ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್ ಸಿಗದೆ ಪರದಾಡುತ್ತಿದ್ದ ಪಾಕ್ ಮೂಲದ ಬಾಲಕಿ ಮಶಾಲ್ ಮಹೇಶ್ವರಿಗೆ ಸುಷ್ಮಾ ವಿದೇಶಾಂಗ ಸಚಿವರಾಗಿದ್ದಾಗ ಸೀಟು ಕೊಡಿಸಿದ್ದರು. 2016ರಲ್ಲಿ ಪಾಕ್ನಿಂದ ಕುಟುಂಬ ಸಮೇತ ಭಾರತಕ್ಕೆ ವಲಸೆ ಬಂದು ರಾಜಸ್ಥಾನದಲ್ಲಿ ನೆಲೆಸಿದ್ದ 17ರ ಹರೆಯದ ಮಹೇಶ್ವರಿ, ವೈದ್ಯೆಯಾಗುವ ಕನಸು ಕಂಡಿದ್ದಳು. ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಶೇ. 91ರಷ್ಟು ಅಂಕ ಗಳಿಸಿದ್ದಳು. ಆದರೂ ವಿದೇಶಿ ಪ್ರಜೆ ಎಂಬ ಕಾರಣಕ್ಕೆ ಆಕೆಗೆ ವೈದ್ಯಕೀಯ ಪ್ರವೇಶ ಪರೀಕ್ಷೆ (ಎಐಪಿಎಂಟಿ) ಬರೆಯಲೂ ಅವಕಾಶ ಸಿಕ್ಕಿರಲಿಲ್ಲ . ಅಲ್ಲದೆ, ಖಾಸಗಿ ಕಾಲೇಜುಗಳಲ್ಲಿ 1.5ರಿಂದ 2 ಕೋಟಿ ರೂ. ಡೊನೇಷನ್ ಬೇಡಿಕೆ ಇಡಲಾಗಿತ್ತು . ಆದರೂ, ತಂದೆ-ತಾಯಿಯಂತೆ ವೈದ್ಯಯಾಗುವ ಹಠದಿಂದ ಮಹೇಶ್ವರಿ ಸರಕಾರದ ನೆರವಿಗಾಗಿ ಮೊರೆ ಇಟ್ಟಳು. ಮಾಧ್ಯಮಗಳಲ್ಲಿ ಬಾಲಕಿಯ ಸಮಸ್ಯೆ ಬಗ್ಗೆ ತಿಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಕೆಯ ನೆರವಿಗೆ ಧಾವಿಸಿದ್ದರು. ರಾಜೇಶ್ವರಿ ವಿಚಾರದಲ್ಲಿ ಖುದ್ದು ಮುತುವರ್ಜಿ ವಹಿಸುವುದಾಗಿ ಟ್ವೀಟ್ ಮಾಡಿದ್ದ ಸುಷ್ಮಾ , ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿ ಕರೆ ಮಾಡಲು ಸೂಚಿಸಿದ್ದರು. ಬಾಲಕಿ ಕರೆ ಮಾಡಿದಾಗ, ಆಕೆಗೆ ಧೈರ್ಯ ಹೇಳಿದ್ದರು. ಫೋನ್ ನಂಬರ್ ಕೊಟ್ಟಿದ್ದ ಸಚಿವೆ ರಾಜೇಶ್ವರಿ ವಿಚಾರದಲ್ಲಿ ಖುದ್ದು ಮುತುವರ್ಜಿ ವಹಿಸುವುದಾಗಿ ಟ್ವೀಟ್ ಮಾಡಿದ ಸುಷ್ಮಾ, ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿ ಕರೆ ಮಾಡಲು ಸೂಚಿಸಿದ್ದರು. ಬಾಲಕಿ ಕರೆ ಮಾಡಿದಾಗ, ಆಕೆಗೆ ಸಾಂತ್ವನ ಹೇಳಿದ್ದಲ್ಲದೆ, ಆಕೆಯ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಕರ್ನಾಟಕದಲ್ಲಿ ಸೂಕ್ತ ವ್ಯವಸ್ಥೆ ಮಾಡಿಸಿದ್ದರು. 'ನನ್ನ ಪೋಷಕರೂ ವೈದ್ಯರು. ಹಾಗಾಗಿ ನಾನೂ ವೈದ್ಯೆಯಾಗಬೇಕು. ಜನರ ಪ್ರಾಣ ಉಳಿಸಿ ಅವರ ಸೇವೆ ಮಾಡುವುದು ನನ್ನ ಕನಸು,'ಎನ್ನುತ್ತಾಳೆ ಪಾಕ್ ಬಾಲಕಿ .
from India & World News in Kannada | VK Polls https://ift.tt/2Ku0s6Z