ಸಲಹೆಗಾರರನ್ನು ಕಿತ್ತು ಹಾಕಿ, ಇಲ್ಲವೇ ನಾವೇ ಆ ಕೆಲಸ ಮಾಡುತ್ತೇವೆ: ಸಿಧುಗೆ ಕಾಂಗ್ರೆಸ್ ಎಚ್ಚರಿಕೆ

ಹೊಸದಿಲ್ಲಿ: ಬಂಡಾಯದ ಬೆದರಿಕೆ ಮೂಲಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದ , ಈಗ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಕ್ಕಿಳಿಸುವ ಪ್ರಯತ್ನ ತೀವ್ರಗೊಳಿಸಿದ್ದಾರೆ. ಆದರೆ ಅದಕ್ಕೆ ಪಕ್ಷದ ಹೈಕಮಾಂಡ್ ತೀಕ್ಷ್ಣ ಎಚ್ಚರಿಕೆ ನೀಡಿದೆ. ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರ ವಿರುದ್ಧ ಅಮರಿಂದರ್ ಸಿಂಗ್ ಹರಿಹಾಯ್ದಿದ್ದರು. ಇದು ಮತ್ತೊಂದು ಸುತ್ತಿನ ಬಂಡಾಯಕ್ಕೆ ಕಾರಣವಾಗಿತ್ತು. ಈಗ ಸಿಧುಗೆ ನೇರ ಎಚ್ಚರಿಕೆ ನೀಡಿರುವ ಪಕ್ಷ, ತಮ್ಮ ಸಲಹೆಗಾರರನ್ನು ಕಿತ್ತುಹಾಕಬೇಕು, ಇಲ್ಲವೇ ನಾವೇ ಅವರನ್ನು ತೊಲಗಿಸುತ್ತೇವೆ ಎಂದು ಸೂಚಿಸಿದೆ. ಸಿಧು ತಂಡವನ್ನು ಇತ್ತೀಚೆಗಷ್ಟೇ ಸೇರಿಕೊಂಡಿದ್ದ ಪ್ಯಾರೆ ಲಾಲ್ ಗರ್ಗ್ ಮತ್ತು ಮಲ್ವಿಂದರ್ ಮಾಲಿ ಅವರು ಕಳೆದ ವಾರ ಪಾಕಿಸ್ತಾನ ಹಾಗೂ ಕಾಶ್ಮೀರ ಕುರಿತು ಫೇಸ್‌ಬುಕ್‌ನಲ್ಲಿ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ಕಾಶ್ಮೀರವನ್ನು ಭಾರತ ಹಾಗೂ ಪಾಕಿಸ್ತಾನ ಎರಡೂ ಅಕ್ರಮವಾಗಿ ಆಕ್ರಮಿಸಿಕೊಂಡಿವೆ ಎಂದು ಮಾಲಿ ಹೇಳಿದ್ದರು. ಈ ಸಲಹೆಗಾರರನ್ನು ಪಕ್ಷ ನೇಮಕ ಮಾಡಿಲ್ಲ. ಅವರನ್ನು ತೆಗೆದುಹಾಕುವಂತೆ ನಾವು ಸಿಧುಗೆ ಸೂಚಿಸಿದ್ದೇವೆ. ಸಿಧು ಅದನ್ನು ಮಾಡದೆ ಇದ್ದರೆ ನಾನು ಮಾಡುತ್ತೇನೆ. ಪಕ್ಷಕ್ಕೆ ಮುಜುಗರ ಉಂಟುಮಾಡುವಂತಹ ಜನರು ನಮಗೆ ಬೇಡ ಎಂದು ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ.


from India & World News in Kannada | VK Polls https://ift.tt/3jeAnvg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...