ಸುನಂದಾ ಪುಷ್ಕರ್‌ ಸಾವು ಪ್ರಕರಣ: ಶಶಿ ತರೂರ್‌ಗೆ ದಿಲ್ಲಿ ಹೈಕೋರ್ಟ್‌ ಕ್ಲೀನ್‌ ಚಿಟ್‌

ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಪ್ರಕರಣದಲ್ಲಿ ಪತಿ ಶಶಿ ತರೂರ್‌ಗೆ ದಿಲ್ಲಿ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದ್ದು, ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದೆ. ದಿಲ್ಲಿಯ ಐಷಾರಾಮಿ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್‌ ಜನವರಿ 17, 2014ರಲ್ಲಿ ಸಂಶಯಾಶ್ಪದವಾಗಿ ಸಾವಿಗೀಡಾಗಿದ್ದರು. ದಿಲ್ಲಿ ಪೊಲೀಸರು ಶಶಿ ತರೂರ್‌ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಜಾಮೀನಿನ ಮೇಲೆ ಶಶಿ ತರೂರ್‌ ಹೊರಗಡೆ ಇದ್ದರು. ಶಶಿ ತರೂರ್‌ ಮೇಲೆ ದಿಲ್ಲಿ ಪೊಲೀಸರು ಐಪಿಸಿ ಸೆಕ್ಷನ 498-A (ಪತಿ ಅಥವಾ ಸಂಬಂಧಿಗಳಿಂದ ಮಹಿಳೆಯ ಮೇಲೆ ದೌರ್ಜನ್ಯ) ಹಾಗೂ ಐಪಿಸಿ ಸೆಕ್ಷನ್‌ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಕರಣದ ವಾದ-ವಿವಾದ ಆಲಿಸಿದ್ದ ದಿಲ್ಲಿ ಕೋರ್ಟ್‌ನ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್‌ ತೀರ್ಪು ಕಾಯ್ದಿರಿಸಿದ್ದರು. ಈಗ ಪ್ರಕರಣದಿಂದ ಶಶಿ ತರೂರ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅತುಲ್‌ ಶ್ರೀವಾತ್ಸವ್‌, ಸುನಂದಾ ಪುಷ್ಕರ್‌ ಸಾವು ಆಕಸ್ಮಿಕವಲ್ಲ. ಮಾನಸಿಕ ಹಿಂಸೆ ನೀಡಿ ಅವರನ್ನು ಅನಾರೋಗ್ಯ ಪೀಡಿತರಾಗುವಂತೆ ಮಾಡಿದ್ದರು. ಅದಲ್ಲದೇ ಮರಣೋತ್ತರ ಪರೀಕ್ಷೆಯಲ್ಲಿ ವಿಷದಿಂದ ಸಾವನ್ನಪ್ಪಿದ್ದಾರೆ ಎಂದು ಸೂಚಿಸಲಾಗಿದೆ ಎಂದು ವಾದಿಸಿದ್ದರು. ತರೂರ್‌ ಪರ ವಕೀಲ ವಿಕಾಸ್‌ ಪಹ್ವಾ ಆರೋಪಗಳನ್ನು ಅಲ್ಲಗಳೆದು, ಆರೋಪಗಳನ್ನು ಸಾಬೀತು ಮಾಡಲಾಗುವುದಿಲ್ಲ ಎಂದು ವಾದಿಸಿದ್ದರು. ಇನ್ನು, ಪತ್ನಿ ಸಾವಿನ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ಸಿಗುತ್ತಿದ್ದಂತೆ ನಿರಾಳರಾಗಿರುವ ಶಶಿ ತರೂರ್‌, ನ್ಯಾಯಾಲಯದ ಆದೇಶಕ್ಕೆ ಅತ್ಯಂತ ಕೃತಜ್ಞನಾಗಿರುತ್ತೇನೆ. ಏಳೂವರೆ ವರ್ಷಗಳಿಂದ ಸಂಪೂರ್ಣ ಹಿಂಸೆ ಅನುಭವಿಸುತ್ತಿದ್ದೆ. ಈ ಆದೇಶದಿಂದ ನಿಜವಾಗಲೂ ಖುಷಿಯಾಗಿದೆ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3iRCB3r

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...