ಹೊಸದಿಲ್ಲಿ: ಬಿಜೆಪಿ ಹಿರಿಯ ನಾಯಕ, ರಾಜಕೀಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ, ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನಕ್ಕೆ ತೀವ್ರ ವ್ಯಕ್ತಪಡಿಸಿದ್ದಾರೆ. ಅತ್ಯಂತ ಆಪ್ತ ಸಹೋದ್ಯೋಗಿಯಾಗಿಯಲ್ಲಿ ಒಬ್ಬರಾಗಿದ್ದ ಅವರು, 80ರ ದಶಕದಲ್ಲಿ ಪಕ್ಷಕ್ಕೆ ಸೇರಿದ್ದ ಯುವ ಪಡೆಯಲ್ಲಿ ಒಬ್ಬರಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಅತ್ಯಂತ ಚುರುಕಿನ ಹೆಣ್ಣುಮಗಳಾಗಿದ್ದ ಅವರು, ಅತ್ಯಂತ ಕಡಿಮೆ ಸಮಯದಲ್ಲಿ ಪಕ್ಷದ ಪ್ರಮುಖ ನಾಯಕರ ಪಟ್ಟಿಯಲ್ಲಿ ಸೇರಿದ್ದರು. ಪಕ್ಷ ನಿಷ್ಠೆ ಹಾಗೂ ಕರ್ತವ್ಯದ ಕಡೆಗೆ ಅವರಿಗಿದ್ದ ಬದ್ಧತೆ ಎಲ್ಲರಿಗೂ ಮಾದರಿ. ಎಲ್ಲ ಮಹಿಳೆಯರಿಗೆ ಆಕೆ ಅನುಕರಣೀಯರು ಎಂದು ಅಡ್ವಾಣಿ ಹೇಳಿದ್ದಾರೆ. ನನ್ನ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಅಡ್ವಾಣಿ ಹೇಳಿದ್ದಾರೆ. ವಾಗ್ಮಿ, ವಾಕ್ಚತುರೆಯಾಗಿದ್ದ ಅವರು, ವಿಚಾರಗಳನ್ನು ಅತ್ಯಂತ ಸ್ಪಷ್ಟ ಹಾಗೂ ಸ್ಫುಟವಾದ ಶಬ್ಧಗಳಿಂದ ತಿಳಿಸುವ ಶಕ್ತಿ ಹೊಂದಿದ್ದರು. ಬಿಜೆಪಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಅವರು ಬಿಜೆಪಿ ಸೇರಿ, ಆ ಬಳಿಕ ಪಕ್ಷಕ್ಕೆ ತೋರಿದ ನಿಷ್ಠೆ ಎಂದಿಗೂ ಅಜರಾಮರ ಎಂದು ಅಡ್ವಾಣಿ ಹೇಳಿದ್ದಾರೆ. ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬದ ದಿನ, ನನಗಿಷ್ಟವಾದ ಚಾಕಲೇಟ್ ಕೇಕ್ ತಂದು, ಶುಭಾಶಯ ಕೋರುತ್ತಿದ್ದ ಸುಷ್ಮಾ ಇನ್ನಿಲ್ಲ ಎಂಬುದೇ ಬೇಸರದ ಸಂಗತಿ. ಎಲ್ಲರಲ್ಲೂ ವಿನಯ ಹಾಗೂ ಪ್ರೀತಿಯಿಂದ ಕಾಣುತ್ತಿದ್ದ ಸುಷ್ಮಾ ಅವರನ್ನು ನಾಡು ಮರೆಯಲಾರದು. ಅವರ ಅಗಲಿಕೆಯಿಂದ ದೇಶ ಅಪ್ರತಿಮ ನಾಯಕಿಯನ್ನು ಕಳೆದುಕೊಂಡಿದೆ. ನಾನು ಸುಷ್ಮಾ ಅವರನ್ನು ತುಂಬಾ ನೆನಪಿಸಿಕೊಳ್ಳಲಿದ್ದೇನೆ. ಅವರ ಅಗಲಿಕೆ ತೀರಾ ನೋವು ತಂದಿದೆ ಎಂದು ಅಡ್ವಾಣಿ ಹೇಳಿದ್ದಾರೆ.
from India & World News in Kannada | VK Polls https://ift.tt/2YMSj2F