ನಾರಾಯಣ ಗುರುಗಳ ಹೆಸರಲ್ಲಿ ನಿಗಮ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ: ಸಚಿವ ಸುನಿಲ್ ಕುಮಾರ್

ಉಡುಪಿ: ಹಿಂದುಳಿದ ವರ್ಗಗಳ ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ನಿಗಮ ಸ್ಥಾಪನೆಯ ಚಿಂತನೆಯಿದೆ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಬನ್ನಂಜೆಯ ಬಿಲ್ಲವರ ಸೇವಾ ಸಂಘದ ಸಹಯೋಗದಲ್ಲಿ ಬನ್ನಂಜೆ ಶ್ರೀನಾರಾಯಣಗುರು ಮಂದಿರದ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ನಿಗಮ ಸ್ಥಾಪನೆ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ್ದು, ವಿವಿಧ ಇಲಾಖೆಗಳ ಜತೆಗೆ ನಿಗಮದ ವ್ಯಾಪ್ತಿ, ಅನುದಾನ ಕುರಿತಂತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಾಗುವುದು ಎಂದರು. ಬ್ರಹ್ಮಶ್ರೀ ನಾರಾಯಣಗುರುಗಳು ಕಂಡ ಆದರ್ಶ ಸಮಾಜದಲ್ಲಿ ಇನ್ನೂ ಮೇಲು ಕೀಳು, ಜಾತಿ ಸಂಘರ್ಷ, ಅಸಮಾನತೆಯ ಧ್ವನಿ ಕಾಣುತ್ತಿದ್ದು, ಸಂಘರ್ಷಕ್ಕೆ ಆಸ್ಪದವಿಲ್ಲದಂತೆ ಸಮಾಜದ ಜನರನ್ನು ಒಗ್ಗೂಡಿಸಬೇಕಿದೆ. ಅನ್ಯರನ್ನು ನೋಯಿಸದೆ, ಭಾವನೆ ಕೆರಳಿಸದೆ ಆದರ್ಶ ಭಾವನೆಯ ಬೀಜವನ್ನು ಸಮಾಜದಲ್ಲಿ ಬಿತ್ತಿ ಬೆಳೆಸುವ ಸವಾಲಿದೆ. ಶಿಕ್ಷಣ ಪಡೆವ, ದೇವಳ ಪ್ರವೇಶಿಸುವ ಅವಕಾಶವಿರದ ಕಾಲದಲ್ಲಿ ಸಂಘರ್ಷಕ್ಕಿಳಿಯದೆ ಶಿಕ್ಷಣ ಸಂಸ್ಥೆ, ದೇವಳ ಸ್ಥಾಪನೆ ಮೂಲಕ ಪರಿವರ್ತನೆಯ ಮೌನ ಕ್ರಾಂತಿಯನ್ನು ನಾರಾಯಣಗುರುಗಳು ಮಾಡಿದ್ದಾರೆ ಎಂದರು. ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿ, ಮಕ್ಕಳಿಗೆ ನಾರಾಯಣಗುರುಗಳ ಜೀವನಚರಿತ್ರೆಯ ಪಾಠ ಬೋಧನೆಯಾಗಬೇಕು. ಸಂಸ್ಕೃತ, ವೇದಾಧ್ಯಯನವನ್ನು ಸಮುದಾಯದ ಜನರಿಗೂ ಮಾಡಿಸಿ ಬ್ರಹ್ಮಶ್ರೀಗಳು ಸಮಾಜದಲ್ಲಿ ಪರಿವರ್ತನೆ ತಂದಿದ್ದಾರೆ ಎಂದರು. ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಆ ಕಾಲದ ನಂಬಿಕೆಗಳೆಲ್ಲವನ್ನೂ ಮೀರಿ ತುಳಿತಕ್ಕೊಳಗಾದ, ಸಮಾಜದ ಕಟ್ಟಕಡೆಯ ಜನರನ್ನು ಮುಖ್ಯವಾಹಿನಿಗೆ ತರುವಲ್ಲಿ ನಾರಾಯಣಗುರುಗಳು ಯಶಸ್ವಿಯಾಗಿದ್ದಾರೆ, ಧ್ವನಿಯಿಲ್ಲದವರಿಗೆ ಬದುಕುವ ಹಕ್ಕು ನೀಡಿದ್ದಾರೆ, ಜನಪರ ಚಳವಳಿ ನಡೆಸಿದ್ದಾರೆ ಎಂದು ಹೇಳಿದರು. ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಎ. ರಾಘವೇಂದ್ರ ಕಿಣಿ, ಜಿಲ್ಲಾಕಾರಿ ಜಿ. ಜಗದೀಶ್, ಜಿ. ಪಂ. ಸಿಇಒ ಡಾ. ನವೀನ್ ಭಟ್ ವೈ, ಜಿಲ್ಲಾ ಪೆÇಲೀಸ್ ವರಿಷ್ಠಾಕಾರಿ ಎನ್. ವಿಷ್ಣುವರ್ಧನ, ನಗರಸಭೆ ಸದಸ್ಯೆ ಸವಿತಾ ಹರೀಶ್ ರಾಮ್ ಬನ್ನಂಜೆ ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3mqgQK8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...