ಕಾಬೂಲ್‌ನಿಂದ 85 ಪ್ರಜೆಗಳು ಭಾರತಕ್ಕೆ ವಾಪಸ್: ವಾಯುಪಡೆ ವಿಮಾನದಲ್ಲಿ ತಾಯ್ನಾಡಿಗೆ

ಹೊಸದಿಲ್ಲಿ: ಹಿಡಿತದಲ್ಲಿ ನಲುಗುತ್ತಿರುವ ಅಫ್ಘಾನಿಸ್ತಾನದಿಂದ ಮತ್ತೆ 85 ಮಂದಿ ಪ್ರಜೆಗಳನ್ನು ಶನಿವಾರ ಬೆಳಿಗ್ಗೆ ತಾಯ್ನಾಡಿಗೆ ಕರೆತಂದಿದೆ. ವಿಶೇಷ ಸಾರಿಗೆ ಸಿ-130ಜೆ ಕಾಬೂಲ್‌ನಿಂದ 85ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ಕರೆತಂದಿದೆ. ನೆಲದಲ್ಲಿ ಇನ್ನೂ ಸಿಲುಕಿಕೊಂಡಿರುವ ಜನರನ್ನು ಸ್ಥಳಾಂತರಿಸುವ ಪ್ರಯತ್ನವನ್ನು ಸರ್ಕಾರ ಮುಂದುವರಿಸಿದೆ. ಅಫ್ಘಾನಿಸ್ತಾನದಿಂದ ಹೊರಟ ವಿಮಾನವು ತಜಿಕಿಸ್ತಾನದ ದುಶಾಂಬೆಯಲ್ಲಿ ಇಂಧನ ತುಂಬಿಸಲು ಸುರಕ್ಷಿತವಾಗಿ ಇಳಿದಿದೆ. ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಭಾರಿ ದೊಂಬಿ, ಹಿಂಸಾಚಾರಗಳು ನಡೆಯುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದ ವಿವಿಧ ಮೂಲೆಗಳಲ್ಲಿರುವ ಭಾರತೀಯರನ್ನು ಮೊದಲು ವಿಮಾನ ನಿಲ್ದಾಣದ ಒಳಭಾಗಕ್ಕೆ ಕರೆತರಲು ಭಾರತ ಸರ್ಕಾರ ಗಮನ ಹರಿಸುತ್ತಿದೆ. ವಾಯುಪಡೆಯ ಮತ್ತೊಂದು ವಿಮಾನ ಸಿ-17 ಕಾಬೂಲ್‌ಗೆ ಹಾರಲು ಸಿದ್ಧವಾಗಿದ್ದು, ಸುಮಾರು 150-180 ಮಂದಿಯನ್ನು ಕರೆತರಲಿದೆ. ವಿಮಾನ ನಿಲ್ದಾಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯರು ತಲುಪಲು ಸಾಧ್ಯವಾಗುತ್ತಿದ್ದಂತೆಯೇ ಭಾರತದಿಂದ ವಿಮಾನ ಅಲ್ಲಿಗೆ ತೆರಳಲಿದೆ. ಆದರೆ ವಿಮಾನ ನಿಲ್ದಾಣದ ಒಳ ಪ್ರವೇಶಿಸುವುದು ಹರಸಾಹಸವಾಗಿದೆ. ಅಲ್ಲಿನ ಮಾರ್ಗಗಳಿಗೆ ತಾಲಿಬಾನ್ ತಡೆಯೊಡ್ಡಿದೆ. ಭದ್ರತಾ ಕಾರಣಗಳಿಂದ ಮುಂದಿನ ಸ್ಥಳಾಂತರ ಪ್ರಕ್ರಿಯೆಗಳು ಹೇಗೆ ನಡೆಯಲಿದೆ ಎನ್ನುವುದು ಖಚಿತವಾಗಿಲ್ಲ. ಆದರೆ ಭಾರತಕ್ಕೆ ನೇರವಾಗಿ ಬರುವ ಬದಲು, ಎಲ್ಲ ವಿಮಾನಗಳೂ ತಜಿಕಿಸ್ತಾನದ ಮೂಲಕ ಬರಲಿವೆ ಎನ್ನಲಾಗಿದೆ. ಅಫ್ಘಾನಿಸ್ತಾನದಿಂದ ಹೊರಕ್ಕೆ ಭಾರತೀಯರನ್ನು ಕರೆತರುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ತನ್ನ ಎಲ್ಲ ರಾಜತಾಂತ್ರಿಕ ಸಿಬ್ಬಂದಿಯನ್ನು ಭಾರತ ತಾಯ್ನಾಡಿಗೆ ಕರೆತಂದಿದೆ. ಆದರೆ ಯುದ್ಧಪೀಡಿತ ದೇಶದಲ್ಲಿ ಇನ್ನೂ ಸಾವಿರಾರು ಭಾರತೀಯರು ಸಿಲುಕಿದ್ದಾರೆ. ಅವರು ಇರುವ ಸ್ಥಳವನ್ನು ಹುಡುಕುವುದು ಮತ್ತು ಅವರ ಸ್ಥಿತಿಗತಿ ಬಗ್ಗೆ ತಿಳಿಯುವುದು ಸವಾಲಾಗಿದೆ. ಏಕೆಂದರೆ ಭಾರತದಿಂದ ಅಲ್ಲಿಗೆ ತೆರಳಿರುವ ಅನೇಕರು ತಮ್ಮ ವಿವರಗಳನ್ನು ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಂಡಿಲ್ಲ. ಸುಮಾರು 200 ಸಿಖ್ ಹಾಗೂ ಹಿಂದೂಗಳು ಕಾಬೂಲ್‌ನ ಗುರುದ್ವಾರದಲ್ಲಿ ರಕ್ಷಣೆ ಪಡೆದಿದ್ದಾರೆ.


from India & World News in Kannada | VK Polls https://ift.tt/3mmaOu4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...