
ಹೊಸದಿಲ್ಲಿ: ಸಮನ್ವಯದ ಕಾರ್ಯಯೋಜನೆಯಿಂದ ಮಾತ್ರವೇ ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು. ಕೇಂದ್ರ-ರಾಜ್ಯಗಳು, ರಾಜ್ಯ-ರಾಜ್ಯಗಳ ನಡುವೆ ಸಮನ್ವಯ ಅಗತ್ಯ. ಹಾಗೆಯೇ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ಗುಂಪುಗಳನ್ನು ರಚಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ನಲ್ಲಿ ಮುಖ್ಯಮಂತ್ರಿಗಳಿಗೆ ನೀಡಿದ ಪ್ರಮುಖ 6 ಸಲಹೆಗಳು
- ಲಾಕ್ಡೌನ್ ಹಿಂತೆಗೆದುಕೊಂಡ ಬಳಿಕವೂ ಕೆಲವು ವಾರಗಳವರೆಗೆ ತಪಾಸಣೆ, ನಿಗಾ, ಐಸೋಲೇಷನ್ ಮತ್ತು ಕ್ವಾರಂಟೈನ್ ಮುಂದುವರಿಸಬೇಕು
- ಕೃಷಿ ಉತ್ಪನ್ನಗಳ ಖರೀದಿಗೆ ಎಪಿಎಂಸಿಗಳು ಮಾತ್ರವಲ್ಲದೇ ಪರ್ಯಾಯ ಮಾರ್ಗಗಳ ಬಗ್ಗೆಯೂ ಆಲೋಚನೆ ಮಾಡಬೇಕು
- ಕೊರೊನಾ ಸೋಂಕಿನಿಂದ ಹೆಚ್ಚು ಪ್ರಾಣಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿರಬೇಕು
- ಬ್ಯಾಂಕ್ಗಳಲ್ಲಿ ನಗದು ಹರಿವಿನ ಕೊರತೆ ಎದುರಾಗದಂತೆ ಹಾಗೂ ಜನದಟ್ಟಣೆ ಉಂಟಾಗದಂತೆ ನಿಗಾ ವಹಿಸಬೇಕು
- ಔಷಧ ಉತ್ಪಾದಕರು, ವೈದ್ಯಕೀಯ ಉಪಕರಣ ತಯಾರಕರಿಗೆ ಕಚ್ಚಾ ಪದಾರ್ಥಗಳ ಕೊರತೆ ಎದುರಾಗದಂತೆ ಎಚ್ಚರ ವಹಿಸಬೇಕು
- ವೈದ್ಯರ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಆಯುಷ್ ವೈದ್ಯರನ್ನೂ ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳಬೇಕು
from India & World News in Kannada | VK Polls https://ift.tt/2xIqTmD