ಚೆನ್ನೈ: ರಾಜ್ಯಗಳೊಂದಿಗೆ ಸಂವಹನ ನಡೆಸುವಾಗ ಅಧಿಕೃತ ಭಾಷೆಗಳ ಕಾಯ್ದೆ, 1963ರ ನಿಯಮಗಳನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುದ್ರಾಸ್ ಹೈಕೋರ್ಟ್ ಮದುರೆ ನ್ಯಾಯಪೀಠ ಸೂಚನೆ ನೀಡಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಅರ್ಜಿ ಕಳುಹಿಸಿದ ಭಾಷೆಯಲ್ಲಿಯೇ ಕೇಂದ್ರವು ಪ್ರತಿಕ್ರಿಯೆ ನೀಡಬೇಕು. ಒಮ್ಮೆ ಇಂಗ್ಲಿಷ್ನಲ್ಲಿ ವಿವರನ್ನು ರವಾನಿಸಿದ್ದರೆ, ಅದಕ್ಕೆ ಭಾಷೆಯಲ್ಲಿಯೇ ಉತ್ತರ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ. ಮದುರೆ ಲೋಕಸಭೆ ಸಂಸದ ಎಸ್. ವೆಂಕಟೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎನ್. ಕಿರುಬಾಕರನ್ ಮತ್ತು ಎಂ. ದೊರೈಸ್ವಾಮಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. 'ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ 780 ಸ್ಥಾನಗಳನ್ನು ಭರ್ತಿ ಮಾಡಲು ಪಾಂಡಿಚೆರಿಯಲ್ಲಿ ಪರೀಕ್ಷೆ ಕೇಂದ್ರ ಸ್ಥಾಪಿಸಿರಲಿಲ್ಲ. ಹೀಗಾಗಿ ಈ ಪ್ರದೇಶಗಳಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡುವಂತೆ ಕೋರಿ ಅಕ್ಟೋಬರ್ 9ರಂದು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೆ. ಆದರೆ ನವೆಂಬರ್ 9ರಂದು ಗೃಹ ಸಚಿವಾಲಯ ಹಿಂದಿಯಲ್ಲಿ ಬರೆದ ಪತ್ರದಲ್ಲಿ ಪ್ರತಿಕ್ರಿಯೆ ನೀಡಿತ್ತು. ಅದರಲ್ಲಿ ಏನು ಬರೆಯಲಾಗಿದೆ ಎನ್ನುವುದು ನನಗೆ ತಿಳಿದಿರಲಿಲ್ಲ' ಎಂದು ವೆಂಕಟೇಶ್ ಅರ್ಜಿಯಲ್ಲಿ ಹೇಳಿದ್ದರು. 'ಇಂಗ್ಲಿಷ್ನಲ್ಲಿ ಬರೆದ ಅರ್ಜಿಗೆ ಹಿಂದಿಯಲ್ಲಿ ಉತ್ತರ ನೀಡುವುದು ಕಾನೂನಿನ ಉಲ್ಲಂಘನೆ. ತಮಿಳುನಾಡಿನ ಜನರು ತಮ್ಮ ಅಹವಾಲುಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಹಿಂದಿಯಲ್ಲಿಯೇ ಪ್ರತಿಕ್ರಿಯೆ ನೀಡಲು ಮುಂದಾಗುತ್ತಾರೆ. ಇದು ಅಧಿಕೃತ ಭಾಷೆಗಳ ಕಾಯ್ದೆ 1963 ಹಾಗೂ ಸಾಂವಿಧಾನಿಕ ಕಾನೂನು ಹಕ್ಕುಗಳಿಗೆ ವಿರುದ್ಧವಾಗಿದೆ' ಎಂದು ನ್ಯಾಯಪೀಠ ಹೇಳಿದೆ. ಅಧಿಕಾರಿಗಳ ವಿರುದ್ಧವೂ ಕ್ರಮ 'ಹಿಂದಿಯೇತರ ಭಾಷೆಗಳನ್ನು ಮಾತನಾಡುವ ರಾಜ್ಯಗಳ ಸಂಸದರು ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ತಮಿಳುನಾಡು ಸರ್ಕಾರ, ತಮಿಳುನಾಡಿನಿಂದ ಆಯ್ಕೆಯಾದ ಸಂಸತ್ ಸದಸ್ಯರು ಮತ್ತು ತಮಿಳುನಾಡಿನ ಜನರಿಗೆ ಹಿಂದಿಯಲ್ಲಿ ಪತ್ರಗಳನ್ನು ಕಳುಹಿಸುವಂತಿಲ್ಲ. ಕೇಂದ್ರ ಸರ್ಕಾರವು ಇಂಗ್ಲಿಷ್ನಲ್ಲಿ ಮಾತ್ರವೇ ಪತ್ರಗಳನ್ನು ಕಳುಹಿಸಬೇಕು. ಈ ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ಹೊರಡಿಸಬೇಕು' ಎಂದು ಸೂಚಿಸಿದೆ. 'ಸರ್ಕಾರವು ಪ್ರತಿ ಭಾಷೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳ ಅಭಿವೃದ್ಧಿಗೆ ಸೂಕ್ತ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಇದನ್ನು ಭಾರತೀಯ ಕಚೇರಿ ಭಾಷಾ ಕಾಯ್ದೆ ಕೂಡ ಖಚಿತಪಡಿಸಿದೆ' ಎಂದು ಪೀಠ ಹೇಳಿದೆ. ತಾನು ನಿಯಮ ಉಲ್ಲಂಘಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಈ ವೇಳೆ ವಾದಿಸಿತು.
from India & World News in Kannada | VK Polls https://ift.tt/2Wa9X58