ವಿವಾದಗಳಿಗೆ ನನ್ನ ಕುಟುಂಬವನ್ನು ಎಳೆದು ತರಬೇಡಿ: ರೋಹಿತ್ ಶರ್ಮಾ ನೇರ ನುಡಿ

ಹೊಸದಿಲ್ಲಿ: ಸದ್ಯ ವಿಶ್ರಾಂತಿಯಲ್ಲಿದ್ದು, ಕುಟುಂಬದ ಜೊತೆ ಸಂತೋಷದ ಸಮಯ ಕಳೆಯುತ್ತಿರುವ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ , ವಿವಾದಗಳಿಗೆ ತಮ್ಮ ಕುಟುಂಬವನ್ನು ಎಳೆದು ತರಬೇಡಿ ಎಂದು ನೇರ ಮಾತುಗಳನ್ನು ಆಡಿದ್ದಾರೆ. "ನಮ್ಮ ಕುಟುಂಬಗಳು ನಮಗೆ ಸಂತೋಷವನ್ನುಂಟು ಮಾಡಲು, ನಮ್ಮನ್ನು ಬೆಂಬಲಿಸಲು ಇಲ್ಲಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಬರೆಯುತ್ತಿರುವಾಗ ನನ್ನ ಕೆಲವು ಸ್ನೇಹಿತರು ಬಂದು ಹೇಳುತ್ತಿದ್ದರು. ನನ್ನನ್ನು ನಂಬಿ ಅಥವಾ ನಂಬದಿರಿ. ಈ ವೇಳೆಯಲ್ಲಿ ನಾನು ನಗು ಬೀರುತ್ತಿದ್ದೆ" ಎಂದು ರೋಹಿತ್ ವಿವರಿಸಿದರು. "ಆದರೆ ಅಂತಹ ಪ್ರವೃತ್ತಿ ಮುಂದುವರಿಯಿತು. ನನ್ನ ಕುಟುಂಬವನ್ನು ಎಳೆದು ತಂದರು. ನೀವು ನನ್ನ ಬಗ್ಗೆ ಮಾತನಾಡುತ್ತೀರಿ. ಆದರೆ ಪ್ರಾಮಾಣಿಕವಾಗಿಯೂ ನನ್ನ ಕುಟುಂಬವು ಬೇರೆ ಯಾವುದರ ಬಗ್ಗೆಯೂ ಕಾಳಜಿ ವಹಿಸದ ಕಾರಣ ಅವರನ್ನು ಎಳೆದು ತರಬೇಡಿ. ನನಗನಿಸುತ್ತದೆ ಕುಟುಂಬಗಳು ಜೀವನದ ಪ್ರಮುಖ ಅಂಶವಾಗಿದ್ದು, ವಿರಾಟ್ ಕೊಹ್ಲಿ ಸಹ ಅದೇ ರೀತಿ ಭಾವಿಸುತ್ತಿರಬೇಕು" ಎಂದು ಸೇರಿಸಿದರು. ಅದೇ ಹೊತ್ತಿಗೆ ಕುಟುಂಬಸ್ಥನಾಗಿರುವ ರೋಹಿತ್ ಶರ್ಮಾ ಇದೀಗ ಸಂಪೂರ್ಣವಾಗಿ ವಿಭಿನ್ನ ಆಟಗಾರ ಎಂಬುದನ್ನು ಹೇಳಿದರು. "ನಾನೀಗ ಯೋಚಿಸುವ ರೀತಿಯಲ್ಲಿ ವಿಭಿನ್ನ ರೋಹಿತ್ ಶರ್ಮಾ ಆಗಿದ್ದೇನೆ. ನನ್ನ ಜೀವನದಲ್ಲಿ ನನ್ನ ಪತ್ನಿ (ರಿತಿಕಾ) ಹಾಗೂ ಮಗಳು (ಸಮೈರಾ) ಇರುವ ಕಾರಣ ಉತ್ತಮ ಹಂತದಲ್ಲಿದ್ದೇನೆ. ಇತರರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತೆ ಮಾಡುತ್ತಿಲ್ಲ" ಎಂದರು. "ಪತ್ನಿ ಹಾಗೂ ಮಗಳು ನನಗೆ ಸಂತೋಷವನ್ನು ತುಂಬುತ್ತಾರೆ. ಇತರೆ ವಿಷಯಗಳ ಯೋಚಿಸುವುದರ ಬದಲು ಅದರೊಳಗೆ ಉಳಿದುಕೊಳ್ಳಲು ಬಯಸುತ್ತೇನೆ. ಇತರರು ಏನು ಕಾಮೆಂಟ್ ಮಾಡುತ್ತಾರೆ ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ. ನಿಜವಾಗಿಯೂ ನನ್ನ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ವಿಷಯಗಳಿಗೆ ಪ್ರತಿಕ್ರಿಯೆ ನೀಡುವ ವಯಸ್ಸನ್ನು ದಾಟಿದ್ದೇನೆ. ಸ್ಪಷ್ಟವಾಗಿ ಹೇಳುವುದಾದರೆ, ಇದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ" ಎಂದರು. 2019ನೇ ವರ್ಷ ರೋಹಿತ್ ಶರ್ಮಾ ಪಾಲಿಗೆ ಅತೀವ ಯಶಸ್ಸನ್ನು ತಂದುಕೊಟ್ಟಿತ್ತು. ಏಕದಿನ ವಿಶ್ವಕಪ್‌ನಲ್ಲಿ ದಾಖಲೆಯ ಐದು ಶತಕಗಳನ್ನು ಬಾರಿಸಿರುವ ರೋಹಿತ್, ಟೆಸ್ಟ್ ಆರಂಭಿಕನಾಗಿ ಯಶಸ್ಸು ಗಳಿಸಿದ್ದರಲ್ಲದೆ ದ್ವಿಶತಕ ಸಾಧನೆ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸುತ್ತಾ, "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬಹಳ ಹಿಂದೆಯೇ ಟೆಸ್ಟ್ ಕ್ರಿಕೆಟ್ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟಿದ್ದೆ. ಹಿಂದೆಲ್ಲ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚಿನ ಯಶಸ್ಸು ಗಳಿಸಬೇಕೆಂಬ ಯೋಚನೆ ಮಾಡುತ್ತಿದ್ದೆ. ತಾಂತ್ರಿಕತೆ ಬಗ್ಗೆ ಹೆಚ್ಚು ಯೋಚಿಸುವುದು ನನ್ನ ಆಟವನ್ನು ಆಡಲು ಸಹಕಾರಿಯಾಗುತ್ತಿರಲಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಬೇಕೆಂಬ ಹತಾಶೆ ಕಾಡುತ್ತಿತ್ತು. ಆದರೆ 2018-19ರ ಆಸೀಸ್ ಪ್ರಯಾಣದಲ್ಲಿ 'ಬಾಸ್, ಏನಾಗಬೇಕೋ ಅದು ಸಂಭವಿಸಲಿದೆ. ಹಾಗಾಗಿ ನಾನು ತಾಂತ್ರಿಕತೆ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ' ಎಂಬುದನ್ನು ನಿರ್ಧಾರ ಮಾಡಿಕೊಂಡೆ. ಅಂತಿಮವಾಗಿ ಅಲ್ಲಿ ಹೋಗಿ ನನ್ನ ಸಹ ಆಟಗಾರರೊಂದಿಗೆ ಪಂದ್ಯವನ್ನು ಆನಂದಿಸಬೇಕು" ಎಂದು ವಿವರಿಸಿದರು. ಟೆಸ್ಟ್ ಓಪನರ್ ಆಗಿ ದಕ್ಷಿಣ ಆಫ್ರಿಕಾ ವಿರುದ್ಧ ನನ್ನ ಕೊನೆಯ ಅವಕಾಶ ಎಂದು ಜನರು ಅಂದುಕೊಂಡಿದ್ದರು. ಆದರೆ ನಾನು ಹಾಗೆ ಯೋಚಿಸಿಲ್ಲ. ಹಾಗೊಂದು ವೇಳೆ ನನ್ನ ಮನೋಸ್ಥಿತಿಯು ಅದಾಗಿದ್ದರೆ ನನಗೆ ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಅದೇ ಹೊತ್ತಿಗೆ ಅವಕಾಶವನ್ನು ಸದುಪಯೋಗಪಡಿಸಬೇಕೆಂಬ ವಾಸ್ತವಾಂಶವನ್ನು ಅರಿತುಕೊಂಡಿದ್ದೆ ಎಂದರು. "ನೀವು ಕ್ರಿಕೆಟ್ ಆಡುವಾಗ ನಿಮ್ಮ ಸುತ್ತಲೂ ಮನಸ್ಸನ್ನು ಗೊಂದಲಗೊಳಿಸುವ ಸಾಕಷ್ಟು ವಿಷಯಗಳು ಹರಡಿರುತ್ತದೆ. ಇದರಿಂದ ಯಾವುದೇ ಸಮಸ್ಯೆ ಕಾಡುತ್ತಿಲ್ಲವೆಂಬ ವಾತಾವರಣವನ್ನು ರಚಿಸಬೇಕಿದೆ. ರಿಷಬ್ ಪಂತ್‌ಗೂ ಇದನ್ನೇ ಸಲಹೆ ಮಾಡಿದ್ದೇನೆ. ನಿಮ್ಮ ಅನುಮತಿಯಿಲ್ಲದೆ ಯಾವುದೇ ಕಲ್ಪನೆಗಳು ಬರುವುದಿಲ್ಲ. ಜನರು ಒಳ್ಳೆಯದನ್ನು, ಕೆಟ್ಟದನ್ನು ಹೇಳಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು" ಎಂದು ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2tBUrjE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...