ಆ. 23ರಂದು ನಿತೀಶ್‌ ಕುಮಾರ್‌ ನೇತೃತ್ವದ ನಿಯೋಗದಿಂದ ಪ್ರಧಾನಿ ಭೇಟಿ, ಜಾತಿ ಗಣತಿಗೆ ಆಗ್ರಹ

ಪಟನಾ: ಬಿಹಾರ ಮುಖ್ಯಮಂತ್ರಿ ಅವರು ಆ.23ರಂದು ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿ ಮಾಡಿ ದೇಶದಲ್ಲಿ ನಡೆಸುವಂತೆ ಮನವಿ ಸಲ್ಲಿಸಲಿದ್ದಾರೆ. "ಸರ್ವಪಕ್ಷ ನಿಯೋಗದ ಭೇಟಿಗಾಗಿ ಸಮಯ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಕೋರಲಾಗಿತ್ತು. ಪ್ರಧಾನಿ ಕಚೇರಿಯು ಆ.23ರಂದು ಭೇಟಿಗೆ ಸಮಯ ನಿಗದಿಪಡಿಸಿದೆ," ಎಂದು ನಿತೀಶ್‌ ಕುಮಾರ್‌ ತಿಳಿಸಿದ್ದಾರೆ. ಇದಕ್ಕೂ ಮುನ್ನ ಜಾತಿ ಆಧರಿತ ಗಣತಿಯ ಕುರಿತು ತಮ್ಮ ಒತ್ತಾಯದ ಕುರಿತು ಸುದ್ದಿಗಾರರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದ ಸಿಎಂ ನಿತೀಶ್‌ ಅವರು, "ಬಿಹಾರ ಮಾತ್ರವಲ್ಲ, ಎಲ್ಲ ರಾಜ್ಯಗಳೂ ಕೂಡ ಜಾತಿಗಣತಿಗೆ ಬೇಡಿಕೆ ಇರಿಸುತ್ತಿವೆ. 2020ರಲ್ಲಿ ಬಿಹಾರದ ವಿಧಾನಸಭೆಯಲ್ಲಿ ಈ ಸಂಬಂಧ ಸರ್ವಾನುಮತದಿಂದ ನಿರ್ಣಯ ಅನುಮೋದಿಸಲಾಗಿದೆ. ಜಾತಿಗಣತಿಯಿಂದ ಸಮಾಜದಲ್ಲಿ ಶಾಂತಿ ಕದಡುವುದಿಲ್ಲ. ಬದಲಿಗೆ ಸಮಾನವಾಗಿ ಸಂತಸ ಹರಡಲಿದೆ. ಎಲ್ಲ ಸಮುದಾಯದವರಿಗೂ ಸರಕಾರದಿಂದ ಆದ್ಯತೆ ಸಿಗಲಿದೆ," ಎಂದಿದ್ದಾರೆ. ಬಿಹಾರದ ಪ್ರತಿಪಕ್ಷ ನಾಯಕರಾದ ಆರ್‌ಜೆಡಿಯ ತೇಜಸ್ವಿ ಯಾದವ್‌ ಕೂಡ ಜಾತಿಗಣತಿಗೆ ಆಗ್ರಹಿಸಿ ರಾಜ್ಯಾದ್ಯಂತ ಧರಣಿ ಕೂಡ ನಡೆಸಿದ್ದಾರೆ. ಅವರು ಪ್ರಧಾನಿ ಭೇಟಿ ವೇಳೆ ನಿತೀಶ್‌ ಅವರಿಗೆ ಸಾಥ್‌ ನೀಡಲಿದ್ದಾರೆ.


from India & World News in Kannada | VK Polls https://ift.tt/3z1Outb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...