ಬೇಸರದಲ್ಲಿದ್ದಾರೆ ಶ್ರೀರಾಮುಲು! ಅಸಮಾಧಾನಕ್ಕೆ ಕಾರಣವೇನು?

ಬೆಂಗಳೂರು: ಆರೋಗ್ಯ ಸಚಿವ ಅಸಮಾಧಾನಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಕುರಿತಾಗಿ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳು ಒಂದು ಕಡೆಯಾದರೆ ಕೋವಿಡ್‌ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಚನೆಯಾದ ಟಾಸ್ಕ್‌ ಫೋರ್ಸ್‌ ಟೀಂನಲ್ಲೂ ರಾಮುಲು ಅವರನ್ನು ಕಡೆಗಣಿಸಲಾಗುತ್ತಿದೆ ಎಂಬುವುದು ಅವರ ಬೇಸರಕ್ಕೆ ಕಾರಣ ಎನ್ನಲಾಗುತ್ತಿದೆ. ಕೋವಿಡ್‌ ಸೋಂಕು ಹರಡುವಿಕೆ ಆರಂಭದ ದಿನಗಳಲ್ಲಿ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಅವರಿಗೆ ಜಾವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಕೆಲವು ದಿನಗಳಲ್ಲಿ ಜಾವಾಬ್ದಾರಿ ವಿಚಾರವಾಗಿ ಗೊಂದಲ ಆರಂಭಗೊಂಡಿತ್ತು. ಕೋವಿಡ್‌ ಸಂಪೂರ್ಣ ಉಸ್ತುವಾರಿಯನ್ನು ಸುಧಾಕರ್‌ ಅವರಿಗೆ ನೀಡಿದ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ನಡೆಗೆ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದರು. ಪರಿಣಾಮ ಮತ್ತೆ ಆದೇಶವನ್ನು ಬದಲಾವಣೆ ಮಾಡಲಾಗಿತ್ತು. ಬೆಂಗಳೂರಿನ ಹೊಣೆಯನ್ನು ಸುಧಾಕರ್‌ ಅವರಿಗೆ ನೀಡಿ ರಾಜ್ಯದ ಹೊಣೆಯನ್ನು ಶ್ರೀರಾಮುಲು ಅವರಿಗೆ ನೀಡಲಾಯಿತು. ಹೀಗಿದ್ದರೂ ಕೋವಿಡ್‌ ಸಂಬಂಧಿಸಿದಂತೆ ಬಹುತೇಕ ಪತ್ರಿಕಾಗೋಷ್ಠಿ ಹಾಗೂ ಮಾಧ್ಯಮಗಳಿಗೆ ಹೇಳಿಕೆಗಳನ್ನು ಸುಧಾಕರ್‌ ಅವರೇ ನೀಡುತ್ತಿದ್ದರು. ಇದೀಗ ಕೋವಿಡ್‌ ನಿರ್ವಹಣೆಗೆ ಸಚಿವರನ್ನು ಒಳಗೊಂಡ ಟಾಸ್ಕ್‌ಫೋರ್ಸ್ ರಚನೆಯಾಗಿದೆ. ಆದರೆ ಈ ಕಾರ್ಯಪಡೆಯನ್ನು ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಶ್ರೀರಾಮುಲು ಬೇಸರಗೊಂಡಿದ್ದಾರೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಕಾರ್ಯಪಡೆಯಲ್ಲಿ ನನ್ನ ಮಾತುಗಳು ನಡೆಯುತ್ತಿಲ್ಲ, ಅಧಿಕಾರಿಗಳು ಕೂಡಾ ಕೇಳುತ್ತಿಲ್ಲ ಎಂಬುವುದು ಇವರ ಅಸಮಾಧಾನಕ್ಕೆ ಕಾರಣವಾಗಿದೆ. ಶ್ರೀರಾಮುಲು ಡಿಸಿಎಂ ಹುದ್ದೆಯ ಆಕಾಂಕ್ಷಿಯೂ ಆಗಿದ್ದಾರೆ. ಆದರೆ ವಲಸೆ ಬಂದು ಸಚಿವ ಸ್ಥಾನ ಅಲಂಕರಿಸಿದವರ ‘ಕೈ’ ಮೇಲಾಗುತ್ತಿದೆ ಎಂಬ ಮಾತುಕಗೂ ಚರ್ಚೆಯಲ್ಲಿವೆ. ಶ್ರೀರಾಮುಲು ಅಸಮಾಧಾನ ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗರ ನಡುವಿನ ಶೀತಲ ಸಮರಕ್ಕೆ ಒಂದು ಉದಾಹರಣೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಮುಲು ಅಸಮಾಧಾನ ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂಬುವುದು ಸದ್ಯದ ಕುತೂಹಲ.


from India & World News in Kannada | VK Polls https://ift.tt/2WLpdCD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...