ಧೋನಿಯೊಂದಿಗೆ ಡ್ರೆಸ್ಸಿಂಗ್‌ ಕೊಠಡಿ ಅನುಭವ ಹಂಚಿಕೊಂಡ ಸ್ಯಾಂಟ್ನರ್‌!

ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿಯೇ ಚೆನ್ನೈ ಸೂಪರ್‌ ಕಿಂಗ್ಸ್ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿದೆ. ಕಳೆದ 12 ಆವೃತ್ತಿಗಳಲ್ಲಿ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಮೂರು ಬಾರಿ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡಿದೆ. ಎಂಎಸ್ ಧೋನಿ, ಸ್ಟೀಫೆನ್ ಫ್ಲೆಮಿಂಗ್ ಮತ್ತು ಮೈಕಲ್ ಹಸ್ಸಿ ಅವರಂತಹ ದೊಡ್ಡ ದಿಗ್ಗಜರಿಂದ ಕಲಿಯಲು ಯುವ ಕ್ರಿಕೆಟಿಗರಿಗೆ ಅತ್ಯುತ್ತಮ ಅವಕಾಶ. ತಂಡದ ಭಾಗವಾಗಿರುವ ನ್ಯೂಜಿಲೆಂಡ್‌ ಆಲ್‌ರೌಂಡರ್‌ ಮಿಚೆಲ್‌ ಸ್ಯಾಂಟ್ನರ್ ಮಾತನಾಡಿ ವಿಶ್ವದಲ್ಲೇ ಐಪಿಎಲ್‌ ಅತ್ಯುತ್ತಮ ಟಿ20 ಟೂರ್ನಿ ಎಂದು ಬಣ್ಣಿಸಿದ್ದಾರೆ. " ವಿಶ್ವದ ಎಲ್ಲಾ ಟಿ20 ಟೂರ್ನಿಗಳಿಗಿಂತ ಭಾರತದಲ್ಲಿ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅತ್ಯಂತ ಪರಾಕಷ್ಠೆ ಟೂರ್ನಿಯಾಗಿದೆ ಹಾಗೂ 2018ರಲ್ಲಿ ಮೊದಲ ಬಾರಿ ಐಪಿಎಲ್‌ಗೆ ನನ್ನನ್ನು ಆಯ್ಕೆ ಮಾಡಿದ್ದಾಗ ನನಗೆ ತುಂಬಾ ಉತ್ಸಕತೆ ಉಂಟಾಗಿತ್ತು," ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋಗೆ ತಿಳಿಸಿದರು. "ಚೆನ್ನೈ ತಂಡದಲ್ಲಿ ವಿಶ್ವ ದರ್ಜೆಯ ಸ್ಪಿನ್ನರ್‌ಗಳಿದ್ದಾರೆ. ಹರಭಜನ್‌ ಸಿಂಗ್‌, ರವಿಂದ್ರ ಜಡೇಜಾ ಹಾಗೂ ಇಮ್ರಾನ್‌ ತಾಹೀರ್‌ ಅವರಂಥ ಆಟಗಾರರ ಜತೆ ಆಡುವುದು ಮತ್ತು ಅವರಿಂದ ನೋಡಿ ಕಲಿಯುವುದರ ಜತೆಗೆ ಏನೇ ಅನುಮಾನ ಉಂಟಾದರೂ ಅವರ ಬಳಿ ಬಗೆಹರಿಸಿಕೊಳ್ಳಬಹುದಾಗಿದೆ," ಎಂದು ಸ್ಯಾಂಟ್ನರ್‌ ಹೇಳಿದರು. "ಮೊದಲ ವರ್ಷ [2018] ಗಾಯಗೊಂಡಾಗ, ನಾನು ಸಾಕಷ್ಟು ನಿರಾಶೆಗೊಂಡಿದ್ದೆ, ಆದರೆ ಕಳೆದ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಆಡಲು ಅವಕಾಶ ನೀಡಲಾಯಿತು. ಇದು ನಂಬಲಾಗದ ಟೂರ್ನಿಯಾಗಿದೆ ಮತ್ತು ಟಿ 20 ಲೀಗ್‌ಗಳ ವಿಷಯದಲ್ಲಿ ಖಂಡಿತವಾಗಿಯೂ ಅತ್ಯುತ್ತಮ ಕ್ರಿಕೆಟ್ ಇದಾಗಿದೆ. ನ್ಯೂಜಿಲೆಂಡ್‌ಗಿಂತ ವಿಭಿನ್ನ ಪಿಚ್‌ಗಳಲ್ಲಿ ಬೌಲಿಂಗ್ ಮಾಡುವುದು ಸಂತೋಷ ತಂದಿದೆ," ಎಂದು ಹೇಳಿದರು. ಮಹೇಂದ್ರ ಸಿಂಗ್‌ ಧೋನಿ ಅವರೊಂದಿಗೆ ಡ್ರೆಸ್ಸಿಂಗ್‌ ಕೋಠಡಿ ಹಂಚಿಕೊಂಡಿದ್ದು ಅದ್ಭುತ ಅನುಭವವನ್ನು ನೀಡಿತು ಎಂದು ಸ್ಯಾಂಟ್ನರ್‌ ಹೇಳಿದರು. "ಸಾಕಷ್ಟು ಬಾರಿ ವಿರುದ್ಧ ಆಡಿದ್ದೇನೆ ಆದರೆ, ಅವರೊಂದಿಗೆ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಕುಳಿತು ಪಂದ್ಯದ ಬಗ್ಗೆ ಮಾತನಾಡುವುದು ಬಹಳ ಅದ್ಭುತ ಅನುಭವ. ಸುರೇಶ್‌ ರೈನಾ ಅವರಂಥ ಹಲವು ಆಟಗಾರರೊಂದಿಗೆ ಆಡುವುದು ಅತ್ಯುತ್ತಮ ಅನುಭವವನ್ನು ನೀಡುತ್ತದೆ," ಎಂದರು. ಕಳೆದ ವರ್ಷ ಚೆಪಕ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಚೊಚ್ಚಲ ಐಪಿಎಲ್‌ ಪಂದ್ಯವಾಡಿದ್ದ ಅವರು 2 ಓವರ್‌ಗಳಿಗೆ 26 ರನ್‌ ಕೊಟ್ಟು ದುಬಾರಿಯಾಗಿದ್ದರು. ಇದರ ಹೊರತಾಗಿಯೂ ಚೆನ್ನೈ ಗೆಲುವು ಸಾಧಿಸಿತ್ತು. ಈ ಪಂದ್ಯ ತುಂಬಾ ಕಠಿಣವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. "ಹೌದು, ನನಗೆ ಆ ಪಂದ್ಯ ಕಠಿಣವಾಗಿತ್ತು. ನ್ಯೂಜಿಲೆಂಡ್‌ ಬೇಸಿಗೆಯನ್ನು ತಡವಾಗಿ ಮುಗಿಸಿ ಐಪಿಎಲ್‌ ಬಂದಿದ್ದೆ. ಕೇವಲ ಒಂದು ದಿನ ಅಥವಾ ಎರಡು ದಿನಗಳ ಅಂತರದಲ್ಲಿ ನಾನು ಮೊದಲ ಪಂದ್ಯವಾಡಿದ್ದೆ. ಆ ಪಂದ್ಯಕ್ಕೆ ನನಗೆ ಅನುಭವದ ಕೊರತೆಯು ಕಾಡಿತ್ತು. ಹಾಗಾಗಿ, ದುಬಾರಿಯಾಗಬೇಕಾಯಿತು," ಎಂದು ಕಿವೀಸ್‌ ಆಲ್‌ರೌಂಡರ್‌ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39eAFM0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...