ವಿಮಾನಕ್ಕೆ ಜೋತು ಬಿದ್ದವರ ಪ್ರತ್ಯಕ್ಷ ನೋಡಿದೆ..! ಅಪ್ಘಾನಿಸ್ತಾನದ ಕರಾಳ ಅನುಭವ ಹಂಚಿಕೊಂಡ ಕನ್ನಡಿಗ

ನಾವು ಕೆಲಸ ಮಾಡುವ ಕ್ಯಾಂಪ್‌ ವೇರ್‌ಹೌಸ್‌ ಸೆಕ್ಯೂರಿಟಿಗಳನ್ನು ನೋಡ.. ನೋಡತ್ತಿದ್ದಂತೆಯೇ ಕೊಂದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಲೈವ್‌ ಆಗಿ ನೋಡಿದ್ದೇ. ಇನ್ನು ಕಾಬೂಲ್‌ಗೆ ರವಾನೆಯಾದ ಬಳಿಕ ವಿಮಾನದಿಂದ ಅಫ್ಘನ್ನರು ಕೆಳಕ್ಕೆ ಬಿದ್ದು ಮೂವರು ಸಾವನ್ನಪ್ಪಿದ ದೃಶ್ಯ ಪ್ರತ್ಯಕ್ಷವಾಗಿ ನೋಡಿದೆ. ಇದನ್ನು ನೋಡಿದ ನನಗೆ ಜೀವದ ಮೇಲೆ ಆಸೆಯೇ ಇರಲಿಲ್ಲ. ಬದುಕು ಇಲ್ಲಿಯೇ ಮುಗಿಯುತು ಎಂದು ಕೊಂಡಿದ್ದೇ. ಆದರೆ, ಬ್ರಿಟಿಷ್‌ ಮಿಲಿಟರಿ ಅಧಿಕಾರಿಗಳ ಸಹಾಯದಿಂದ ನಾನು ನರಕದಿಂದ ಮರಳಿ ತಾಯಿನಾಡಿಗೆ ಮರಳಿ ಬಂದೆ. ಇದು ಉಗ್ರರ ಕಪಿಮುಷ್ಠಿಯಲ್ಲಿರುವ ಅಪ್ಘಾನಿಸ್ತಾನದಿಂದ ಭಾರತಕ್ಕೆ ಮರಳಿರುವ ತಾಲೂಕಿನ ಆನಗೋಡು ಬಳಿಯ ಸುಲ್ತಾನಿಪುರ ಗ್ರಾಮದ ಯುವಕ ವಿನಯ್‌ ಅಫ್ಘಾನಿಸ್ತಾನದಲ್ಲಿ ಕಂಡ ದೃಶ್ಯ. ತಾಲಿಬಾನ್‌ ಉಗ್ರರು ಕಾಬೂಲ್‌ಗೆ ಹತ್ತಿರ ಇದ್ದಾರೆ ಎಂದು ಆಗಸ್ಟ್‌ 14 ರಾತ್ರಿ ಮಾಹಿತಿ ಸಿಕ್ಕಿತ್ತು. ಕಂಪೆನಿಯ ಹೆಡ್‌ಗೆ ಕೇಳಿದರೆ ಅವರು ಏನೂ ಆಗಲ್ಲ ಎಂದು ಹೇಳಿದ್ದರು ಎಂದರು. ಈ ವೇಳೆಗಾಗಲೇ ಬೇರೆ ದೇಶಗಳ 2 ಸಾವಿರ ಮಿಲಿಟರಿ ಮಾತ್ರ ಉಳಿದಿತ್ತು. ಇದಾದ ಬಳಿಕ ನಮ್ಮ ಕ್ಯಾಂಪ್‌ನ ವೇರ್‌ ಹೌಸ್‌ನಿಂದ 50 ರಿಂದ 100 ಮೀಟರ್‌ ಅಳತೆ ದೂರದಲ್ಲಿರುವವ ಕ್ಯಾಂಪಿನ ಮೇಲೆ ತಾಲಿಬಾನಿಗಳ ದಾಳಿ ಆಗತೊಡಗಿತು. ಸೆಕ್ಯೂರಿಟಿಗಳನ್ನು ಹೊಡೆದು ತಾಲಿಬಾನಿಗಳು ಒಳಗೆ ನುಗ್ಗುತ್ತಿರುವುದನ್ನು ನಾವು ಕುಳಿತಲ್ಲಿಯೇ ನೇರ ನೋಡಿದೆವು. ಈ ದೃಶ್ಯ ನೋಡುತ್ತಲೇ ನಮಗೆ ದಿಗಿಲಾಯಿತು. ಇದನ್ನು ನೋಡಿದ ತಕ್ಷಣ ಕಂಪನಿಯ ಮುಖ್ಯಸ್ಥರಿಗೂ ಹೆದರಿಕೆ ಹುಟ್ಟಿಕೊಂಡಿತು ಎಂದು ಅನುಭವ ಹಂಚಿಕೊಂಡರು. ಕೂಡಲೇ ಎಲ್ಲರೂ ಕೇವಲ ಒಂದೆ ಬ್ಯಾಗ್‌ ರೆಡಿ ಮಾಡಿಕೊಂಡೆವು. ಸುರಕ್ಷಿತ ಜಾಗಕ್ಕೆ ನಮ್ಮನ್ನು ಕಂಪೆನಿಯವರೇ ಕರೆದೊಯ್ದರು. ಆಗಸ್ಟ್‌ 15ಕ್ಕೆ ಕಾಬೂಲ್‌ ಸಮೀಪವೆ ಉಗ್ರರು ಇದ್ದಾರೆ ಎಂದು ಮಾಹಿತಿ, ಹಾಗೆಯೇ ಕಾಬೂಲ್‌ ಪ್ರವೇಶ ಪಡೆದಿದ್ದರು. ಈ ವೇಳೆ ನಮಗೆ ದೇಶ ಬಿಡಲು ಇರುವ ಏಕೈಕ ದಾರಿ ಹಮೀದ್‌ ಕರ್ಜಯ್‌ ಏರ್ಪೋರ್ಟ್‌ ಮಾತ್ರ ಆಗಿತ್ತು. ಒಂದು ವೇಳೆ ರನ್‌ ವೇ ಬ್ಲಾಕ್‌ ಆಗಿ ಡ್ಯಾಮೇಜ್‌ ಆಯಿತು ಎಂದರೆ ನಮ್ಮದು ಇದೇ ಕೊನೆ ದಿನ ಎಂದು ಎಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡಿದ್ದೆವು. ದೇವರ ದಯೆಯಿಂದ ನಾವು ತೊರೆದು ಸುರಕ್ಷಿತವಾಗಿ ಬಂದೆವು'' ಎನ್ನುತ್ತಾರೆ ವಿನಯ್‌. ವೇರ್‌ ಹೌಸ್‌ಗೆ ವರ್ಗಾವಣೆಬಿಐಇಟಿ ಕಾಲೇಜಿನಲ್ಲಿ ಇಂನ್ಸುಮೆಂಟೇಷನ್‌ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್‌ ಪದವಿಯನ್ನು 2010-11 ರಲ್ಲಿ ವಿನಯ್‌ ಪಡೆದರು. ಬೆಂಗಳೂರಿನಲ್ಲಿ ಸಿಆರ್‌ಚಿ ಇಂಜಿನಿಯರಿಂಗ್‌ ಕಂಪನಿಯಲ್ಲಿ 1 ವರ್ಷದ ಕೆಲಸ ಮಾಡಿದ ನಂತರ ದುಬೈ ಕಂಪನಿ ಮೂಲಕ ಅಪ್ಘಾನಿಸ್ತಾನದಲ್ಲಿ 2013ರಲ್ಲಿ ಆಟೋಮೆಷನ್‌ ಇಂಜಿನಿಯರ್‌ ಹುದ್ದೆಗೆ ಆಯ್ಕೆಯಾದರು. ಇದು ಅಲ್ಲಿ ಉಗ್ರಾಣ ನಿಗಮದ ಉಸ್ತುವಾರಿ ಕೆಲಸ. ಕಂದಹಾರ್‌ನಲ್ಲಿ ಕೆಲಸ ಆರಂಭಿಸಿ 2017 ರವರೆಗೆ ಕೆಲಸ ಮಾಡಿದೆ. ನಂತರ 2018ರ ಅಂತ್ಯದವರೆಗೆ ಮಜಾರೆ ಶರೀಫ್‌ನಲ್ಲಿ ವಾಟರ್‌ ಡಿಪಾರ್ಟ್‌ಮೆಂಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದೆ. ಮಜಾರೆ ಷರೀಫ್‌ ನಂತರ 2018ರಲ್ಲಿ ಕಾಬೂಲ್‌ನಲ್ಲಿ ಹಮಿದ್‌ ಕರ್ಜೈನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವೇರ್‌ ಹೌಸ್‌ಗೆ ವರ್ಗಾವಣೆ ಆಯಿತು.


from India & World News in Kannada | VK Polls https://ift.tt/3yiDDtQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...