ಭೋಪಾಲ್: ಮಾರಕ ಸೋಂಕು ತಗುಲದಿರಲು ದಿನಕ್ಕೆ 5 ಬಾರಿ ಹಬುಮಾನ್ ಚಾಲೀಸಾ ಪಠಿಸುವಂತೆ ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸಲಹೆ ನೀಡಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಆಧ್ಯಾತ್ಮಿಕ ಮಾರ್ಗ ಉತ್ತಮ ಎಂದಿರುವ ಇದೇ ಆಗಸ್ಟ್ 5ರವರೆಗೆ ದಿನಕ್ಕೆ 5 ಬಾರಿ ತಪ್ಪದೇ ಹುನುಮಾನ್ ಚಾಲೀಸಾ ಪಠಿಸಬೇಕು ಎಂದು ಹೇಳಿದ್ದಾರೆ. ವಿಶೇಷವೆಂದರೆ ಆಗಸ್ಟ್ 5 ರಂದು ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದು, ಅಲ್ಲಿಯವರೆಗೂ ನಿತ್ಯವೂ 5 ಬಾರಿ ಪಠಿಸುವಂತೆ ಪ್ರಗ್ಯಾ ಸಿಂಗ್ ಸಲಹೆ ನೀಡಿದ್ದಾರೆ. ಆಧ್ಯಾತ್ಮ ಮಾರ್ಗದ ಮೂಲಕ ಕೊರೊನಾ ವೈರಸ್ ಗಹಾವಳಿ ವಿರುದ್ಧ ಹೋರಾಡಲು ಕರೆ ನೀಡಿರುವ ಪ್ರಗ್ಯಾ ಠಾಕೂರ್, ಹನುಮಾನ್ ಚಾಲೀಸಾ ಪಠಣೆ ಮೂಲಕ ಕೊರೊನಾ ಸೋಂಕಿನಿಂದ ದೂರ ಉಳಿಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಪ್ರಗ್ಯಾ ಠಾಕೂರ್ ಹೇಳಿಕೆಗೆ ತೀವ್ರ ವಿರೋಧವೂ ವ್ಯಕ್ತವಾಗಿದ್ದು, ಕೊರೊನಾ ಹಾವಳಿ ತಪ್ಪಿಸಲು ತಾವು ಕೈಗೊಂಡಿರುವ ವೈದ್ಯಕೀಯ ಕ್ರಮಗಳ ವಿವರಣೆ ನೀಡದ ಪ್ರಗ್ಯಾ ಠಾಕೂರ್, ಜನರಿಗೆ ಹನುಮಾನ್ ಚಾಲೀಸಾ ಪಠಿಸಲು ಹೇಳುತ್ತಿರುವುದು ನಿಜಕ್ಕೂ ದುರಂತ ಎಂದು ಹಲವರು ಕಿಡಿಕಾರಿದ್ದಾರೆ.
from India & World News in Kannada | VK Polls https://ift.tt/3g1uvBj