ನವದೆಹಲಿ: ಇಂದು(ಭಾನುವಾರ) ದೇಶದಾದ್ಯಂತ 21ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದ್ದು, ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಭಾರತೀಯ ಯೋಧರನ್ನು ಸ್ಮರಿಸಲಾಗುತ್ತಿದೆ. ಪ್ರಮುಖವಾಗಿ ಕೇಂದ್ರ ಗೃಹ ಸಚಿವ , ಕಾಂಗ್ರೆಸ್ ನಾಯಕ ಸೇರಿದಂತೆ ಹಲವರು ದೇಶಕ್ಕೆ ಕಾರ್ಗಿಲ್ ವಿಜಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರವ ಅಮಿತ್ ಶಾ, ಕಾರ್ಗಿಲ್ ಯುದ್ಧದ ವಿಜಯ ಭಾರತದ ಸ್ವಾಭಿಮಾನ, ಅದ್ಭುತ ಪರಾಕ್ರಮ ಹಾಗೂ ಸಂಘಟಿತ ಹೋರಾಟದ ಪ್ರತೀಕ ಎಂದು ಬಣ್ಣಿಸಿದ್ದಾರೆ. ಮಾತೃಭೂಮಿ ಮೇಲೆ ಎರಗಿದ ಶತ್ರುಗಳನ್ನು ಹೊರಗಟ್ಟಲು ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಹುತಾತ್ಮರನ್ನು ದೇಶ ಸದಾ ಹೆಮ್ಮೆಯಿಂದ ಸ್ಮರಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಅದರಂತೆ ಕಾರ್ಗಿಲ್ ವಿಜಯ ದಿವಸದ ಸಂದರ್ಭದಲ್ಲಿ ಹುತಾತ್ಮರನ್ನು ನೆನೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ದೇಶ ರಕ್ಷಣೆ ಮಾಡುವವ ವೀರ ಸೈನಿಕರಿಗೆ ನನ್ನ ನಮನ ಎಂದು ಹೇಳಿದ್ದಾರೆ. ಭಾರತ-ಪಾಕಿಸ್ತಾನ ನಡುವಿನ 199ರ ಯುದ್ಧದಲ್ಲಿ ಅಂತಿಮವಾಗಿ ಪಾಕ್ ಸೇನೆಯನ್ನು ಮಣಿಸುವ ಮೂಲಕ, ಭಾರತೀಯ ಸೇನೆ ಗಲುವಿನ ನಗೆ ಬೀರಿತ್ತು, ಕಾರ್ಗಿಲ್ ಯುದ್ಧ ಮಾನವ ಇತಿಹಾಸದ ಅತ್ಯಂತ ಪ್ರಮುಖ ಹಾಗೂ ಘೋರ ಯುದ್ಧಗಳಲ್ಲಿ ಒಂದು ಎಂದು ಹೇಳಲಾಗಿದೆ.
from India & World News in Kannada | VK Polls https://ift.tt/32Veh9t