ನವದೆಹಲಿ: ಮಾಜಿ ಡಿಸಿಎಂ, ಕಾಂಗ್ರೆಸ್ನ ಬಂಡಾಯ ಶಾಸಕ ಸಚಿನ್ ಪೈಲಟ್ಗೆ ಸುಪ್ರೀಂಕೋರ್ಟ್ನಲ್ಲಿ ಮೊದಲ ಜಯ ಸಿಕ್ಕಿದೆ. ಹೈ ಕೋರ್ಟ್ ಶಾಸಕರ ಅನರ್ಹತೆಯ ನೋಟಿಸ್ ಬಗ್ಗೆ ತೀರ್ಪು ನೀಡಬಹುದು ಎಂದು ತಿಳಿಸಿದೆ. ಪೈಲಟ್ ಸೇರಿ 18 ಶಾಸಕರಿಗೆ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿ ಪಿ ಜೋಶಿ ಅನರ್ಹತೆ ಸಂಬಂಧ ನೋಟಿಸ್ ಜಾರಿಗೊಳಿಸಿದ್ದರು. ಇದನ್ನ ಪ್ರಶ್ನಿಸಿ ಬಂಡಾಯ ಶಾಸಕರು ರಾಜಸ್ಥಾನ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಇದನ್ನ ವಿರೋಧಿಸಿ ಸ್ಪೀಕರ್ ಸಿ ಪಿ ಜೋಶಿ ಹೈ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತಿಲ್ಲ. ಅಲ್ಲದೆ ತೀರ್ಪು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ನೀಡುವ ತೀರ್ಪಿಗೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೆ ಹೈ ಕೋರ್ಟ್ ನೋಟಿಸ್ ಸಂಬಂಧ ತೀರ್ಪು ನೀಡಬಹುದು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಮೂಲಕ ಒಂದು ಹಂತದಲ್ಲಿ ಸ್ಪೀಕರ್ಗೆ ಮುಖಭಂಗವಾಗಿದ್ದು ಬಣಕ್ಕೆ ಗೆಲುವು ಸಿಕ್ಕಿದಂತಾಗಿದೆ. ಶುಕ್ರವಾರ ಈ ಬಗ್ಗೆ ರಾಜಸ್ಥಾನ ಹೈ ಕೋರ್ಟ್ ತೀರ್ಪು ಪ್ರಕಟಿಸಿಲಿದೆ. ಸುಪ್ರೀಂಕೋರ್ಟ್ ಹೇಳಿದ್ದೇನು? ರಾಜಸ್ಥಾನ ಸ್ಪೀಕರ್ ಜೋಶಿಯವರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹೈ ಕೋರ್ಟ್ಗೆ ಆದೇಶ ನೀಡಲು ಅವಕಾಶ ನೀಡಿದೆ. ಹೀಗಾಗಿ ಹೈ ಕೋರ್ಟ್ ಶುಕ್ರವಾರ ಈ ಬಗ್ಗೆ ತೀರ್ಪು ನೀಡಿದೆ. ಅಲ್ಲದೇ ಜೋಶಿಯವರ ಅರ್ಜಿ ಸಂಬಂಧ ಇನ್ನಷ್ಟು ವಿಚಾರಣೆ ನಡೆಸುವ ಉದ್ದೇಶದಿಂದ ಸೋಮವಾರಕ್ಕೆ ಈ ವಿಚಾರಣೆಯನ್ನ ಮುಂದೂಡಿದೆ. ಇನ್ನು ವಿಚಾರಣೆ ವೇಳೆ ಅನೇಕ ವಿಚಾರಗಳನ್ನ ಸುಪ್ರೀಂಕೋರ್ಟ್ ಪ್ರಸ್ತಾಪಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯವನ್ನ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ ಸಚಿನ್ ಪೈಲಟ್ ಅವರನ್ನ ವಜಾಗೊಳಿಸಿರುವುದು ಹಾಗೂ ಶಾಸಕರಿಗೆ ಅನರ್ಹತೆಯ ನೋಟಿಸ್ ಜಾರಿಗೊಳಿಸಿದ ಕಾರಣವನ್ನು ಸುಪ್ರೀಂಕೋರ್ಟ್ ಕೇಳಿದೆ. ಈ ಬಗ್ಗೆ ಕೂಲಂಕುಷ ವಿಚಾರಣೆಯ ಅಗತ್ಯವಿದೆ ಎಂದಿರುವ ಸುಪ್ರೀಂಕೋರ್ಟ್. ಅನರ್ಹತೆ ಮಾಡುವ ಬಗ್ಗೆ ಅನುಮತಿ ಇದೆಯೋ? ಅಥವಾ ಇಲ್ಲವೋ? ಎನ್ನುವ ಬಗ್ಗೆ ಕಂಡುಹಿಡಿಯುತ್ತೇವೆ ಅಂತಲೂ ಕೋರ್ಟ್ ಹೇಳಿದೆ.
from India & World News in Kannada | VK Polls https://ift.tt/3jx0kUZ