3 ಆಸ್ಪತ್ರೆಗೆ ಅಲೆದಾಡಿದರು ಸಿಗಲಿಲ್ಲ ಕೊರೊನಾ ವಾರಿಯರ್‌ಗೆ ದಾಖಲಾತಿ, ಕೊನೆಯುಸಿರೆಳೆದ ವೈದ್ಯ!

ಬೆಂಗಳೂರು: ರಿಪೋರ್ಟ್‌ ಇಲ್ಲ ಎನ್ನುವ ಕಾರಣಕ್ಕೆ ಲಕ್ಷಣಗಳಿರುವ ರೋಗಿಗಳನ್ನ ಆಸ್ಪತ್ರೆಗೆ ದಾಖಲಿಸುತ್ತಿಲ್ಲ ಎನ್ನುವ ಆರೋಪ ಇತ್ತೀಚೆಗೆ ಬೆಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೇಳಿಬಂದಿತ್ತು. ಜನ ಸಾಮಾನ್ಯ ಎಂದರೆ ಅಸಡ್ಡೆ ಅನ್ನಬಹುದು ಆದರೆ ಇದೀಗ ಇಂತಹ ಸಮಸ್ಯೆಯಿಂದ ಕೊರೊನಾ ವಾರಿಯರೇ ಮೃತಪಟ್ಟಿರುವ ಘಟನೆ ನಡೆದಿದೆ. ಹೌದು, ಡಾ. ಮಂಜುನಾಥ್‌ ಎಸ್‌ಟಿ ಎಂಬವರು ಕೊರೊನಾ ಸೋಂಕಿನಿಂದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಚಿಕ್ಕಮುದವಾಡಿ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು ಮಂಜುನಾಥ್‌. ಇತ್ತೀಚೆಗೆ ಇವರ ಮಾವ ಕೂಡ ಕೊರೊನಾದಿಂದ ಮೃತಪಟ್ಟಿದ್ದು ಇದೀಗ ವೈದ್ಯರ ಸಾವು ಕುಟುಂಬವನ್ನ ತಲ್ಲಣಗೊಳಿಸಿದೆ. ನಡೆದಿದ್ದು ಏನು? ವೈದ್ಯ ಮಂಜುನಾಥ್‌ ಎಸ್‌ಟಿ ಅವರಿಗೆ ಕೊರೊನಾ ಲಕ್ಷಣವಾದ ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಬೆಂಗಳೂರಿನ ಮೂರು ಆಸ್ಪತ್ರೆಗೆ ಭೇಟಿ ನೀಡಿ ದಾಖಲಾತಿಗೆ ಮನವಿ ಮಾಡಿಕೊಂಡಿದ್ದರಂತೆ. ಆದರೆ ಕೊರೊನಾ ಪರೀಕ್ಷೆ ನಡೆಸಿದ ರಿಪೋರ್ಟ್‌ ಇಲ್ಲದ ಹಿನ್ನೆಲೆ ಮೂರು ಖಾಸಗಿ ಆಸ್ಪತ್ರೆಗಳು ದಾಖಲಾತಿಗೆ ನಿರಾಕರಿಸಿದೆ ಎಂದು ಅವರ ಸಂಬಂಧಿ ಹಾಗೂ ಬಿಬಿಎಂಪಿಯ ಆರೋಗ್ಯ ಅಧಿಕಾರಿ ಡಾ. ನಾಗೇಂದ್ರ ಕುಮಾರ್ ಆರೋಪಿಸಿದ್ದಾರೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಒಂದೇ ರೀತಿಯ ಸಬೂಬು ಕೊಟ್ಟು ದಾಖಲಾತಿಗೆ ಹಿಂದೇಟು ಹಾಕಿರುವುದಾಗಿ ನಾಗೇಂದ್ರ ತಿಳಿಸಿದ್ದಾರೆ. ಕೊನೆಗೆ ನಾಲ್ಕನೇ ಆಸ್ಪತ್ರೆಯಲ್ಲಿ ಜೂ.25ರಂದು ಮಂಜುನಾಥ್‌ ಅವರನ್ನ ದಾಖಲು ಮಾಡಲಾಯಿತು. ಆರಂಭದಲ್ಲಿ ಅವರ ಆರೋಗ್ಯ ಸುಧಾರಿಸಲು ಆರಂಭವಾಯಿತು ಆದರೆ ದಿನ ಕಳೆದಂತೆ ಅವರ ಸ್ಥಿತಿ ಮತ್ತಷ್ಟು ವಿಷಮವಾಯಿತು. ಹೀಗಾಗಿ ಕೂಡಲೇ ನಾವು ಅವರನ್ನ ಬಿಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಿದೆವು.ಶ್ವಾಸಕೋಶದ ಸಮಸ್ಯೆ ಉಲ್ಭಣವಾಗಿದ್ದರಿಂದ ಅವರನ್ನ ವೆಂಟಿಲೇಟರ್‌ನಲ್ಲಿ ಇಡಲಾಯಿತು ಆದರೆ ಅವರು ಗುರುವಾರ ಕೊನೆಯುಸಿರೆಳೆದರು ಎಂದು ನಾಗೇಂದ್ರ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ರಿಪೋರ್ಟ್‌ ಇಲ್ಲವೆಂದು ಕೊರೊನಾ ರೋಗಿಗಳ ದಾಖಲಾತಿಗೆ ಹಿಂದೇಟು ಹಾಕುತ್ತಿದ್ದವು. ಈ ಬಗ್ಗೆ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿವೆ. ಮೊದಲು ದಾಖಲು ಮಾಡುವಂತೆ ಸೂಚನೆ ನೀಡಿದೆ.


from India & World News in Kannada | VK Polls https://ift.tt/32MK6kr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...