ಸುಪ್ರೀಂ‌ ಅಂಗಳ ತಲುಪಿದ ರಾಜಸ್ಥಾನ ಹೈಡ್ರಾಮಾ..! ಹೈಕೋರ್ಟ್‌ ವಿಳಂಬ ಧೋರಣೆ ಪ್ರಶ್ನಿಸಿ ಸ್ಪೀಕರ್ ಅರ್ಜಿ‌

ಜೈಪುರ/ ಹೊಸದಿಲ್ಲಿ: ರಾಜಕೀಯ ಬಿಕ್ಕಟ್ಟು ಈಗ ತಲುಪಿದೆ. ರಾಜಸ್ಥಾನ ಹೈಕೋರ್ಟ್‌ನ ವಿಳಂಬ ಧೋರಣೆ ವಿರುದ್ಧ ಸ್ಪೀಕರ್‌ ಸುಪ್ರೀಂ ಮೊರೆ ಹೋಗಿದ್ದು, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವುದನ್ನು ತಪ್ಪಿಸಿ ಎಂದು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ಶಾಸಕರ ಅನರ್ಹತೆ‌ ನಿರ್ಧರಿಸುವ ಹಕ್ಕು ಸ್ಪೀಕರ್‌ಗೆ ಮಾತ್ರ ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಶಾಸಕರಿಗೆ ನೋಟಿಸ್‌ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಸ್ಪೀಕರ್‌ಗಿದೆ. ಸ್ಪೀಕರ್‌ ನಿರ್ಧಾರದ ಬಳಿಕ ಮಾತ್ರ ನ್ಯಾಯಾಂಗ ವಿಮರ್ಷೆ ಮಾಡಬಹುದು ಎಂದು ಸಿ.ಪಿ.ಜೋಷಿ ಹೇಳಿದ್ದಾರೆ. ಇನ್ನು, ಕಳೆದ 10 ದಿನಗಳಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಮತ್ತು ಅವರ ಬೆಂಬಲಿಗರು ರೆಸಾರ್ಟ್‌ ವಾಸ್ತವ್ಯ ಹೂಡಿದ್ದು, ಎರಡು ಸಿಎಲ್‌ಪಿ ಸಭೆಗಳಿಗೂ ಹಾಜರಾಗಿಲ್ಲ. ಆದ್ದರಿಂದ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸಚಿನ್‌ ಪೈಲಟ್‌ರನ್ನು ಡಿಸಿಎಂ ಹಾಗೂ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ನಂತರ, ಸಚಿನ್‌ ಪೈಲಟ್‌ ಸೇರಿ 19 ಶಾಸಕರ ವಿರುದ್ಧ ಸ್ಪೀಕರ್‌ ಅನರ್ಹತೆ ನೋಟಿಸ್‌ ನೀಡಿದ್ದರು. ಈ ವಿಚಾರವಾಗಿ ಪೈಲಟ್‌ ಕ್ಯಾಂಪ್‌ ಹೈಕೋರ್ಟ್‌ ಮೊರೆ ಹೋಗಿತ್ತು. ಕಳೆದ ವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮೂರು ದಿನ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದಿತ್ತು. ಮಂಗಳವಾರ ಅರ್ಜಿ ಆಲಿಸಿದ್ದ ಹೈಕೋರ್ಟ್‌ ಮತ್ತೆ ಶುಕ್ರವಾರದವರೆಗೂ ಯಾವುದೇ ಕ್ರಮ ತೆಗೆದುಕೊಳ್ಳುವುದು ಬೇಡ ಎಂದು ಹೇಳಿತ್ತು. ಇದರಿಂದ ಸಚಿನ್‌ ಪೈಲಟ್‌ ಕ್ಯಾಂಪ್‌ಗೆ ಮತ್ತೆ ಮೂರು ದಿನ ನಿರಾಳತೆ ಸಿಕ್ಕಿತ್ತು. ಹೈಕೋರ್ಟ್‌ ನಿರ್ಧಾರದಿಂದ ಸ್ಪೀಕರ್‌ಗೆ ಹಿನ್ನಡೆಯಾದಂತೆ ಕಾಣುತ್ತಿತ್ತು. ಹೈಕೋರ್ಟ್‌ನ ವಿಳಂಬ ಧೋರಣೆಯ ವಿರುದ್ಧ ಸ್ಪೀಕರ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗದಿರಲಿ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/32P5p4S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...