(ಉತ್ತರ ಪ್ರದೇಶ): ಬಹು ನಿರೀಕ್ಷಿತ ನಿರ್ಮಾಣಕ್ಕೆ ಆಗಸ್ಟ್ 5ರಂದು ಚಾಲನೆ ಸಿಗಲಿದೆ. ಈಗಾಗಲೇ ಎಲ್ಲ ಕಾರ್ಯಗಳು ಭರದಿಂದ ಸಾಗಿದ್ದು, ಮಂದಿರದ ವಿನ್ಯಾಸವನ್ನು ಕೂಡ ಆದ್ಯತೆಗೆ ತಕ್ಕಂತೆ ಬದಲಿಸಲಾಗುತ್ತಿದೆ. ದೇವಸ್ಥಾನದ ಎತ್ತರ ಮೊದಲ ವಿನ್ಯಾಸಕ್ಕಿಂತ 20 ಅಡಿ ಹೆಚ್ಚು ಇರಲಿದ್ದು, ಅಂದರೆ ಬರೋಬ್ಬರಿ 161 ಅಡಿ ಎತ್ತರದ ದೇವಸ್ಥಾನ ಅಯೋಧ್ಯೆಯಲ್ಲಿ ತಲೆ ಎತ್ತಲಿದೆ ಎಂದು ದೇವಸ್ಥಾನದ ವಾಸ್ತುಶಿಲ್ಪಿ ಹೇಳಿದ್ದಾರೆ. ಮಂದಿರದ ಮೂಲ ವಿನ್ಯಾಸ 1988ರಲ್ಲಿ ರೂಪಿಸಲಾಗಿತ್ತು. ಈಗಾಗಲೇ 30 ವರ್ಷಗಳು ಕಳೆದು ಹೋಗಿವೆ. ದೇವಸ್ಥಾನಕ್ಕೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅದಕ್ಕಾಗಿ ದೇಗುಲದ ಗಾತ್ರವನ್ನು ಹೆಚ್ಚಿಸಬೇಕು ಎಂದು ನಾವು ಭಾವಿಸಿದ್ದೇವೆ. ಪರಿಷ್ಕೃತ ವಿನ್ಯಾಸದ ಪ್ರಕಾರ, ದೇವಾಲಯದ ಎತ್ತರವನ್ನು 141 ಅಡಿಗಳಿಂದ 161 ಅಡಿಗಳಿಗೆ ಹೆಚ್ಚಿಸಲಾಗಿದೆ ಎಂದು ದೇವಾಲಯದ ಮುಖ್ಯ ವಾಸ್ತುಶಿಲ್ಪಿ ಸಿ.ಸೊಂಪುರ ಅವರ ಪುತ್ರ ಹಾಗೂ ವಾಸ್ತುಶಿಲ್ಪಿ ನಿಖಿಲ್ ಸೊಂಪುರ ತಿಳಿಸಿದ್ದಾರೆ. ಮೂಲ ವಿನ್ಯಾಸದ ಆಧಾರದ ಮೇಲೆಯೇ ಕೆತ್ತಿದ ಎಲ್ಲಾ ಕಂಬಗಳು ಮತ್ತು ಕಲ್ಲುಗಳನ್ನು ದೇಗುಲ ನಿರ್ಮಾಣಕ್ಕೆ ಬಳಸಲಾಗುತ್ತದೆ. ಕೇವಲ ಎರಡು ಮಂಟಪಗಳನ್ನು ಮಾತ್ರ ಹೊಸದಾಗಿ ಸೇರಿಸಲಾಗಿದೆ. ದೇವಸ್ಥಾನದ ನಿರ್ಮಾಣಕ್ಕೆ ಸುಮಾರು 3.5 ವರ್ಷ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಧಾನಿ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿದ ನಂತರ ಮಂದರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಎಲ್&ಟಿ ತಂಡವು ಯಂತ್ರೋಪಕರಣ ಹಾಗೂ ನಿರ್ಮಾಣ ಸಾಮಗ್ರಿಗಳೊಂದಿಗೆ ಈಗಾಗಲೇ ಸ್ಥಳವನ್ನು ತಲುಪಿದೆ. ಅಡಿಪಾಯದ ಕೆಲಸವನ್ನು ತಕ್ಷಣ ಪ್ರಾರಂಭಿಸುತ್ತದೆ. ದೇಗಲುದ ಕಾಮಗಾರಿ ಪೂರ್ಣಗೊಳ್ಳಲು 3 ರಿಂದ 3.5 ವರ್ಷಗಳು ಬೇಕಾಗುತ್ತದೆ ಎಂದು ನಿಖಿಲ್ ಸೊಂಪುರ ಹೇಳಿದ್ದಾರೆ. ಭವ್ಯವಾದ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ಮೂರು ದಿನಗಳ ಸುದೀರ್ಘ ವೈದಿಕ ಆಚರಣೆಗಳ ಮೂಲಕ ನಡೆಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 40 ಕೆಜಿ ಬೆಳ್ಳಿ ಇಟ್ಟಿಗೆಯನ್ನು ಅಡಿಪಾಯಕ್ಕೆ ಅಳವಡಿಸುವ ಮೂಲಕ ದೇಗುಲ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಆಗಸ್ಟ್ 3ರಿಂದಲೇ ಭೂಮಿ ಪೂಜೆಯ ಆಚರಣೆಗಳು ಪ್ರಾರಂಭವಾಗಲಿದೆ ಎನ್ನಲಾಗಿದೆ. ಕೊರೊನಾ ವೈರಸ್ ಕಾರಣದಿಂದ ಈಗಾಗಲೇ ಎರಡು ತಿಂಗಳಿಗಿಂತ ಹೆಚ್ಚು ವಿಳಂಬವಾದ ಕಾರ್ಯಕ್ರಮಕ್ಕೆ 50 ವಿಐಪಿಗಳು ಭಾಗವಹಿಸುವುತ್ತಾರೆ. ಅಯೋಧ್ಯೆಯಾದ್ಯಂತ ದೊಡ್ಡ ಎಲ್ಇಡಿ ಪರದೆಗಳನ್ನು ಹಾಕಲಾಗಿದ್ದು, ಭಕ್ತರು ಎಲ್ಲಿಂದ ಬೇಕಾದರೂ ಕಾರ್ಯಕ್ರಮವನ್ನು ವೀಕ್ಷಿಸಬಹುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಹೇಳಿದೆ.
from India & World News in Kannada | VK Polls https://ift.tt/2E8tZDD