ವಾಹನ ಡಿಕ್ಕಿ ಹೊಡೆಸಿ ದಂಪತಿ ಕೊಲೆ..! ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಚನ್ನರಾಯಪಟ್ಟಣ (): ಆಸ್ತಿ ಆಸೆಗಾಗಿ ದಂಪತಿಯನ್ನು ಮಾಡಿದ ನಾಲ್ವರು ಆರೋಪಿಗಳಿಗೆ ಪಟ್ಟಣದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಎನ್‌. ಸಂಶಿ ವಿಧಿಸಿ ತೀರ್ಪು ನೀಡಿದ್ದಾರೆ. ತಾಲೂಕಿನ ಬಾಗೂರು ಹೋಬಳಿ ಬ್ಯಾಡರಹಳ್ಳಿಯ ಮೋಹನ್‌ಕುಮಾರ್‌ ಮತ್ತು ಅವರ ಪತ್ನಿ ಪವಿತ್ರಾ ಕೊಲೆಯಾದವರು. ಇದೇ ಗ್ರಾಮದ ಲತೇಶ್‌, ಈತನ ತಂದೆ ಜಗದೀಶ ಮತ್ತು ಪವಿತ್ರಾ ತಂಗಿಯ ಗಂಡ ನಾಗರಾಜ್‌ ಹಾಗೂ ಸಾತೇನಹಳ್ಳಿಯ ದೀಪಕ್‌ ಆರೋಪಿಗಳು. ಘಟನೆ ನಡೆದ 6 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. ಮೃತ ಮೋಹನ್‌ಕುಮಾರ್‌ ಪತ್ನಿ ಪವಿತ್ರಾಳ ಸಹೋದರಿ ಪ್ರತಿಪ ಅವರ ಪತಿ ನಾಗರಾಜ್‌, ತನ್ನ ಮಾವನ ಆಸ್ತಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಇದೇ ಉದ್ದೇಶಕ್ಕಾಗಿ 2015ರ ಜೂನ್‌ 17ರಂದು ಮೋಹನ್‌ಕುಮಾರ್‌ ಮತ್ತು ಪವಿತ್ರಾ ಬ್ಯಾಡರಹಳ್ಳಿಯಿಂದ ಚನ್ನರಾಯಪಟ್ಟಣಕ್ಕೆ ಬರುತ್ತಿದ್ದ ವೇಳೆ ಲತೇಶ್‌ ಮತ್ತು ದೀಪಕ್‌ ಟಾಟಾ ಸುಮೋದಲ್ಲಿ ಹಿಂದಿನಿಂದ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳು ಸ್ಥಳದಲ್ಲೇ ಮೃತಪಟ್ಟರು. ಇವರ ಹಿಂದೆ ಬರುತ್ತಿದ್ದ ಅಣ್ಣೇಗೌಡ ಮತ್ತು ವಿಜಯಕುಮಾರ್‌ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿದ್ದ ಭೀಮಾಶಂಕರ್‌ ಗುಳೇದ್‌ ಹಾಗೂ ವಿಜಯಕೃಷ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಲತೇಶ್‌, ಜಗದೀಶ್‌ ಮತ್ತು ಮೋಹನ್‌ಕುಮಾರ್‌ ನಡುವೆ ಈ ಹಿಂದೆಯೂ ಸಣ್ಣ ಪುಟ್ಟ ಜಗಳ ನಡೆದಿದ್ದು ಘಟನೆಗೆ ವರ್ಷದ ಮೊದಲು ಇದೇ ಆರೋಪಿಗಳು ಬೇರೆ ವಾಹನದಿಂದ ದಂಪತಿಗಳಿಗೆ ಗುದ್ದಿಸಿ ಕೊಲೆ ಮಾಡುವ ಪ್ರಯತ್ನ ನಡೆಸಿ ವಿಫಲರಾಗಿದ್ದರೆಂದು ಸರಕಾರಿ ಅಭಿಯೋಜಕ ಕೆ.ಎಸ್‌.ನಾಗೇಂದ್ರ ತಿಳಿಸಿದ್ದಾರೆ. ಎಲ್ಲ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜತೆಗೆ ತಲಾ 25 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಮೂರನೇ ಆರೋಪಿಯಾದ ನಾಗರಾಜ ಇದೇ ಪ್ರಕರಣದಲ್ಲಿ ನಕಲಿ ಚೆಕ್‌ ನೀಡಿ ವಂಚಿಸಿದ ಹಿನ್ನೆಲೆಯಲ್ಲಿ ಆತನಿಗೆ 4 ವರ್ಷ ಕಠಿಣ ಕಾರಾಗೃಹ ಮತ್ತು 20 ಸಾವಿರ ರೂ. ಹೆಚ್ಚುವರಿ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ. ಮೃತ ಮೋಹನ್‌ ಕುಮಾರ್‌ ಮತ್ತು ಪವಿತ್ರಾರ ಇಬ್ಬರು ಅಪ್ರಾಪ್ತ ಮಕ್ಕಳಿಗೆ ದಂಡದ ಮೊತ್ತದಲ್ಲಿ ತಲಾ 35 ಸಾವಿರ ರೂ.ಗಳನ್ನು ಪರಿಹಾರವಾಗಿ ನೀಡುವಂತೆಯೂ ತೀರ್ಪಿನಲ್ಲಿಆದೇಶಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಬಿ.ನಾಗಸುಂದ್ರಮ್ಮ ಸಾಕ್ಷಿದಾರರ ವಿಚಾರಣೆ ನಡೆಸಿದ್ದು, ಕೆ. ಎಸ್‌. ನಾಗೇಂದ್ರ ವಾದ ಮಂಡಿಸಿದ್ದರು.


from India & World News in Kannada | VK Polls https://ift.tt/3molbO9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...