ಹೊಸದಿಲ್ಲಿ: ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾಪಡೆ ಅಧಿಕಾರಿ ರಕ್ಷಣೆಗೆ ಪಣ ತೊಟ್ಟಿರುವ ಹರೀಶ್ ಸಾಳ್ವೆ ಅವರಿಗೆ ಮಾಜಿ ವಿದೇಶಾಂಗ ಸಚಿವೆ ಕೊನೆಯುಸಿರೆಳೆಯುವ 1 ಗಂಟೆ ಮೊದಲು ಕರೆ ಮಾಡಿ, ಜಾಧವ್ ಕೇಸಿನ 1 ರೂ. ಫೀಸನ್ನು ಪಡೆಯುವಂತೆ ವಿನಂತಿಸಿದ ಭಾವನಾತ್ಮಕ ವಿಚಾರ ಎಲ್ಲರ ಹೃದಯ ತಟ್ಟಿದೆ. ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ಕುಲಭೂಷಣ್ ಪರ ವಾದ ಮಂಡಿಸುತ್ತಿರುವ ಹರೀಶ್ ಸಾಳ್ವೆ ಅವರು ಸುಷ್ಮಾ ಸ್ವರಾಜ್ ಅವರು ನಮ್ಮನ್ನು ಅಗಲುವ ಒಂದು ಗಂಟೆ ಮೊದಲು ಕರೆ ಮಾಡಿ ಮಾತನಾಡಿದ್ದರು ಎಂದು ಟೈಮ್ಸ್ ನೌಗೆ ತಿಳಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರ ಈ ಕರ್ತವ್ಯ ಪ್ರಜ್ಞೆ ಮತ್ತು ಅಧಿಕಾರದಿಂದ ಹಿಂದೆ ಸರಿದಿದ್ದರು ವಿದೇಶಾಂಗ ವ್ಯವಹಾರಗಳ ಬಗ್ಗೆ ಹೊಂದಿದ್ದ ಜವಾಬ್ದಾರಿಗೆ ಜನತೆ ತಲೆದೂಗಿದೆ. ನಾನು ಸುಷ್ಮಾ ಅವರ ಜತೆ ರಾತ್ರಿ 8.50ಕ್ಕೆ ಮಾತನಾಡಿದ್ದೇನೆ. ಸಂವಾದ ಬಹಳ ಭಾವನಾತ್ಮಕವಾಗಿತ್ತು. ನನ್ನನ್ನು ಭೇಟಿ ಮಾಡಲು ಬರುತ್ತೇನೆ ಎಂದು ಹೇಳಿದ್ದರು. ನೀವು ಗೆದ್ದ ಪ್ರಕರಣದ ಶುಲ್ಕ 1 ರೂ. ಕೊಡಲು ಬಾಕಿಯಿದೆ ಎಂದು ತಿಳಿಸಿದ್ದರು. ಈ ಅಮೂಲ್ಯವಾದ ಫೀಸನ್ನು ಪಡೆಯಲು ನಿಮ್ಮ ಕಚೇರಿಗೆ ಬರುತ್ತೇನೆ ಎಂದು ತಿಳಿಸಿದ್ದೆ. ನಾಳೆ 6 ಗಂಟೆಗೆ ಬರುವಂತೆ ವಿನಂತಿಸಿದ್ದರು ಎಂದು ಸಾಳ್ವೆ ವಿವರಿಸಿದ್ದಾರೆ. ಕಳೆದ ತಿಂಗಳು ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಕೋರ್ಟ್ನ ನಿಯಮಗಳನ್ನು ಪಾಕಿಸ್ತಾನ ಮುರಿದಿದ್ದು, ಗಲ್ಲು ಶಿಕ್ಷೆಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು. ಸೇನಾ ನ್ಯಾಯಾಲಯಕ್ಕೆ ಪ್ರಕರಣವನ್ನು ಹಸ್ತಾಂತರಿಸಬೇಕು ಎಂದು ವಾದಿಸಿದ್ದರು. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರ ವಾದಿಸಲು ಹರೀಶ್ ಸಾಳ್ವೆ 1 ರೂ. ಫೀಸು ಕೇಳಿದ್ದಾರೆ.
from India & World News in Kannada | VK Polls https://ift.tt/2M4zqq5