ನಿಮಗೂ ಕೇಂದ್ರ ಆರೋಗ್ಯ ಇಲಾಖೆಯಲ್ಲಿ ಕೆಲಸ ಇದೆ ಎಂದು ಮೆಸೇಜ್‌ ಬಂದಿದ್ಯಾ? ಹಾಗಾದ್ರೆ ಈ ಸ್ಟೋರಿ ಮಿಸ್‌ ಮಾಡ್ಬೇಡಿ!

ಕೊರೊನಾ ಆತಂಕ ನಡುವೆಯೂ ಕೆಲಸ ಕೊಡಿಸುವ ನೆಪದಲ್ಲಿ ನಿರುದ್ಯೋಗಿ ಯುವಕರಿಂದ ಹಣ ಪೀಕುವ ಜಾಲವೊಂದು ಸಕ್ರಿಯವಾಗಿದೆ. ಕೆಲವು ತಿಂಗಳ ಹಿಂದೆ ನ್ಯಾಷನಲ್‌ ಹೆಲ್ತ್‌ ಮಿಷನ್‌ನಲ್ಲಿ ಸಾವಿರಾರು ಉದ್ಯೋಗಗಳು ಖಾಲಿಯಿದ್ದು, ಅರ್ಜಿ ಸಲ್ಲಿಸುವಂತೆ ಆನ್‌ಲೈನ್‌ ಜಾಹೀರಾತು ಹರಿಬಿಡಲಾಗಿತ್ತು. ಕೆಲಸವಿಲ್ಲದ ಸಾವಿರಾರು ಯುವಕರು ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿದ್ದರು. "ಶುಭಾಶಯಗಳು, ನೀವು ಅರ್ಜಿ ಸಲ್ಲಿಸಿದ ಮೆಡಿಕಲ್‌ ವರ್ಕರ್‌ ಹುದ್ದೆಗೆ ಯಾವುದೇ ಪರೀಕ್ಷೆ, ಸಂದರ್ಶನ ಇಲ್ಲದೆ ನೇರವಾಗಿ ಮೆರಿಟ್‌ ಆಧಾರದ ಮೇಲೆ ಆಯ್ಕೆಯಾಗಿದ್ದೀರ' ಎಂಬ ಸಂದೇಶಗಳು ಅರ್ಜಿ ಸಲ್ಲಿಸಿದವರಿಗೆ ಬರುತ್ತಿದ್ದವು. ಬಳಿಕ ಅರ್ಜಿ ಸಲ್ಲಿಸಿದ್ದ ಪ್ರತಿಯೊಬ್ಬರಿಗೂ ಕರೆ ಮಾಡುತ್ತಿರುವ ವಂಚಕರು, ಕೇಂದ್ರ ಸರಕಾರದ ಸ್ವಾಸ್ಥ್ಯ ಗ್ರಾಮೀಣ ಪರಿವಾರ ಪಂಚಾಯತ್‌ ಯೋಜನೆಯ ಮೆಡಿಕಲ್‌ ವರ್ಕರ್‌, ಮೆಡಿಕಲ್‌ ಆಫೀಸರ್‌ ಹುದ್ದೆಗಳಿಗೆ ನೀವು ಆಯ್ಕೆಯಾಗಿದ್ದು, ದಾಖಲೆಗಳನ್ನು ಕಳುಹಿಸುವಂತೆ ತಿಳಿಸುತ್ತಿದ್ದಾರೆ. ದಾಖಲೆಗಳನ್ನು ಪಡೆದ ನಂತರ ನಿಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ 15 ದಿನಗಳ ತರಬೇತಿ ನಡೆಯಲಿದ್ದು, ನಿಮ್ಮ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ನೀಡಲಾಗುತ್ತದೆ. ಜತೆಗೆ 27,000 ವೇತನ ನೀಡಲಾಗುತ್ತದೆ ಎಂದು ಹೇಳುತ್ತಿದ್ದಾರೆ!

ಯುವಕರಿಂದ ದಾಖಲೆ ಸಂಗ್ರಹಿಸಿದ ಬಳಿಕ ಮತ್ತೆ ವಾಟ್ಸ್ಯಾಪ್‌‌ ಮೆಸೇಜ್‌ ಮಾಡುವ ವಂಚಕರು, ನೀವು ಆಯ್ಕೆಯಾಗಿರುವ ತರಬೇತಿಗೆ ಹಾಜರಾಗುವ ಮೊದಲು ನೋಂದಣಿ ಮಾಡಲು 2,200 ರೂ. ಪಾವತಿಸಬೇಕು ಎನ್ನುತ್ತಾರೆ. ಬಳಿಕ ವಾಟ್ಸ್ಯಾಪ್‌‌ಗೆ ನೇಮಕ ಪತ್ರ ಕಳುಹಿಸಲಾಗುತ್ತದೆ. ಜತೆಗೆ ಬಿ ಫಾರ್ಮ್‌ ಕಳುಹಿಸಿ ಭರ್ತಿ ಮಾಡಿ ಕಳುಹಿಸುವಂತೆ ತಿಳಿಸುತ್ತಾರೆ. ಅದಾದ ಬಳಿಕ ಲ್ಯಾಪ್‌ಟಾಪ್‌ ಖರೀದಿ ಮಾಡಬೇಕಾಗುತ್ತದೆ ಎಂದು 5 ಸಾವಿರ ಪಡೆಯುತ್ತಾರೆ. ಬಳಿಕ ಜೀವ ವಿಮೆ ಮಾಡಿಸಬೇಕು ಎಂದು 7,500 ರೂ. ಕೇಳುತ್ತಾರೆ. ಒಂದೊಮ್ಮೆ ಹಣ ಪಾವತಿಸದಿದ್ದರೆ ನಿಮ್ಮ ಆಯ್ಕೆ ರದ್ದುಪಡಿಸುತ್ತೇವೆ ಎಂದು ಕರೆ ಮಾಡುತ್ತಾರೆ. ಆ ಹಣ ಪಾವತಿಸಿದ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಮಾಡುತ್ತಾರೆ. ಆದರೆ ಮರ್ಯಾದೆಗೆ ಅಂಜಿ ಹಾಗೂ ಹಣ ಕಳೆದುಕೊಂಡ ವಿಚಾರ ಮನೆಯವರಿಗೆ ಗೊತ್ತಾದರೆ ಬಯ್ಯುತ್ತಾರೆಂದು, ಈ ವಿಚಾರವನ್ನು ಬಹಿರಂಗಪಡಿಸದೆ ಸುಮ್ಮನೆ ಇರಬೇಕಾಗಿದೆ ಎಂಬುದು ಮೋಸ ಹೋದ ಕೆಲ ಯುವಕರ ಅಳಲು.

ಮುಂಜಾನೆ 3 ಗಂಟೆಗೆ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಡುಪಿಯ ಆಶಾ ಕಾರ್ಯಕರ್ತೆ ; ಉಪರಾಷ್ಟ್ರಪತಿ ಶ್ಲಾಘನೆ

ಉದ್ಯೋಗ ಕೊಡಿಸುವುದಾಗಿ ಯುವಕರಿಂದ ಸಂಗ್ರಹಿಸುವಂತಹ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಳ್ಳುವ ಆಪಾಯವಿದೆ. ಅದರಲ್ಲಿಯೂ ಪ್ರಮುಖವಾಗಿ ಆಧಾರ್‌ ಕಾರ್ಡ್‌ನಿಂದ ಸಿಮ್‌ ಖರೀದಿಸಿ ಸಮಾಜಘಾತುಕ ಚಟುವಟಿಕೆಗಳಿಗೆ ಬಳಕೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಯುವಕರು ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದು ಸೈಬರ್‌ ಕ್ರೈಂ ಪೊಲೀಸರ ಸಲಹೆ.

ಕೋವಿಡ್ 19; ಭಾರತದಲ್ಲಿ ಲಸಿಕೆಗೆ ರೇಸ್‌ ಶುರು, 6 ನಗರದಲ್ಲಿ ಮಾನವನ ಮೇಲೆ ಪ್ರಯೋಗ, ಬೆಳಗಾವಿಯಲ್ಲಿ ಶೀಘ್ರ ಆರಂಭ

ಯುವಕರನ್ನು ವಂಚಿಸಲು ಮುಂದಾಗಿರುವ ಈ ಗುಂಪು ಪ್ರಮುಖವಾಗಿ ಕೇಂದ್ರ ಸರಕಾರದ ಪ್ರಮುಖ ಯೋಜನೆಗಳ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ನಿಜವಾದ ಯೋಜನೆಯಲ್ಲಿರುವ ಒಂದು ಪದ ಅದಲು ಬದಲು ಮಾಡಿ ವೆಬ್‌ಸೈಟ್‌ ಸೃಷ್ಟಿಸಿ ವಂಚಿಸುತ್ತಿದ್ದಾರೆ. ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಯಾವುದೇ ನೇಮಕಾತಿಗೆ ಸಂಬಂಧಿಸಿದಂತೆ ವ್ಯಾಟ್ಸ್ಯಾಪ್‌‌ ಮೂಲಕ ಯಾರೂ ಮಾಹಿತಿ ನೀಡುವುದಿಲ್ಲ. ಹೀಗಾಗಿ ಯುವಕರು ಯಾರಿಗೂ ಹಣ ಕಳುಹಿಸಬಾರದು. ಕೆಲಸ ಕೊಡಿಸುತ್ತೇವೆ ಅಕೌಂಟ್‌ಗೆ ಹಣ ಹಾಕುವಂತೆ ಸಂದೇಶ ಕಳುಹಿಸುವವರ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ಸಿಎಂ ಸೇರಿ ಗಣ್ಯರಿಂದ ನಾಗರ ಪಂಚಮಿ ಶುಭಾಶಯ, ಸುರಕ್ಷತಾ ನಿಯಮ ಪಾಲಿಸಲು ಮನವಿ



from India & World News in Kannada | VK Polls https://ift.tt/2P0Fmzz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...