ಕರ್ನಾಟಕ vs ಮುಂಬಯಿ ರಣಜಿ ಹಣಾಹಣಿ; ಕರುಣ್ ಪಡೆಗೆ ಸಿಡಿದೇಳುವ ತವಕ

ಮುಂಬಯಿ: ಸತತ ಎರಡು ಡ್ರಾಗಳಿಂದಾಗಿ ಅಂಕಪಟ್ಟಿಯಲ್ಲಿ ಕೆಳಮುಖವಾಗಿ ಸಾಗುತ್ತಿರುವ ತಂಡ ರಣಜಿ ಟ್ರೋಫಿ 'ಎ' ಮತ್ತು 'ಬಿ' ಗುಂಪಿನ ತನ್ನ ನಾಲ್ಕನೇ ಪಂದ್ಯದಲ್ಲಿ ಬಲಿಷ್ಠ ವಿರುದ್ಧ ಪುಟಿದೇಳುವ ಉತ್ಸಾಹದಲ್ಲಿದೆ ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಆರಂಭವಾಗಲಿರುವ ಹೈವೋಲ್ಟೇಜ್‌ ಪಂದ್ಯ ಕರ್ನಾಟಕದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇಲ್ಲಿಯ ತನಕ ಆಡಿರುವ ಮೂರು ಪಂದ್ಯಗಳಲ್ಲಿ ಕರುಣ್‌ ನಾಯರ್‌ ನೇತೃತ್ವದ ಕರ್ನಾಟಕ ತಂಡ ಕೇವಲ ಒಂದು ಗೆಲುವು ಕಂಡಿದೆ. ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ ಕರ್ನಾಟಕ ತಂಡದ ಖಾತೆಯಲ್ಲೀಗ ಕೇವಲ ಹತ್ತು ಅಂಕಗಳಿವೆ. ಮುಂಬಯಿ ತಂಡ ಆಡಿದ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲಿನ ಮಿಶ್ರ ಫಲ ಕಂಡಿದ್ದು, ಆರು ಅಂಕ ಗಳಿಸಿದೆ. ತಮಿಳುನಾಡು ವಿರುದ್ಧ ಗೆಲುವು ಸಾಧಿಸಿದ್ದ ಕರ್ನಾಟಕ, ನಂತರ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ವಿರುದ್ಧ ಡ್ರಾಗಷ್ಟೇ ತೃಪ್ತಿಪಟ್ಟಿದೆ. ಅದರಲ್ಲೂ ಮೈಸೂರಿನಲ್ಲಿ ನಡೆದ ಹಿಮಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕರುಣ್‌ ಪಡೆ, ಇನಿಂಗ್ಸ್‌ ಹಿನ್ನಡೆಗೊಳಗಾಗಿ ಕೇವಲ ಒಂದು ಅಂಕಕ್ಕೆ ಸಮಾಧಾನಪಟ್ಟುಕೊಂಡಿತ್ತು. ಬ್ಯಾಟಿಂಗ್‌ ಸುಧಾರಣೆ ಅಗತ್ಯ ಗೆಲುವಿನ ಹಾದಿಗೆ ಮರಳಲು ಹಂಬಲಿಸುತ್ತಿರುವ ಕರ್ನಾಟಕ ತಂಡ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಮೂರರಲ್ಲೂ ಬಲಿಷ್ಠವಾಗಿರುವ ಮುಂಬಯಿ ವಿರುದ್ಧ ಸಂಘಟಿತ ಪ್ರದರ್ಶನ ನೀಡುವುದು ಅಗತ್ಯವಾಗಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್‌ ಭಾರತ ತಂಡದೊಂದಿಗೆ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಅಲ್ಲಿಯ ತನಕ ವಿಶ್ರಾಂತಿಗೆ ಸೂಚಿಸಲಾಗಿದೆ. ಹೀಗಾಗಿ ಅವರು ಮುಂಬಯಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ಪ್ರವಾಸಿ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಬಹುದು ಎಂದು ಊಹಿಸಲಾಗಿದೆ. ಹಿಮಾಚಲ ಪ್ರದೇಶ ವಿರುದ್ಧ ಸತತ 2 ಅರ್ಧಶತಕ ಗಳಿಸಿದ ನಾಯಕ ಕರುಣ್‌ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಫಾರ್ಮ್‌ ಕಂಡುಕೊಂಡಿರುವುದು ತಂಡದ ಪಾಲಿಗೆ ಸಮಾಧಾನಕರ ವಿಷಯ. ರೈಲ್ವೇಸ್‌ ವಿರುದ್ಧ 10 ವಿಕೆಟ್‌ಗಳ ಸೋಲು ಕಂಡಿರುವ ಮುಂಬಯಿ ತಂಡ ಬಲಿಷ್ಠ ಕರ್ನಾಟಕ ತಂಡದ ವಿರುದಟಛಿ ಗೆದ್ದು ಪೂರ್ಣ ಅಂಕ ಗಳಿಸುವ ಗುರಿಯಲ್ಲಿದೆ. ಆಧಿದರೆ ರಾಷ್ಟ್ರೀಯ ಸೇವೆಯ ಕಾರಣ ಶ್ರೇಯಸ್‌ ಅಯ್ಯರ್‌, ಶಿವಂ ದುಬೆ ಮತ್ತುವೇಗಿ ಶಾರ್ದುಲ್‌ ಠಾಕೂರ್‌ ತಂಡದಲ್ಲಿಲ್ಲ. ಕರ್ನಾಟಕ: ಕರುಣ್‌ ನಾಯರ್‌ (ನಾಯಕ), ದೇವದತ್‌ ಪಡಿಕ್ಕಲ್‌, ಡಿ. ನಿಶ್ಚಲ್‌, ಆರ್‌. ಸಮರ್ಥ್‌, ಅಭಿಷೇಕ್‌ ರೆಡ್ಡಿ, ಬಿ.ಆರ್‌ ಶರತ್‌, ರೋಹನ್‌ ಕದಂ, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌, ಅಭಿಮನ್ಯು ಮಿಥುನ್‌, ವಿ. ಕೌಶಿಕ್‌, ಪ್ರತೀಕ್‌ ಜೈನ್‌, ರೋನಿತ್‌ ಮೋರೆ, ಶರತ್‌ ಶ್ರೀನಿವಾಸ್‌, ಪ್ರವೀಣ್‌ ದುಬೆ. ಮುಂಬಯಿ: ಸೂರ್ಯಕುಮಾರ್‌ ಯಾದವ್‌ (ನಾಯಕ), ಆದಿತ್ಯ ತಾರೆ, ಅಜಿಂಕ್ಯ ರಹಾನೆ, ಪೃಥ್ವಿ ಶಾ, ಸರ್ಫರಾಜ್‌ ಖಾನ್‌, ಶುಭಂ ರಂಜನೆ, ಆಕಾಶ್‌ ಪಾರ್ಕರ್‌, ಸಿದ್ದೇಶ್‌ ಲಾಡ್‌, ಶಮ್ಸ್‌ ಮುಲಾನಿ, ವಿನಾಯಕ್‌ ಬಿ, ಶಶಾಂಕ್‌ ಎ., ರಾಸ್ಟನ್‌ ಡಯಾಸ್‌, ತುಷಾರ್‌ ದೇಶಪಾಂಡೆ, ದೀಪಕ್‌ ಶೆಟ್ಟಿ, ಏಕನಾಥ್‌ ಕೆ. ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ ಸ್ಥಳ: ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌, ಮುಂಬಯಿ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZLvC0G

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...