ವಿಜಯ್ ಕೋಟ್ಯಾನ್ ಮಂಗಳೂರು ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸೇರಿದಂತೆ ಎಲ್ಲ , ಉತ್ಸವಗಳನ್ನು ಪೂಜೆ, ಧಾರ್ಮಿಕ ವಿಧಿ-ವಿಧಾನಗಳಿಗಷ್ಟೇ ಸೀಮಿತಗೊಳಿಸಲು ನಿರ್ಧರಿಸಿದೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಅಧಿಕೃತ ಸುತ್ತೋಲೆ ಬಿಡುಗಡೆಯಾಗಲಿದೆ. ನಾಗರ ಪಂಚಮಿ, ವರಮಹಾಲಕ್ಷ್ಮೀ ವ್ರತ,ಕೃಷ್ಣ ಜನ್ಮಾಷ್ಟಮಿ, ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ಯಾವುದೇ ಹಬ್ಬ, ಉತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ. ಮನೆ, ಕುಟುಂಬ, ಮೂಲಸ್ಥಾನದ ನಾಗರ ಪಂಚಮಿಯಲ್ಲೂ ಸಾರ್ವಜನಿಕರು ಭಾಗವಹಿಸುವಂತಿಲ್ಲ. ಎಲ್ಲ ಆಚರಣೆಗಳನ್ನು ಸಂಪ್ರದಾಯ, ಧಾರ್ಮಿಕವಾಗಿ ಆಚರಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ, ಆದರೆ, ಜನ ಸೇರುವಂತಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ವಿಜಯ ಕರ್ನಾಟಕ ಜತೆ ಮಾತನಾಡಿ, ಆರೋಗ್ಯ ದೃಷ್ಟಿಯನ್ನಿಟ್ಟುಕೊಂಡು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಜನರು ಸಹಕಾರ ಮುಖ್ಯ. ಮಾತ್ರವಲ್ಲ ವರಮಹಾಲಕ್ಷ್ಮೀ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಅವಕಾಶ ನಿರಾಕರಿಸಲಾಗಿದೆ ಎಂದರು. ಗಣೇಶೋತ್ಸವ ಹೇಗೆ? - ಮನೆಯಲ್ಲಿ ಗಣೇಶ ಪೂಜೆಗೆ ಅಡ್ಡಿಯಿಲ್ಲ, ಜನ ಸೇರಬಾರದು, ಮೆರವಣಿಗೆ ಸಲ್ಲದು. - ಸಾರ್ವಜನಿಕ ಗಣೇಶೋತ್ಸವದಲ್ಲಿ ಧಾರ್ಮಿಕ ವಿಧಿಧಿ-ವಿಧಾನಕ್ಕೆ ಅವಕಾಶವಿದೆ. - ಸಾರ್ವಜನಿಕರಿಗೆ ಉತ್ಸವ ಸ್ಥಳಗಳಿಗೆ ಪ್ರವೇಶ ನಿರ್ಬಂಧ ವಿಧಿಸಲಾಗುವುದು. - ಭಾರಿ ಜನ ಸೇರಿಸಿ ಮೆರವಣಿಗೆಗೆ ಅವಕಾಶವಿಲ್ಲ ಲಾಲ್ಭಾಗ್ ಕಾ ರಾಜನಿಗೂ ಅಡ್ಡಿ ಕೋವಿಡ್ ಕಾರಣದಿಂದ ದೇಶದಲ್ಲೇ ಅತೀ ದೊಡ್ಡ ಉತ್ಸವವಾದ ಮುಂಬಯಿ ಲಾಲ್ ಭಾಗ್ ಕಾ ರಾಜಾ ಸಾರ್ವಜನಿಕ ಗಣೇಶೋತ್ಸವವೇ ನಡೆಯುತ್ತಿಲ್ಲ ಎಂದು ಮಂಡಳ್ ಸಭೆ ಸೇರಿ ಅಧಿಕೃತ ಪ್ರಕಟಣೆ ನೀಡಿದೆ. ಈ ಉತ್ಸವದ ಬದಲು ಈ ಬಾರಿ ಆರೋಗ್ಯ ಉತ್ಸವ ನಡೆಸಿ ರಕ್ತದಾನ, ಪ್ಲಾಸ್ಮಾದಾನ ಶಿಬಿರ ನಡೆಸಲು ಮಂಡಳ್ ನಿರ್ಧರಿಸಿದೆ. ಎಲ್ಲ ಹಬ್ಬಗಳನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಸರಳವಾಗಿ ಆಚರಿಸಬಹುದು. ಆದರೆ ಎಲ್ಲೂ ಸಾರ್ವಜನಿಕರನ್ನು ಸೇರಿಸುವಂತಿಲ್ಲ. ಪ್ರಸ್ತುತ ಸ್ಥಿತಿಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಈ ರೀತಿಯ ಕ್ರಮ ಅನಿವಾರ್ಯ. -ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯ ಮುಜರಾಯಿ ಸಚಿವರು 1 ತಿಂಗಳ ಹಬ್ಬಗಳು ಜು. 25: ನಾಗರಪಂಚಮಿ, ಜು. 31: ವರಮಹಾಲಕ್ಷ್ಮಿ ವ್ರತ, ಆ. 3: ರಕ್ಷಾ ಬಂಧನ, ಆ. 11: ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿ, ಆ. 15: ಸ್ವಾತಂತ್ರ್ಯ ದಿನಾಚರಣೆ, ಆ. 22: ಗಣೇಶ ಚತುರ್ಥಿ ಈ ಬಾರಿ ಈವರೆಗೆ 150 ವಿಗ್ರಹದ ಬೇಡಿಕೆ ಬಂದಿದೆ. ಅದರಲ್ಲಿ ಶೇ.90ರಷ್ಟು ವಿಗ್ರಹಗಳು ಮನೆಯಲ್ಲಿಟ್ಟು ಪೂಜಿಸುವಂಥವು. ಸಾರ್ವಜನಿಕ ಆಚರಣೆಗೆ ಬೇಕಾಗಿರುವ ವಿಗ್ರಹಗಳ ರಚನೆಗೆ ಹಿಂದಿನ ಸಾಲಿನಷ್ಟು ಬೇಡಿಕೆ ಬಂದಿಲ್ಲ. 3-4 ಬೇಡಿಕೆ ಬಂದಿದ್ದು ಮುಂದೆ ಕಾದು ನೋಡಬೇಕು. -ರಾಜೇಶ್ ಗುಡಿಗಾರ ಗಣಪತಿ ವಿಗ್ರಹ ರಚನೆಕಾರರು, ಕುಂದಾಪುರ
from India & World News in Kannada | VK Polls https://ift.tt/32LbFuD