ಸುಳ್ಳು ವಯಸ್ಸು ನೀಡಿ ಸಿಕ್ಕಿ ಬಿದ್ದ ವಿಶ್ವಕಪ್ ಹೀರೊಗೆ ಒಂದು ವರ್ಷದ ನಿಷೇಧ!

ಹೊಸದಿಲ್ಲಿ: ನೀಡಿ ಸಿಕ್ಕಿ ಬಿದ್ದಿರುವ ಭಾರತದ ಯುವ ಪ್ರತಿಭಾವಂತ ಎಡಗೈ ಬ್ಯಾಟ್ಸ್‌ಮನ್ ಅವರಿಗೆ ರಣಜಿ ಟ್ರೋಫಿ ಕ್ರಿಕೆಟ್‌ನಿಂದ ಒಂದು ವರ್ಷದ ನಿಷೇಧವನ್ನು ಹೇರಲಾಗಿದೆ. 2018ರಲ್ಲಿ ಅಂಡರ್ 19 ವಿಶ್ವಕಪ್ ವಿಜೇತ ಭಾರತ ಕಿರಿಯರ ತಂಡದ ಸದಸ್ಯರಾಗಿರುವ ಮನ್‌ಜೋತ್ ಕಾಲ್ರಾ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದರಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದರು. ಅಂಡರ್ 16ಹಾಗೂ ಅಂಡರ್ 19 ಪಂದ್ಯಾವಳಿಗಳಲ್ಲಿ ಸುಳ್ಳು ವಯಸ್ಸಿನ ದಾಖಲೆಗಳನ್ನು ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮನ್‌ಜೋತ್ ಕಾಲ್ರಾ ಅವರ ಮೇಲೆ ಪದವಿಯಿಂದ ನಿರ್ಗಮಿಸಿರುವ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಒಂಬುಡ್ಸ್‌ಮ್ಯಾನ್, ರಣಜಿ ಟ್ರೋಫಿ ಆಡುವುದರಿಂದ ಒಂದು ವರ್ಷದ ನಿಷೇಧವನ್ನು ಹೇರಿದ್ದಾರೆ. ಅದೇ ಹೊತ್ತಿಗೆ ಇದೇ ಆರೋಪವನ್ನು ಎದುರಿಸುತ್ತಿರುವ ದಿಲ್ಲಿ ತಂಡದ ಉಪನಾಯಕ ನಿತೀಶ್ ರಾಣಾರನ್ನು ಸದ್ಯಕ್ಕೆ ಸುಮ್ಮನೆ ಬಿಡಲಾಗಿದೆ. ಅಲ್ಲದೆ ಜೂನಿಯರ್ ಮಟ್ಟದ ಸುಳ್ಳು ವಯಸ್ಸಿಗೆ ಸಂಬಂಧಿಸಿದಂತೆ ಮತ್ತಷ್ಟು ಪ್ರಮಾಣ ಪತ್ರ ನೀಡಲು ಅವಕಾಶ ನೀಡಲಾಗಿದೆ. ಸುಳ್ಳು ವಯಸ್ಸು ಆರೋಪ ಸಂಬಂಧ ಮಗದೋರ್ವ ಅಂಡರ್ 19 ಸ್ಟಾರ್ ಆಟಗಾರ ಶಿವಂ ಮಾವಿ ಪ್ರಕರಣವನ್ನು ಪರಿಶೀಲಿಸುತ್ತಿದೆ. ಸದ್ಯ ಮಾವಿ ಉತ್ತರ ಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವಿಚಾರಣಾಧಿಕಾರಿ ನಿವೃತ್ತ ನ್ಯಾಯಮೂರ್ತಿ ಬಾದ್ರ್ ದುರೇಜ್ ಅಹ್ಮದ್, ತಮ್ಮ ಅಧಿಕಾರವಾಧಿಯ ಕೊನೆಯ ದಿನದಂದು ಮಹತ್ವದ ತೀರ್ಪನ್ನು ಹೊರಡಿಸಿದ್ದಾರೆ. ಬಿಸಿಸಿಐ ದಾಖಲೆಗಳ ಪ್ರಕಾರ ಕಳೆದ ವಾರ ದಿಲ್ಲಿ ಅಂಡರ್ 23 ಪರ ಆಡಿರುವ ಮನ್‌ಜೋತ್ ಕಾಲ್ರಾರಿಗೆ 20 ವರ್ಷ 351 ದಿನ ವಯಸ್ಸಾಗಿದೆ. ಬಂಗಾಳ ವಿರುದ್ಧದ ಪಂದ್ಯದಲ್ಲಿ ಅಮೂಲ್ಯ 80 ರನ್ ಗಳಿಸಿ ಮಿಂಚಿದ್ದರು. ಶಿಖರ್ ಧವನ್ ಭಾರತ ತಂಡವನ್ನು ಸೇರುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿ ರಣಜಿ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಗಳಿದ್ದವು. ಆದರೆ ಇದೀಗ ಸುಳ್ಳು ವಯಸ್ಸು ಆರೋಪದಲ್ಲಿ ಸಿಕ್ಕಿ ಬಿದ್ದಿರುವ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ರಣಜಿ ಕನಸು ಕಮರಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2sG8eph

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...