಕಣಿವೆಯತ್ತ ಉಗ್ರರು

ಕಾಬೂಲ್‌: ಅಪ್ಘಾನಿಸ್ತಾನವನ್ನು ಭಾಗಶಃ ವಶಪಡಿಸಿಕೊಂಡು ಅಟ್ಟಹಾಸ ಮೆರೆಯುತ್ತಿರುವ ಉಗ್ರರಿಗೆ ಕಣಿವೆಯಲ್ಲಿ ಪ್ರಬಲ ಪ್ರತಿರೋಧ ವ್ಯಕ್ತವಾಗಿದೆ. ಅನ್ನು ವಶಪಡಿಸಿಕೊಂಡು ಬೀಗುತ್ತಿರುವ ತಾಲಿಬಾನ್‌ ಈಗ ಪಂಜ್‌ಶಿರ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರನ್ನು ಕಳುಹಿಸಿದೆ. ಆಪ್ಘನ್‌ ರಾಜಧಾನಿ ಕಾಬೂಲ್‌ನಿಂದ ಉತ್ತರಕ್ಕಿರುವ ಪಂಜ್‌ಶಿರ್‌ ಕಣಿವೆಯನ್ನು ತಾಲಿಬಾನ್‌ ಉಗ್ರರಿಗೆ ಬಿಟ್ಟುಕೊಡಲು ಅಲ್ಲಿನ ಸರ್ಕಾರಿ ಸೇನೆ, ಬುಡಕಟ್ಟು ಸೇರಿ ಇತರೆ ಹೋರಾಟಗಾರರು ಒಪ್ಪಿಲ್ಲ. ಈ ಹಿನ್ನೆಲೆ ಪಂಜ್‌ಶಿರ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ತಾಲಿಬಾನ್‌ ತನ್ನ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಪಂಜಶಿರ್‌ ಪ್ರಾಂತ್ಯಕ್ಕೆ ಕಳುಹಿಸಿದ್ದು, ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗಿದೆ. ಭಾನುವಾರ ಈ ಬಗ್ಗೆ ಟ್ವೀಟ್‌ ಮಾಡಿರುವ ತಾಲಿಬಾನ್‌, ಪಂಜ್‌ಶಿರ್‌ ಕಣಿವೆಯನ್ನು ಶಾಂತಿಯುತವಾಗಿ ಹಸ್ತಾಂತರಿಸಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಅನಿವಾರ್ಯವಾಗಿ ಕಾರ್ಯಾಚರಣೆ ನಡೆಸಿ ಪಂಜ್‌ಶಿರ್‌ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಇಸ್ಲಾಮಿಕ್‌ ಎಮಿರೇಟ್‌ನ ನೂರಾರು ಉಗ್ರರು ಹೋಗುತ್ತಿದ್ದಾರೆ ಎಂದು ಹೇಳಿತ್ತು. ಅಪ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ್ನು ವಶಕ್ಕೆ ಪಡೆದ ನಂತರ ರಕ್ಷಣೆಗಾಗಿ ಅನೇಕ ಜನರು ಪಂಜ್‌ಶಿರ್‌ ಪ್ರಾಂತ್ಯದ ಕಡೆ ಧಾವಿಸುತ್ತಿದ್ದಾರೆ ಎಂದು ತಾಲಿಬಾನ್‌ ವಿರೋಧಿ ಬಣದ ವಕ್ತಾರರು ಹೇಳಿದ್ದಾರೆ. ಇನ್ನು, ಅಪ್ಘಾನಿಸ್ತಾನದ ಜನಪ್ರಿಯ ಮುಜಾಹಿದ್ದೀನ್‌ ಕಮಾಂಡರ್‌ ಅಹ್ಮದ್‌ ಶಾ ಮಸೂದ್‌ ಪುತ್ರ ಅಹ್ಮದ್‌ ಮಸೂದ್‌ ತಾಲಿಬಾನ್‌ ವಿರೋಧಿ ಹೋರಾಟ ನಡೆಸುತ್ತಿದ್ದಾರೆ. ಸೆಪ್ಟೆಂಬರ್‌ 11, 2001ರ ವಿಶ್ವ ವಾಣಿಜ್ಯ ಮಳಿಗೆ ಮೇಲಿನ ದಾಳಿಗೂ ಎರಡು ದಿನದ ಮುಂಚೆ ಅಲ್‌ಖೈದಾ ಅಹ್ಮದ್‌ ಶಾ ಮಸೂದ್‌ನನ್ನು ಹತ್ಯೆ ಮಾಡಿತ್ತು. ಈ ಹಿನ್ನೆಲೆ ತಾಲಿಬಾನ್‌ ಉಗ್ರರ ವಿರುದ್ಧ ಹೋರಾಟ ರೂಪಿಸಿರುವ ಅಹ್ಮದ್‌ ಮಸೂದ್‌ ಸುಮಾರು 9 ಸಾವಿರಕ್ಕೂ ಅಧಿಕ ಹೋರಾಟಗಾರರನ್ನು ಸಂಘಟಿಸಿದ್ದು, ತಾಲಿಬಾನ್‌ಗೆ ಪ್ರಬಲ ಪ್ರತಿರೋಧ ಒಡ್ಡುತ್ತಿದ್ದಾರೆ.


from India & World News in Kannada | VK Polls https://ift.tt/2Wh5tsW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...