ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್ನಾಗ್ನಲ್ಲಿ ಶನಿವಾರ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಡಿಎಸ್ಪಿ ಮತ್ತು ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಉಗ್ರರಾದ ನವೀದ್ ಬಾಬು ಮತ್ತು ಅಲ್ತಾಫ್ ಜೊತೆ ಸಿಂಗ್ರನ್ನು ಬಂಧಿಸಲಾಗಿದ್ದು, ಅವರನ್ನೂ ಉಗ್ರನೆಂದೇ ಪರಿಗಣಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಬ್ಬರು ವಕೀಲರು ಮತ್ತು ಇಬ್ಬರು ಉಗ್ರರನ್ನು ಕಾಶ್ಮೀರ ಕಣಿವೆಯಿಂದ ಭದ್ರತಾ ಪಡೆಗಳ ಕಣ್ಣು ತಪ್ಪಿಸಿ ದಿಲ್ಲಿಗೆ ವಾಹನವೊಂದರಲ್ಲಿ ಕರೆದೊಯ್ಯುತ್ತಿದ್ದಾಗ ಡಿಎಸ್ಪಿ ಸಿಂಗ್ ಸಿಕ್ಕಿಬಿದ್ದಿದ್ದಾರೆ. ಸಾಂಭಾವ್ಯ ಭಯೋತ್ಪಾದನಾ ದಾಳಿಗೆ ಉಗ್ರರಿಬ್ಬರನ್ನು ಕರೆದುಕೊಂಡು ಹೋಗಲಾಗುತ್ತಿತ್ತು ಎನ್ನಲಾಗಿದೆ. ಕಾರಿನಿಂದ ಎರಡು ಎಕೆ-47 ಬಂದೂಕುಗಳು ಮತ್ತು ಕೆಲವು ಹ್ಯಾಂಡ್ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ ದಾಳಿಯಲ್ಲೂ ಭಾಗಿ? 2001ರಲ್ಲಿ ನಡೆದ ಸಂಸತ್ ದಾಳಿ ವೇಳೆಯೂ ಡಿಎಸ್ಪಿ ದೇವಿಂದರ್ ಸಿಂಗ್ ಅವರ ಹೆಸರು ಕೇಳಿಬಂದಿತ್ತು. ದಾಳಿಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ ಜೈಷ್-ಎ-ಮೊಹಮ್ಮದ್ ಉಗ್ರ ಅಫ್ಜಲ್ ಗುರು ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಸಿಂಗ್ ಹೆಸರನ್ನು ಉಲ್ಲೇಖಿಸಿದ್ದ. "ಸಂಸತ್ ದಾಳಿಕೋರರ ಪೈಕಿ ಒಬ್ಬನಾದ ಬಡಗಾಂವ್ನ ಮೊಹಮ್ಮದ್ನನ್ನು ದಿಲ್ಲಿಗೆ ಕರೆದೊಯ್ದು, ಬಾಡಿಗೆಗೆ ಮನೆ ಮತ್ತು ಕಾರು ಖರೀದಿಸಲು ಹೇಳಿದ್ದೇ ಸಿಂಗ್," ಎಂದು ಪತ್ರದಲ್ಲಿ ಅಫ್ಜಲ್ ವಿವರಿಸಿದ್ದ. ಆದರೆ ಈ ಬಗ್ಗೆ ಸೂಕ್ತ ಸಾಕ್ಷ್ಯಗಳು ಸಿಗಲಿಲ್ಲ ಎನ್ನುತ್ತಾರೆ ಅಧಿಕಾರಿಗಳು. 2013ರಲ್ಲಿ ಅಫ್ಜಲ್ ಗುರು ನೇಣಿಗೇರಿದ ನಂತರ ಅವರ ಕುಟುಂಬಸ್ಥರು ಈ ಪತ್ರಗಳನ್ನು ಬಹಿರಂಗಪಡಿಸಿದ್ದರು. ಆದರೆ ಕಳೆದ ಆ. 15ರಂದು ಡಿಎಸ್ಪಿ ಸಿಂಗ್ಗೆ ರಾಷ್ಟ್ರಪತಿ ಪೊಲೀಸ್ ಪದಕ ನೀಡಲಾಗಿತ್ತು. ಜೊತೆಗೆ ಈ ತಿಂಗಳ ಅಂತ್ಯಕ್ಕೆ ಎಸ್ಪಿ ದರ್ಜೆಗೆ ಬಡ್ತಿ ಪಡೆಯಬೇಕಾಗಿತ್ತು.
ನವೀದ್ ಕೂಡ ಪೊಲೀಸ್ದೇವಿಂದರ್ ಸಿಂಗ್ ಜತೆ ಸೆರೆಸಿಕ್ಕಿರುವ ಹಿಜ್ಬುಲ್ನ ದಕ್ಷಿಣ ಕಾಶ್ಮೀರ ಆಪರೇಷನ್ ಕಮಾಂಡರ್ ನವೀದ್ ಬಾಬು ಒಂದು ಕಾಲದಲ್ಲಿ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದ. 2017ರಲ್ಲಿ ಬಡಗಾಂವ್ನ ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರದ ಭದ್ರತೆಗೆ ನಿಯೋಜನೆಗೊಂಡಿದ್ದ. ಅಂದೇ ಎಕೆ-47 ರೈಫಲ್ ಹೊತ್ತು ಸೇವೆ ವೇಳೆಯೇ ಪರಾರಿಯಾಗಿದ್ದ. ಬಳಿಕ ಆತ ಹಿಜ್ಬುಲ್ ಉಗ್ರ ಸಂಘಟನೆ ಸೇರಿದ್ದಾನೆ ಎಂದು ತಿಳಿದುಬಂದಿತ್ತು. ಹಿಜ್ಬುಲ್ ಉಗ್ರ ಸಂಘಟನೆ ದಕ್ಷಿಣ ಕಾಶ್ಮೀರ ವಿಭಾಗೀಯ ಕಮಾಂಡರ್ ರಿಯಾಜ್ ನೈಕೂ ನಂತರದ ಉನ್ನತ ಸ್ಥಾನವನ್ನು ನವೀದ್ಗೆ ನೀಡಲಾಗಿತ್ತು. ಸಿಂಗ್ ವಿಚಾರಣೆ ಸದ್ಯ ಸಿಂಗ್ರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. "ಇದನ್ನೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಇತರ ಉಗ್ರರನ್ನು ವಿಚಾರಣೆ ನಡೆಸುವಂತೆಯೇ ಇವರನ್ನು ವಿಚಾರಣೆ ನಡೆಸಲಾಗುತ್ತದೆ," ಎಂಬುದಾಗಿ ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ತನಿಖೆಯ ವಿವರಗಳನ್ನು ನೀಡಲು ನಿರಾಕರಿಸಿರುವ ಅವರು, "ಪೊಲೀಸ್ ಅಧಿಕಾರಿ ಹಲವು ಉಗ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಆದರೆ ಅವರು ಬಂಧಿತರಾಗಿರುವ ಸನ್ನಿವೇಶ ಅತ್ಯಂತ ಘೋರ ಅಪರಾಧ. ಈ ಕಾರಣಕ್ಕೆ ಇತರ ಉಗ್ರರಂತೆಯೇ ವಿಚಾರಣೆಗೆ ಒಳಪಡಿಸಲಾಗುತ್ತಿದೆ,” ಎಂದಿದ್ದಾರೆ.
from India & World News in Kannada | VK Polls https://ift.tt/2tTzMYC