'ಭಾರತ ತಂಡದಲ್ಲಿ ಸುರಕ್ಷಿತ ವಾತಾವರಣವಿದೆ': ಕೊಹ್ಲಿ ನಾಯಕತ್ವಕ್ಕೆ ಹಾಗ್‌ ಮೆಚ್ಚುಗೆ!

ಹೊಸದಿಲ್ಲಿ: ನಾಯಕತ್ವವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್‌ , ಭಾರತ ತಂಡದಲ್ಲಿ ಸುರಕ್ಷಿತ ವಾತಾವರಣವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ 2014ರಲ್ಲಿಯೇ ಭಾರತ ಟೆಸ್ಟ್‌ ತಂಡದ ನಾಯಕತ್ವ ಸ್ವೀಕರಿಸಿದ್ದ ವಿರಾಟ್‌ ಕೊಹ್ಲಿ, ಸೀಮಿತ ಓವರ್‌ಗಳ ತಂಡದ ನಾಯಕತ್ವಕ್ಕಾಗಿ ಇನ್ನೂ ಮೂರು ವರ್ಷಗಳ ಕಾಲ ಕಾಯಬೇಕಾಗಿತ್ತು. ಪ್ರಸ್ತುತ ಭಾರತೀಯ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕನಾಗಿ ಕೊಹ್ಲಿ ಬೆಳೆದಿದ್ದಾರೆ. ತಂಡದಲ್ಲಿ ಅಗ್ರ ದರ್ಜೆಯ ಫಿಟ್‌ನೆಸ್‌ ಸೇರಿದಂತೆ ಆರೋಗ್ಯಕರ ವಾತಾವರಣ ಸೃಷ್ಟಿಸಿದ ಕೊಹ್ಲಿಯನ್ನು ಹಾಗ್‌ ಶ್ಲಾಘಿಸಿದ್ದಾರೆ. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಬ್ರಾಡ್‌ ಹಾಗ್‌, "ವಿರಾಟ್‌ ಕೊಹ್ಲಿ ತಮ್ಮ ತಂಡವನ್ನು ಪರಿಪೂರ್ಣವಾಗಿ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರು(ಕೊಹ್ಲಿ) ಒಳಗೊಳ್ಳುವಿಕೆಯನ್ನು ಅನುಮತಿಸುತ್ತಿದ್ದಾರೆ. ಆದ್ದರಿಂದ ಹೊಸಬರು ತಂಡಕ್ಕೆ ಬಂದಾಗ, ಅವರನ್ನು ತಕ್ಷಣವೇ ಕರೆತರಲಾಗುತ್ತದೆ ಮತ್ತು ಮೈದಾನದಲ್ಲಿ ಅವರಿಂದ ಏನನ್ನು ನಿರೀಕ್ಷಿಸಲಾಗಿದೆ ಎಂದು ಅವರಿಗೆ ತಿಳಿಸಲಾಗುತ್ತದೆ. ಮೈದಾನದ ಒಳಗೆ ಹಾಗೂ ಹೊರಗೆ ಅವರ ಪಾತ್ರ, ತರಬೇತಿ ಎಲ್ಲವನ್ನು ಮನವರಿಕೆ ಮಾಡಲಾಗುತ್ತದೆ," ಎಂದು ಹೇಳಿದ್ದಾರೆ. ಹೊಸದಾಗಿ ತಂಡಕ್ಕೆ ಬಂದಿರುವ ಆಟಗಾರರು ಕೂಡ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂಬುದನ್ನು ಮಾಜಿ ಚೈನಾಮನ್ ಸ್ಪಿನ್ನರ್‌ ಬಲವಾಗಿ ನಂಬಿದ್ದಾರೆ. "ಆಟಗಾರನಿಂದ ಏನನ್ನು ನಿರೀಕ್ಷಿಸಲಾಗುತ್ತಿದೆ ಎಂಬುದರಲ್ಲಿ ಸ್ಪಷ್ಟತೆ ಇದೆ. ಒಂದು ವೇಳೆ ಆಟಗಾರ ತಮ್ಮ ಮನಸಿನಲ್ಲಿರುವ ಸಂಗತಿಗಳನ್ನು ತಂಡದ ಜೊತೆ ಹಂಚಿಕೊಳ್ಳಲು ಬಯಸಿದರೆ, ಅಂತಹ ಆಟಗಾರರು ಮುಕ್ತವಾಗಿ ಹಾಗೂ ನೇರವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾದ ವಾತಾವರಣ ಭಾರತ ತಂಡದಲ್ಲಿದೆ," ಎಂದು ಮಾಜಿ ಸ್ಪಿನ್ನರ್‌ ತಿಳಿಸಿದ್ದಾರೆ. ಭಾರತ ತಂಡಕ್ಕೆ ಅತ್ಯುತ್ತಮ ಕೋಚಿಂಗ್‌ ಸಂಪನ್ಮೂಲಗಳಿವೆ: ಹಾಗ್‌ ಟೀಮ್‌ ಇಂಡಿಯಾದ ಕೋಚಿಂಗ್‌ ಪ್ಯಾನೆಲ್‌ ಅನ್ನು ಶ್ಲಾಘಿಸಿದ ಹಾಗ್‌, ಯಾವುದೇ ಸಮಸ್ಯೆ ಅಥವಾ ಹಿನ್ನಡೆಯಾದರೂ ಕೋಚ್‌ಗಳ ಬಳಿ ಆಟಗಾರರು ಮುಕ್ತವಾಗಿ ಮಾತನಾಡಬಹುದು ಎಂದಿದ್ದಾರೆ. "ಭಾರತ ತಂಡದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅತ್ಯುತ್ತಮ ಕೋಚಿಂಗ್‌ ಸಂಪನ್ಮೂಲಗಳಿವೆ. ಈ ಎಲ್ಲವೂ ಕೂಡ ಆಟಗಾರರಲ್ಲಿರುವ ಅತ್ಯುತ್ತಮವಾದುದನ್ನು ಹೊರಗೆಳೆಯಲು ನೆರವಾಗುತ್ತದೆ. ಅಲ್ಲದೆ, ಕ್ರಿಕೆಟಿಗನಾಗಿ ಹಾಗೂ ಒಬ್ಬ ವ್ಯಕ್ತಿಯಾಗಿ ಬೆಳವಣಿಗೆ ಸಾಧಿಸಲು ಇದು ಸಹಾಯವಾಗುತ್ತದೆ," ಎಂದು ಬ್ರಾಡ್‌ ಹಾಗ್ ತಿಳಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ, ಬ್ಯಾಟಿಂಗ್‌ ಕೋಚ್‌ ಆಗಿ ವಿಕ್ರಮ್‌ ರಾಥೋಡ್‌, ಬೌಲಿಂಗ್‌ ಕೋಚ್‌ ಆಗಿ ಭರತ್‌ ಅರುಣ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆಗಿ ಆರ್‌ ಶ್ರೀಧರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಆಗಸ್ಟ್‌ 25 ರಿಂದ ಹೆಡಿಂಗ್ಲೆ ಮೈದಾನದಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ, ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3B4Iv7D

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...